Webdunia - Bharat's app for daily news and videos

Install App

ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ಅರ್ಚಕನ ಹತ್ಯೆ ಯತ್ನ

Webdunia
ಶನಿವಾರ, 2 ಜುಲೈ 2016 (12:35 IST)
ಬಾಂಗ್ಲಾದಲ್ಲಿ ಮೂಲಭೂತವಾದಿಗಳ ಅಟ್ಟಹಾಸ ಮುಂದುವರೆದಿದ್ದು ಮತ್ತೊಬ್ಬ ಹಿಂದೂ ಅರ್ಚಕನ ಹತ್ಯೆ ಯತ್ನ ನಡೆದಿದೆ. ಶನಿವಾರ ಮುಂಜಾನೆ ನೈಋತ್ಯ ಬಾಂಗ್ಲಾದಲ್ಲಿ ಹಿಂದು ಅರ್ಚಕನ ಮೇಲೆ ಉಗ್ರರ ಗುಂಪೊಂದು ದಾಳಿ ನಡೆಸಿದ್ದು ಅರ್ಚಕನ ಸ್ಥಿತಿ ಚಿಂತಾಜನಕವಾಗಿದೆ. ಇದು ಐಸಿಸ್ ಉಗ್ರರ ಕೃತ್ಯ ಎಂದು ಹೇಳಲಾಗುತ್ತಿದೆ.
 
ಶುಕ್ರವಾರ ಮುಂಜಾನೆ ಸಹ ದೇವಾಲಯವೊಂದರ ಸಹಾಯಕ ಅರ್ಚಕರೊಬ್ಬರನ್ನು ಕೊಲೆಗೈಯ್ಯಲಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ. 
 
ಸಾವು ಬದುಕಿನ ನಡುವೆ ಹೋರಾಡುತ್ತಿರುವ ಪೀಡಿತನನ್ನು ಸಖ್ತಿರಾ ಜಿಲ್ಲೆಯಲ್ಲಿರುವ ಶ್ರೀ ಶ್ರೀ  ರಾಧಾ ಗೋವಿಂದ ದೇವಾಲಯದ ಅರ್ಚಕ 48ರ ಹರೆಯದ ಭಾಬಾಸಿಂಧುರಾಯ್ ಎಂದು ಗುರುತಿಸಲಾಗಿದೆ.
 
ದೇವಾಲಯದ ಆವರಣದಲ್ಲಿರುವ ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಈ ದಾಳಿ ನಡೆದಿದೆ.  
 
ರಾತ್ರಿ ಸಮಯದಲ್ಲಿ 8 ಜನರಿದ್ದ ಗುಂಪೊಂದು ಅರ್ಚಕರ ಮನೆ ಬಾಗಿಲನ್ನು ಬಡಿದಿದ್ದಾರೆ. ರಾತ್ರಿ ಕಾವಲುಗಾರರಿರಬೇಕೆಂದು ಕದ ತೆಗೆದ ಅರ್ಚಕರ ಮೇಲವರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ರಾಜಧಾನಿ ಢಾಕಾದ ರೆಸ್ಟೋರೆಂಟ್ ಒಂದರಲ್ಲಿ ವಿದೇಶಿಯರು ಸೇರಿದಂತೆ 20 ಜನರನ್ನು ಒತ್ತೆಯಾಳುಗಳಿಟ್ಟುಕೊಂಡ ಘಟನೆ ಬಳಿಕ ಕೆಲ ಹೊತ್ತಿನಲ್ಲೇ ಈ ಹತ್ಯೆ ಯತ್ನ ನಡೆದಿದೆ. 
 
ಅರ್ಚಕರ ಎದೆ ಮತ್ತು ಹಿಂಬದಿಯ ಭಾಗಕ್ಕೆ ಏಟು ಬಿದ್ದಿದ್ದು ಅವರನ್ನು ಢಾಕಾದ ಆಸ್ಪತ್ರೆಗೆ ದಾಖಲಾಗಿಸಿದೆ. 
 
ಶುಕ್ರವಾರ ಶ್ಯಾಮಾನಂದ ದಾಸ್ ಎಂಬ ಅರ್ಚಕರು ಹತ್ಯೆಗೀಡಾಗಿದ್ದರು. ಕೆಲ ದಿನಗಳ ಹಿಂದೆ ಬೌದ್ಧ ಭಿಕ್ಕುವೊಬ್ಬರನ್ನು ಹತ್ಯೆಗೈಯ್ಯಲಾಗಿತ್ತು. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇರಾನ್ ಮೇಲೆ ಅಮೆರಿಕೆ ಏರ್‌ಸ್ಟ್ರೈಕ್‌‌: ಡೊನಾಲ್ಡ್ ಟ್ರಂಪ್ ಗಂಡೆದೆಯನ್ನು ಕೊಂಡಾಡಿದ ಇಸ್ರೇಲ್ ಪ್ರಧಾನಿ

ಪಹಲ್ಗಾಮ್‌ ದಾಳಿ: ಪಾಕ್‌ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್‌

ಸ್ಟೇಟ್ ಸ್ಪಾನ್ಸರ್ ಕರಪ್ಷನ್‌ಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರವೇ ಉತ್ತೇಜನ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ

ಸ್ನೇಹಿತರೊಂದಿಗೆ ತೋಟದ ಮನೆಗೆ ಪಾರ್ಟಿಗೆ ತೆರಳಿದ್ದ ಯುವಕರಿಬ್ಬರು ಕೃಷಿಹೊಂಡದಲ್ಲಿ ಜಲಸಮಾಧಿ

ಏರ್‌ಸ್ಟ್ರೈಕ್‌ಗೆ ಕ್ಯಾರೇ ಎನ್ನದ ಇರಾನ್‌: ಇಸ್ರೇಲ್‌ ಮೇಲೆ ಮಿಸೈಲ್‌ಗಳ ಸುರಿಮಳೆ, ಗಗನಚುಂಬಿ ಕಟ್ಟಡಗಳಿಗೆ ಹಾನಿ

ಮುಂದಿನ ಸುದ್ದಿ
Show comments