Webdunia - Bharat's app for daily news and videos

Install App

Nuclear leak: ಪಾಕಿಸ್ತಾನದಲ್ಲಿ ಈಗ ಎಲ್ಲರಿಗೂ ವಾಂತಿ, ತಲೆನೋವು: ಎಲ್ಲಾ ಭಾರತೀಯ ಸೇನೆ ಇಫೆಕ್ಟ್

Krishnaveni K
ಮಂಗಳವಾರ, 13 ಮೇ 2025 (15:02 IST)
Photo Credit: X
ಇಸ್ಲಾಮಾಬಾದ್: ಭಾರತದ ಜೊತೆಗೆ ಪಾಕಿಸ್ತಾನ ಸಂಘರ್ಷ ಕೊನೆಗೊಳಿಸಲು ಪ್ರಮುಖ ಕಾರಣವೇನೆಂದು ಈಗ ಒಂದೊಂದಾಗಿ ಬಹಿರಂಗವಾಗುತ್ತಿದೆ. ಪಾಕಿಸ್ತಾನದಲ್ಲಿ ಈಗ ಎಲ್ಲರಿಗೂ ವಾಕರಿಕೆ, ತಲೆನೋವು ಇತ್ಯಾದಿ ಆರೋಗ್ಯ ಸಮಸ್ಯೆಯಾಗುತ್ತಿದೆ. ಇದೆಲ್ಲವೂ ಭಾರತೀಯ ಸೇನೆಯ ದಾಳಿಯ ಇಫೆಕ್ಟ್.

ಇತ್ತೀಚೆಗೆ ಪಾಕಿಸ್ತಾನದ ಸರ್ಗೋದಾ ವಾಯುನೆಲೆ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಬೆಚ್ಚಿಬಿದ್ದ ಪಾಕಿಸ್ತಾನ ಕದನ ವಿರಾಮ ಏರ್ಪಡಿಸಲು ಅಮೆರಿಕಾ ಮೊರೆ ಹೋಗಿತ್ತು. ಭಾರತದ ದಾಳಿಯಿಂದ ಬೆಚ್ಚಿಬಿದ್ದ ಅಮೆರಿಕಾ ಕೂಡಾ ತಕ್ಷಣವೇ ಕದನವಿರಾಮ ಘೋಷಿಸಲು ಭಾರತದ ಮನವೊಲಿಸಿತು ಎನ್ನಲಾಗಿದೆ.

ಇದರ ಹಿಂದೆ ಪ್ರಮುಖ ಕಾರಣವೊಂದಿದೆ. ಸರ್ಗೋದಾ ವಾಯುನೆಲೆ ಸಮೀಪವೇ ಕಿರಾನಾ ಬೆಟ್ಟ ಪ್ರದೇಶವಿದ್ದು ಇಲ್ಲಿಯೇ ಪಾಕಿಸ್ತಾನ, ಅಮೆರಿಕಾ ಸಹಾಯದೊಂದಿಗೆ ಅಣ್ವಸ್ತ್ರಗಳನ್ನು ಅಡಗಿಸಿಟ್ಟಿದೆ. ಭಾರತ ನಡೆಸಿದ ದಾಳಿಯಲ್ಲಿ ಅಣ್ವಸ್ತ್ರ ನೆಲೆಗೂ ಹಾನಿಯಾಗಿದ್ದು ಇದೇ ಕಾರಣಕ್ಕೆ ಇದೀಗ ವಿಕಿರಣ ಹರಡಲು ಆರಂಭವಾಗಿದೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ.

ಹೀಗಾಗಿಯೇ ಈಗ ಪಾಕಿಸ್ತಾನದಲ್ಲಿ  ಈ ಭಾಗದ ಜನರಿಗೆ ವಾಕರಿಕೆ, ತಲೆನೋವು, ತಲೆಸುತ್ತುವುದು ಸೇರಿದಂತೆ ವಿಕಿರಣದಿಂದಾಗಿ ಹಲವು ಆರೋಗ್ಯ ಸಮಸ್ಯೆಯುಂಟಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಈ ಭಾಗದ ಜನರನ್ನು ಸ್ಥಳ ಖಾಲಿ ಮಾಡುವಂತೆ ಸೂಚನೆ ನೀಡಲಾಗುತ್ತಿದೆ ಎಂದು ವರದಿಯಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಕೆಲವೊಂದು ಪತ್ರಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಇನ್ನೂ ಪಾಕಿಸ್ತಾನ ಅಧಿಕೃತವಾಗಿ ಖಚಿತಪಡಿಸಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Kellar: ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ್ದ ಮೂವರು ಉಗ್ರರು ಫಿನಿಶ್

PM Modi: ಆದಂ ಪುರ ವಾಯುನೆಲೆಗೆ ಮೋದಿ ಸರ್ಪ್ರೈಸ್ ಭೇಟಿ, ಸೆಲ್ಫೀಗೆ ಪೋಸ್

ಹಿಂದೂಗಳನ್ನು ಕೊಂದು ಕೋಲ್ಕತ್ತಾ ವಶಪಡಿಸಿಕೊಳ್ತೇನೆ ಎಂದ ಬಾಂಗ್ಲಾದೇಶ ಇಸ್ಲಾಮಿಸ್ಟ್ ವಿಡಿಯೋ

Arecanut price today: ಅಡಿಕೆ ಬೆಳೆಗಾರರಿಗೆ ನಿರಾಸೆ, ಇಂದಿನ ಬೆಲೆ ಎಷ್ಟಾಗಿದೆ ನೋಡಿ

ಹೊರನಾಡು ಬಳಿಕ ಮಂತ್ರಾಲಯದಿಂದ ದೇಶ ರಕ್ಷಣೆಗೆ ಲಕ್ಷ ಲಕ್ಷ ದೇಣಿಗೆ

ಮುಂದಿನ ಸುದ್ದಿ
Show comments