Webdunia - Bharat's app for daily news and videos

Install App

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಹತ್ಯೆ

Webdunia
ಶುಕ್ರವಾರ, 15 ಸೆಪ್ಟಂಬರ್ 2017 (16:46 IST)
ಅಮೆರಿಕದ ಕನ್ಸಾಸ್`ನಲ್ಲಿ ಮತ್ತೊಬ್ಬ ಭಾರತೀಯನ ಹತ್ಯೆ ನಡೆದಿದೆ. ತೆಲಂಗಾಣ ಮೂಲದ ಮನೋವೈದ್ಯ ಅಚ್ಯುತಾ ರೆಡ್ಡಿಯನ್ನ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೇ ಇರಿದು ಕೊಂದಿದ್ದಾನೆ.
 

ಬುಧವಾರ ರಾತ್ರಿ ವೈದ್ಯನನ್ನ ಇರಿದು ಕೊಲೆ ಮಾಡಲಾಗಿದೆ. ವೈದ್ಯರನ್ನ ಹತ್ಯೆ ಮಾಡಿದ 21 ವರ್ಷದ ಉಮರ್ ರಶೀದ್ ದತ್`ನನ್ನ ಬಂಧಿಸಲಾಗಿದ್ದು, ಬಂಧಿತನು ಸಹ ಇಂಡೋ ಅಮೆರಿಕನ್ ಎಂದು ತಿಳಿದುಬಂದಿದೆ. ಉಮರ್ ರಶೀದ್ ದತ್ ಬಗ್ಗೆ ಬಲ್ಲ ಅವರ ನೆರೆಹೊರೆಯವರು ಹೇಳುವ ಪ್ರಕಾರ, ದತ್ ತುಂಬಾ ಶಾಂತವಾಗಿ, ಒಳ್ಳೆಯವನಾಗಿರುತ್ತಿದ್ದ. ಆತ ಇಂತಹ ಕೃತ್ಯ ಎಸಗಿದ್ದಾನೆಂದರೆ ನಂಬಲು ಅಸಾಧ್ಯ.

ವಿದ್ಯಾಭ್ಯಾಸದ ಕುರಿತಾಗಿ ದತ್ ತನ್ನ ಪೋಷಕರು ಜೊತೆ ಮನಸ್ತಾಪ ಹೊಂದಿದ್ದ. ಆತನನ್ನ ಭಾರತಕ್ಕೆ ಕಳುಹಿಸುವ ಚಿಂತನೆಯೂ ನಡೆದಿತ್ತು ಎನ್ನಲಾಗಿದೆ.  ಈ ವರ್ಷ ಅಮೆರಿಕದ ಕನ್ಸಾಸ್`ನಲ್ಲಿ ಕೊಲೆಯಾದ 2ನೇ ಭಾರತೀಯ ಅಚ್ಯುತಾ ರೆಡ್ಡಿ. ಫೆಬ್ರವರಿಯಲ್ಲಿ ತೆಲಂಗಾಣ ಮೂಲದವರೇ ಆದ ಶ್ರೀನಿವಾಸ್ ಕುಬೋಟ್ಲಾ ಅವರನ್ನ ಗುಂಡಿಕ್ಕಿ ಕೊಲ್ಲಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಮುಂದಿನ ಸುದ್ದಿ
Show comments