Webdunia - Bharat's app for daily news and videos

Install App

ನಾನು ಸೆರೆಯಾದರೆ ನನ್ನ ಸೈನ್ಯ ವೈರಿಗಳಿಗೆ ಸಡಗರವನ್ನಾಚರಿಸಲು ಬಿಡದು: ಮಸೂದ್ ಅಜರ್

Webdunia
ಮಂಗಳವಾರ, 2 ಫೆಬ್ರವರಿ 2016 (17:12 IST)
ಒಂದು ವೇಳೆ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಿದರೆ ಅದಕ್ಕೆ ಸೂಕ್ತ ಪ್ರತೀಕಾರವನ್ನು ತೀರಿಸಿಕೊಳ್ಳುವುದಾಗಿ ಜೈಶ್- ಇ- ಮೊಹಮ್ಮದ್ ಸ್ಥಾಪಕ ಮಸೂದ್ ಅಜರ್ ಬೆದರಿಕೆ ಒಡ್ಡಿದ್ದಾನೆ. 

"ಸಾವನ್ನು ಪ್ರೀತಿಸುವ ಸೈನ್ಯವನ್ನು ನಾನು ಸಿದ್ಧಪಡಿಸಿದ್ದೇನೆ. ಇವರನ್ನು ಉಡುಗಿಸುವ ಶಕ್ತಿ ನಮ್ಮ ಶತ್ರುಗಳಿಗಿಲ್ಲ. ದೇವರ ದಯೆಯಿಂದ ನಮ್ಮ ಶತ್ರುಗಳು ಸಂಭ್ರಮವನ್ನಾಚರಿಸಲು  ಇವರು ಬಿಡಲಾರರು. ನನ್ನ ಅನುಪಸ್ಥಿತಿಯನ್ನು ಮಿಸ್ ಮಾಡಿಕೊಳ್ಳಲು  ಸಹ ಅವಕಾಶ ನೀಡಲಾರರು", ಎಂದು ಉಗ್ರ ಗುಡುಗಿದ್ದಾನೆ
 
ಪೇಷಾವರ ಮೂಲದ ಪತ್ರಿಕೆ ಅಲ್ ಕಲಮ್‌ನಲ್ಲಿ ಜನವರಿ 26 ರಂದು ಅಜರ್‌ನ ಈ ಮಾತುಗಳು ಪ್ರಕಟವಾಗಿವೆ. 
 
7 ಜನ ಸೈನಿಕರು ಹುತಾತ್ಮರಾಗಿ, 20 ಜನ ಸೈನಿಕರು ಗಾಯಗೊಳ್ಳಲು ಕಾರಣವಾದ ಪಠಾಣ್‌ಕೋಟ್ ಮೇಲಿನ ದಾಳಿಗೆ ಮಸೂದ್ ಅಜರ್ ಕಾರಣ  ಎಂದು ಭಾರತ ಆರೋಪಿಸಿದೆ.
 
1999ರಲ್ಲಿ ಕಂದಹಾರ್ ಇಂಡಿಯನ್ ಏರಲೈನ್ಸ್ ಅಪಹರಣವಾದಾಗ ಪ್ರಯಾಣಿಕರ ಬಿಡುಗಡೆಗೆ ಬಂಧಿತ ಮಸೂದ್ ಅಜರ್‌ನನ್ನು ವಿನಿಮಯ ಮಾಡಲಾಗಿತ್ತು. 
 
ಕಳೆದ ತಿಂಗಳು ಪಾಕ್ ಪ್ರಧಾನಿ ನವಾಜ್ ಶರೀಫ್ ಪಠಾಣ್‌ಕೋಟ್ ದಾಳಿಕೋರರ ಮೇಲೆ ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದರು.
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments