Webdunia - Bharat's app for daily news and videos

Install App

ಸೌದಿ ಮಾಲೀಕನ ಚಿತ್ರಹಿಂಸೆಗೆ ಹೈದರಾಬಾದ್ ಯುವತಿ ಬಲಿ

Webdunia
ಸೋಮವಾರ, 9 ಮೇ 2016 (14:05 IST)
ಸೌದಿ ಅರೇಬಿಯಾದಲ್ಲಿ ಪರಿಚಾರಿಕೆಯಾಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳಿಗೆ ಅವಳ ಮಾಲೀಕ ನೀಡಿದ ಚಿತ್ರಹಿಂಸೆಯಿಂದ ಆಸ್ಪತ್ರೆಯಿಂದ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. 25 ವರ್ಷದ ಅಸೀಮಾ ಖಾತೂನ್ ಡಿಸೆಂಬರ್‌ನಲ್ಲಿ ರಿಯಾದ್‌ಗೆ ಹೋಗಿದ್ದಳು. ಅವಳು ತನ್ನ ತಾಯಿಗೆ ಮಾಡಿದ ಕರೆಗಳಲ್ಲಿ ತನ್ನನ್ನು ಹೇಗೆ ಒತ್ತೆಯಾಳಿನಂತೆ ಇರಿಸಿಕೊಂಡು ಮಾನಸಿಕವಾಗಿ ಮತ್ತು ದೈಹಿಕವಾಗಿ ಮಾಲೀಕರು ಹಿಂಸೆ ನೀಡುತ್ತಿದ್ದಾರೆಂದು ವಿಸ್ತ್ರತವಾಗಿ ವಿವರಿಸಿದ್ದಳು. ಅವಳ ಮಾಲೀಕರ ಹೆಸರನ್ನು ಅಬ್ದುಲ್ ರಹಮಾನ್ ಅಲಿ ಮೊಹಮದ್ ಎಂದು ಗುರುತಿಸಲಾಗಿದೆ.
 
ನಾನು ನನ್ನ ಮಗಳನ್ನು ಕೆಲಸಕ್ಕಾಗಿ ವಿದೇಶಕ್ಕೆ ಕಳಿಸಿದೆ. ಅಲ್ಲಿಗೆ ತಲುಪಿದ ಕೂಡಲೇ ನನ್ನ ಮಗಳನ್ನು ಕೋಣೆಯೊಂದರಲ್ಲಿ ಕೂಡಿಹಾಕಲಾಯಿತು. ಅವಳಿಗೆ ಆಹಾರ ಕೂಡ ನೀಡಲಿಲ್ಲ. ಸಂಜೆಯವರೆಗೆ ಕೂಡಿಹಾಕಿ ನಂತರ ಬಾಗಿಲನ್ನು ತೆರೆದರು. ನನ್ನ ಪುತ್ರಿ ಆಗಾಗ್ಗೆ ಕರೆ ಮಾಡಿ ಅಳುತ್ತಿದ್ದಳು ಎಂದು ತಾಯಿ ಗೌಸಿಯಾ ಕಾತೂನ್ ಹೇಳಿದ್ದಾರೆ. 
 
ತೆಲಂಗಾಣ ಸರ್ಕಾರ ಆ ಯುವತಿಯನ್ನು ಮಾಲೀಕನ ಕೈಯಿಂದ ಮುಕ್ತಗೊಳಿಸುವಂತೆ ಕೋರಿ ಕೇಂದ್ರಕ್ಕೆ ಪತ್ರ ಬರೆದ ಮೂರು ದಿನಗಳಲ್ಲೇ ಯುವತಿ ಶವವಾಗಿದ್ದಳು. 
 ಕಾತೂನ್‌ ಉದ್ಯಮ ವೀಸಾ ಮೇಲೆ ರಿಯಾದ್‌ಗೆ ಪ್ರಯಾಣಿಸಿದ್ದು, ಮಧ್ಯಪ್ರಾಚ್ಯಕ್ಕೆ ಅಗ್ಗದ ಕಾರ್ಮಿಕರನ್ನು ಒದಗಿಸುವ ಭಾರೀ ದೊಡ್ಡ ಜಾಲವನ್ನು ನಡೆಸುವ ಏಜಂಟರು ಅವಳ ಪ್ರಯಾಣವನ್ನು ಆಯೋಜಿಸಿದ್ದರು. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತ: ಪ್ರಾಣ ಉಳಿಸಿಕೊಳ್ಳಲು ಬಿಲ್ಡಿಂಗ್‌ನಿಂದ ವಿದ್ಯಾರ್ಥಿಗಳು ಹಾರುತ್ತಿರುವ ಭೀಕರ ವಿಡಿಯೋ ವೈರಲ್‌

ಶೀಘ್ರದಲ್ಲೇ ನಿವೃತ್ತಿ ಪಡೆಯುವುದಾಗಿ ಹೇಳಿದ್ದ: ಕ್ಯಾಪ್ಟನ್ ಸುಮೀತ್‌ ಸಬರ್ವಾಲ್‌ಗೆ ತಂದೆಯ ಕಣ್ಣೀರ ಅಂತಿಮ ವಿದಾಯ

ರಾತೋರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರ ಭೇಟಿ: ತನಿಖೆಗೆ ಆದೇಶ

ಬಾಂಬ್‌ ಬೆದರಿಕೆ: ನಾಗ್ಪುರ ಏರ್‌ಪೋರ್ಟ್‌ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಲಂಡನ್ ಬೆನ್ನಲ್ಲೇ ಪ್ಯಾರಿಸ್‌ಗೆ ನಿಗದಿಯಾಗಿದ್ದ ಏರ್‌ ಇಂಡಿಯಾ ವಿಮಾನ ರದ್ದು

ಮುಂದಿನ ಸುದ್ದಿ
Show comments