Webdunia - Bharat's app for daily news and videos

Install App

ಅಮೇರಿಕದಲ್ಲಿ ಭಾರತೀಯ ಬಾಲಕಿ ಸಾವು, ಮಲತಾಯಿ ಬಂಧನ

Webdunia
ಸೋಮವಾರ, 22 ಆಗಸ್ಟ್ 2016 (11:09 IST)
ಅಮೇರಿಕಾದ ನ್ಯೂಯಾರ್ಕ್ ನಗರದ ನಿವಾಸಿಯಾಗಿದ್ದ ಭಾರತೀಯ ಮೂಲದ 9 ವರ್ಷದ ಬಾಲಕಿ ಅನುಮಾನಾಸ್ಪದ ರೀತಿಯಲ್ಲಿ ತನ್ನದೇ ಮನೆಯಲ್ಲಿ ಶವವಾಗಿ ಪತ್ತೆಯಾದ ದಾರುಣ ಘಟನೆ ನಡೆದಿದೆ. ಮೃತಳನ್ನು ಅಶ್‌ದೀಪ್ ಕೌರ್ ಎಂದು ಗುರುತಿಸಲಾಗಿದ್ದು ಮಲತಾಯಿಯಿಂದಲೇ ಆಕೆ ಕೊಲೆಯಾಗಿದ್ದಾಳೆ ಎಂದು ಶಂಕಿಸಲಾಗಿದೆ. 
 
ಕೇವಲ 3 ತಿಂಗಳ ಹಿಂದೆ ಕೌರ್ ತನ್ನ ತಂದೆ ಸುಖ್‌ಜಿಂದರ್ ಸಿಂಗ್ ಮತ್ತು ಮಲತಾಯಿ ಅರ್ಜುನ್ ಸಮ್ಧಿ ಪರ್ದಾಸ್ (55) ಜತೆ ಅಮೇರಿಕಕ್ಕೆ ತೆರಳಿದ್ದಳು. ಇನ್ನೊಂದು ದಂಪತಿಯ ಜತೆ ಫ್ಲಾಟ್ ಶೇರ್ ಮಾಡಿಕೊಂಡು ಕುಟುಂಬ ನ್ಯೂಯಾರ್ಕ್‌ನಲ್ಲಿ ವಾಸವಾಗಿತ್ತು.
 
ಶುಕ್ರವಾರ ಬಾಲಕಿ ತನ್ನ ಮನೆಯ ಬಾತ್ ಟಬ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು ಆಕೆಯ ಮೂಗಿನ ಮೇಲೆ ಗಾಯದ ಗುರುತುಗಳಿವೆ. ಮಲತಾಯಿಯ  ಉಸಿರುಗಟ್ಟಿಸಿ ಕೊಲೆಗೈದಿರಬಹುದೆಂಬ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿದೆ. 
 
ಅದೇ ಮನೆಯಲ್ಲಿ ವಾಸವಿದ್ದ ಹೌಸ್‌ಮೇಟ್ ತನ್ನ ಮಲತಾಯಿ ಜತೆ ಬಾತ್ ರೂಮ್‌ಗೆ ಹೋಗುತ್ತಿರುವುದನ್ನು ಕಂಡಿದ್ದಳು. ಸ್ವಲ್ಪ ಸಮಯದ ಬಳಿಕ ಆಕೆ ಅಲ್ಲಿಂದ ಒಬ್ಬಳೇ ಹೊರಬಂದಿದ್ದು ಮನೆಯಿಂದ ಹೊರಗೆ ಹೋಗಿದ್ದಾಳೆ. ಹೋಗುವಾಗ ಅಶ್‌ದೀಪ್ ಎಲ್ಲಿ ಎಂದು ಕೇಳಿದ್ದಕ್ಕೆ ಆಕೆ ಸ್ನಾನ ಮಾಡುತ್ತಿದ್ದಾಳೆ ಎಂದು ಹೇಳಿದ್ದಾಳೆ. ಇವೆಲ್ಲ ಆಕೆಯೇ ಹತ್ಯೆ ಮಾಡಿರಬಹುದೆಂಬುದನ್ನು ಪುಷ್ಠೀಕರಿಸಿವೆ.
 
ಎಷ್ಟು ಹೊತ್ತಾದರೂ ಬಾಲಕಿ ಹೊರಬರದಿದ್ದಾಗ ಹೌಸ್‌ಮೇಟ್ ಒಳಗೆ ಹೋಗಿ ನೋಡಿದ್ದಾಳೆ. ಅಲ್ಲಿನ ಬಾತ್ ಟಬ್‌ನಲ್ಲಿ ಬಾಲಕಿ ಉಸಿರಿಲ್ಲದೇ ಬಿದ್ದಿದ್ದನ್ನು ಕಂಡು ಆಕೆ ಆಘಾತಗೊಂಡಿದ್ದಾಳೆ. ಆಕೆ ಸತ್ತು ಹಲವು ಗಂಟೆಗಳಾದರೂ ಮಲತಾಯಿ ಮಾತ್ರ ಪತ್ತೆಯೇ ಇರಲಿಲ್ಲ. ಶೋಧ ನಡೆಸಿದ ಪೊಲೀಸರು ಆಕೆಯನ್ನು ಪತ್ತೆ ಹಚ್ಚಿ ವಿಚಾರಣೆಗೊಳಪಡಿಸಿದ್ದಾರೆ. 
 
ಬಾಲಕಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸಿದ್ದ ಪರ್ದಾಸ್ ಸದಾ ಆಕೆಗೆ ಹಿಂಸೆ ನೀಡುತ್ತಿದ್ದಳು ಎಂದು ಸಂಬಂಧಿಕರು ಆರೋಪಿಸಿದ್ದಾರೆ.
 
ನನಗೆ ಆಕೆಯ ಜತೆ ಇರಲು ಇಷ್ಟವಿಲ್ಲ. ಹೊಡೆಯುತ್ತಾಳೆ ಎಂದು ಮಗು ಎಂದು ಮಗು ಹೇಳುತ್ತಿತ್ತು ಎಂದು ಮೃತಳ ಚಿಕ್ಕಪ್ಪ ದೂರಿದ್ದಾರೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ಪಾಕ್‌ಗೆ ಸಹಾಯ ಮಾಡಿದ್ದಕ್ಕೆ ಟರ್ಕಿಗೆ ತಕ್ಕ ಉತ್ತರ ಕೊಟ್ಟ ಭಾರತ

ಭಯೋತ್ಪಾದಕರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನು ಕಳುಹಿಸಿದೆವು: ಸೋಫಿಯಾ ಖುರೇಷಿ ವಿರುದ್ಧದ ವಿಜಯ್ ಶಾ ಹೇಳಿಕೆಗೆ ಆಕ್ರೋಶ

ಮೂಕ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಅರೋಪ, ನ್ಯಾಯಕ್ಕಾಗಿ ಶವವಿಟ್ಟು ಪ್ರತಿಭಟನೆ

ಅರುಣಾಚಲ ಪ್ರದೇಶದ ಮೇಲೆ ಹಕ್ಕು ಚಲಾಯಿಸಲು ಬಂದ ಚೀನಾಗೆ ಖಡಕ್‌ ಉತ್ತರ ಕೊಟ್ಟ ಭಾರತ

ಭಾರತದ ಮೇಲಿನ ದಾಳಿಗೆ ಪಾಕ್‌ಗೆ ಸಹಾಯ ಮಾಡಿದ ಟರ್ಕಿ, ಕಳುಹಿಸಿದ ಡ್ರೋನ್‌ಗಳ ಲೆಕ್ಕಾ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments