Webdunia - Bharat's app for daily news and videos

Install App

ಫೇಸ್‌ಬುಕ್ ಸುಂದರಿಯರಿಂದ ದೂರವಿರಿ, ಇಲ್ಲ ನಿಮ್ಮ ಶಿರಚ್ಛೇದನ ಖಚಿತ

Webdunia
ಶನಿವಾರ, 18 ಫೆಬ್ರವರಿ 2017 (13:19 IST)
ಫೇಸ್‌ಬುಕ್‌ನಲ್ಲಿ ಸುಂದರ ಮುಖಾರವಿಂದದ ಹುಡುಗಿಯರ ಜತೆ ಸಲಿಗೆಯಿಂದಿದ್ದೀರಾ? ನಿಮ್ಮ ಉತ್ತರ ಹೌದೆಂದಾದಲ್ಲಿ ನೀವು ಎಚ್ಚೆತ್ತುಕೊಳ್ಳಲೇಬೇಕಾದ ಸಮಯವಿದು. 
ಯಸ್, ವಿಶ್ವದ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆ ಐಸಿಸ್ ಈ ಸುಂದರ ಯುವತಿಯರನ್ನು ತನ್ನ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ವೈರಿಗಳ ತಲೆ ಕತ್ತರಿಸಿ ಅಂತರ್ಜಾಲದ ಮೂಲಕ ಅದನ್ನು ಬಿತ್ತರಿಸಿ ಜಗತ್ತಿಗೆ ಭಯ ಹುಟ್ಟಿಸಿರುವ ಈ ಮೂಲಭೂತವಾದಿ ಸಂಘಟನೆ ಮತ್ತೀಗ ಫೇಸ್‌ಬುಕ್ ಮೂಲಕ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಆಕರ್ಷಣೀಯ ಯುವತಿಯರಿಗೆ ಭಯೋತ್ಪಾದನೆ ತರಬೇತಿ ನೀಡುತ್ತಿರುವ ಐಸಿಎಸ್ ಆ ಮೂಲಕ ಯುವಕರನ್ನು ತನ್ನ ಬಲೆಗೆ ಕೆಡವುತ್ತಿದೆ. ಅದಕ್ಕೂ ಮೊದಲು ಸುಂದರ ಯುವತಿಯರ ಬ್ರೈನ್‌ವಾಶ್ ಮಾಡಿ ಅವರನ್ನು ತನ್ನ ಕಡೆ ಸೆಳೆಯುತ್ತಿದೆ. 
 
ಇತ್ತೀಚಿಗೆ ಐಸಿಸ್ ಸೇರಿದ್ದ 17 ವರ್ಷದ ಯುವತಿ ಕಾದಿಜಾ ಸುಲ್ತಾನಾ ವಾಯುದಾಳಿಯಲ್ಲಿ ದುರ್ಮರಣವನ್ನಪ್ಪಿದ್ದಾಳೆ. ಆಕೆಯ ಇಬ್ಬರು ಸ್ನೇಹಿತರು ಸಹ ಬದುಕುಳಿದಿರುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ.
 
ಸುಲ್ತಾನರ ಮುಗ್ಧ ಪೋಷಕರು ಹೇಳುವ ಪ್ರಕಾರ ಅಮೀರಾ ಅಬ್ಬಾಸಿ ಮತ್ತು ಶಮೀಮಾ ಬೇಗಮ್ ಸಂಪರ್ಕಕ್ಕೆ ಬಂದ ಮೇಲೆ ಮಗಳ ವರ್ತನೆಯಲ್ಲಿ ಬದಲಾವಣೆಯಾಗುತ್ತಾ ಬಂತು. ಈಸ್ಟಕ್ ಹಬ್ಬದ ಸಂದರ್ಭದಲ್ಲಿ ಆಕೆ ಏಕಾಏಕಿ ಮನೆಯಿಂದ ನಾಪತ್ತೆಯಾದಳು. ಆ ಸಂದರ್ಭದಲ್ಲಿ ಆಕೆಯ ಸ್ನೇಹಿತರು ಸಹ ಕಾಣದಾಗಿದ್ದರು. ಅಂತರಾಷ್ಟ್ರೀಯ ಪೊಲೀಸರಿಂದ ಈ ಮೂವರು ಐಸಿಸ್ ಸೇರಿರುವುದು ಬೆಳಕಿಗೆ ಬಂತು. ಆದರೆ ಅವರಿಗೆ ಎಷ್ಟರ ಮಟ್ಟಿಗೆ ಬ್ರೈನ್‌ವಾಶ್ ಮಾಡಲಾಗಿತ್ತೆಂದರೆ ಎಷ್ಟೇ ಭಾವನಾತ್ಮಕ ಮನವಿ ಮಾಡಿದರೂ ಮೂವರು ಹಿಂತಿರುಗಲು ಒಪ್ಪಲಿಲ್ಲ.   
 
ಐಸಿಸ್ ಪಾಳೆಯ ಸೇರಿದ್ದ ಈ ಮೂವರು ಅಲ್ಲಿ ಉಗ್ರರನ್ನು ಮದುವೆಯಾಗಿ, ಅವರ ವಿಚಾರಧಾರೆಗೆ ಅನುಸಾರವಾಗಿ ಆದರ್ಶ ಪತ್ನಿಯರಾಗಿ ಬದುಕು ಸಾಗಿಸ ಹತ್ತಿದ್ದರು. 
 
ಈ ಮೂವರು ಯುವತಿಯರಷ್ಟೇ ಅಲ್ಲ, ಇಂತಹ ಸಾವಿರಾರು ಯುವತಿಯರು ಐಸಿಸ್ ಬಲೆಯಲ್ಲಿ ಬಿದ್ದು ಹದಿಹರೆಯದಲ್ಲೇ ಹಾದಿ ತಪ್ಪಿದ್ದಾರೆ, 2015ರ ಸಾಲಿನಲ್ಲಿ ಸುಮಾರು 56 ಯುವತಿಯರು ಇದೇ ರೀತಿಯಲ್ಲಿ ಲಂಡನ್‌ನಿಂದ ಐಸಿಸ್ ಮುಖ್ಯತಾಣವಾದ ಸಿರಿಯಾಕ್ಕೆ ಪಲಾಯನ ಮಾಡಿದ್ದಾರೆ. ಯಾವುದೋ ಪ್ರಭಾವಕ್ಕೆ ಒಳಗಾಗಿ ಹಾದಿ ತಪ್ಪುವ ಈ ಸಣ್ಣ ಪ್ರಾಯದ ಯುವತಿಯರಿಗೆ ಅಲ್ಲಿಗೆ ಹೋದ ಮೇಲಷ್ಟೇ ತಾವು ಎಂತಹ ಕೂಪದಲ್ಲಿ ಬಿದ್ದೆವೆಂಬುದು ಅರ್ಥವಾಗುತ್ತದ. ಆದರೆ ಅಲ್ಲಿಗೆ ಕಾಲ ಮಿಂಚಿ ಹೋಗಿರುತ್ತದೆ. ಹೋಗುವ ಹಾದಿಯಷ್ಟೇ ಅವರಿಗೆ ನಿಚ್ಚಳವಾಗಿರುತ್ತದೆ. ಅಲ್ಲಿರುವುದು ಕೇವಲ ಒನ್ ವೇ. ಹಿಂತಿರುಗುವ ಪ್ರಶ್ನೆಯೇ ಇಲ್ಲ. ಅವರ ಶವ ಕೂಡ ವಾಪಸ್ಸಾಗುವುದಿಲ್ಲ. ಅವರ ಮುಂದಿನ ಪಯಣ ನೇರವಾಗಿ ಯಮಪುರಿಗೆ. ಅದು ಕೂಡ ಕರಾಳ ಸಾವು.
 
ಸುಲ್ತಾನಾ ಮತ್ತು ಆಕೆಯ ಸ್ನೇಹಿತರ ಪೋಷಕರ ವಕೀಲರ ಪ್ರಕಾರ ಶಮೀಮಾ ಮತ್ತು ಅಮೀರಾ ಇನ್ನು ಬದುಕಿರಬಹುದು. ಕಳೆದ ವರ್ಷ ತನ್ನ ಸಹೋದರಿಗೆ ಫೋನ್ ಕರೆ ಮಾಡಿದ್ದ ಕಾದಿಜಾ ಅಲ್ಲಿಂದ ಮರಳಲು ಬಯಸಿರುವುದಾಗಿ ಹೇಳಿದ್ದಳು. ಆದರೆ ಆ ಯೋಜನೆಯನ್ನು ಅರ್ಧಕ್ಕೆ ಕೈ ಬಿಟ್ಟಿದ್ದಳು. ಕಾರಣ ಆಕೆಯ ಪಾಳೆಯದಲ್ಲಿದ್ದ ಯುವತಿಯೋರ್ವಳು ಪರಾರಿಯಾಗಲು ಯತ್ನಿಸಿದಾಗ ಆಕೆಯನ್ನು ಸೆರೆ ಹಿಡಿದು ಬಹಿರಂಗವಾಗಿ ತಲೆ ಕತ್ತರಿಸಲಾಗಿತ್ತು. ಇದಾದ 5 ತಿಂಗಳ ಬಳಿಕ ರಷ್ಯಾದ ಸೈನಿಕರು ನಡೆಸಿದ ವಾಯುದಾಳಿಯಲ್ಲಿ ಸುಲ್ತಾನಾ ಸಾವನ್ನಪ್ಪಿದ್ದಳು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ವಾರಂತ್ಯಕ್ಕೆ ಮಳೆ ಬರುವ ಸಾಧ್ಯತೆ ಎಷ್ಟಿದೆ, ಇಲ್ಲಿದೆ ಹವಾಮಾನ ವರದಿ

ಏರ್‌ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ, ತಪ್ಪಿದ ಅವಘಡ‌

ಜಗನ್ನಾಥನ ದರ್ಶನಕ್ಕಾಗಿ ಡೊನಾಲ್ಡ್‌ ಟ್ರಂಪ್ ಆಹ್ವಾನವನ್ನೇ ತಿರಸ್ಕರಿಸಿದೆ: ನರೇಂದ್ರ ಮೋದಿ

ಹೀಗಾದ್ರೆ ಯುವಕರ ಕತೆ ಏನು, ಮಗನಿಗೆ ನಿಶ್ಚಿಯವಾಗಿದ್ದ ಯುವತಿಯನ್ನೇ ಕೈಹಿಡಿದ ತಂದೆ

ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಆರೋಗ್ಯದಲ್ಲಿ ಚೇತರಿಕೆ: ಮಹಿಳೆಗೆ ಒತ್ತಡ, ದೂರು

ಮುಂದಿನ ಸುದ್ದಿ
Show comments