Webdunia - Bharat's app for daily news and videos

Install App

ಚೀನಾದಲ್ಲಿ ಹಂದಿಗಳಿಗೆ ಹೈಸೆಕ್ಯುರಿಟಿ!?

Webdunia
ಮಂಗಳವಾರ, 3 ಆಗಸ್ಟ್ 2021 (09:54 IST)
ಬೀಜಿಂಗ್(ಆ.03): ಪದೇ ಪದೇ ಕಾಡುತ್ತಿರುವ ಸಾಂಕ್ರಾಮಿಕ ರೋಗಗಳಿಂದ, ದೇಶದ ಪ್ರಮುಖ ಮಾಂಸದ ಮೂಲವಾದ ಹಂದಿಗಳನ್ನು ಕಾಪಾಡಲು ಚೀನಾ ಸರ್ಕಾರ ಹೊಸದೊಂದು ಯೋಜನೆ ರೂಪಿಸಿದೆ. ಹಂದಿಗಳನ್ನು ಅತ್ಯಂತ ಸುರಕ್ಷತೆ ಮತ್ತು ಭದ್ರತೆ ಇರುವ, ಯಾವುದೆ ಹೊರಗಿನ ವ್ಯಕ್ತಿಗಳ ಸಂಪರ್ಕಕ್ಕೆ ಬರದ ರೀತಿಯ ಕಟ್ಟಡದಲ್ಲಿ ಇಡುವುದು!

ಹೌದು. ದಕ್ಷಿಣ ಚೀನಾದ ಹಲವು ನಗರಗಳಲ್ಲಿ ಹಂದಿಗಳನ್ನು ಸೋಂಕು ಮುಕ್ತವಾಗಿರಿಸಲು ಹಾಗ್ ಹೋಟೆಲ್ (ಹಂದಿಗಳ ಅತಿಥಿ ಗೃಹ) ನಿರ್ಮಿಸಲಾಗುತ್ತಿದೆ. ಇಂಥ ಒಂದು ಕಟ್ಟಡವಂತೂ 13 ಮಹಡಿ ಹೊಂದಿದ್ದು, ಅಲ್ಲಿ 10000ಕ್ಕೂ ಹೆಚ್ಚು ಹಂದಿಗಳನ್ನು ರಕ್ಷಿಸಲಾಗಿದೆ. ಈ ಕಟ್ಟಡಕ್ಕೆ ಸಿಸಿ ಟೀವಿ ಕ್ಯಾಮರಾ ಸೇರಿ ಅತಿ ಹೆಚ್ಚಿನ ಭದ್ರತೆಗಳನ್ನು ಒದಗಿಸಲಾಗಿದ್ದು, ಯಾರಿಗೂ ಒಳಗೆ ಪ್ರವೇಶ ಇಲ್ಲ.
ಕಾರಣ ಏನು?:
ಚೀನಿಯರಿಗೆ ಹಂದಿಗಳು ಪ್ರಮುಖ ಆಹಾರ. ಆದರೆ, ಸ್ವೈನ್ ಫ್ಮ್ಲ ನಂತಹ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಂಡಾಗ ಕೋಟ್ಯಂತರ ಹಂದಿಗಳನ್ನು ಸಾಯಿಸಬೇಕಾಗುತ್ತದೆ. ಹೀಗಾಗಿ ಹಂದಿಗಳನ್ನು ರೋಗಗಳಿಂದ ರಕ್ಷಿಸಲು ‘ಹಾಗ್ ಹೋಟೆಲ್’ ನಿರ್ಮಿಸಲಾಗುತ್ತಿದೆ. ಒಂದು ವೇಳೆ ಸಾಂಕ್ರಾಮಿಕಗಳು ಸಂಭವಿಸಿದ ವೇಳೆ ಹಂದಿಗಳು ನಾಶವಾದರೆ, ಈ ಕಟ್ಟಡದಲ್ಲಿರುವ ಹಂದಿಗಳನ್ನು ಬಳಸಿ ಹಂದಿಗಳ ಸಂತತಿಯನ್ನು ವೃದ್ಧಿಸುವುದು ಮತ್ತು ಮಾಂಸಕ್ಕೆ ಬಳಕೆ ಮಾಡಿಕೊಳ್ಳುವುದು ಚೀನಾದ ಪ್ಲಾನ್ ಆಗಿದೆ.
ಕೊರೋನಾ ವೈರಸ್ ಕಾಣಿಸಿಕೊಂಡ 2 ವರ್ಷ ಮುನ್ನ ಚೀನಾದಲ್ಲಿ ಕಾಣಿಸಿಕೊಂಡಿದ್ದ ಆಫ್ರಿಕನ್ ಹಂದಿ ಜ್ವರದಿಂದ ಚೀನಾದಲ್ಲಿ ಸಾಕಲಾಗಿದ್ದ ಅರ್ಧದಷ್ಟುಹಂದಿಗಳನ್ನು ನಾಶ ಮಾಡಲು ಕಾರಣವಾಗಿತ್ತು.
ಎಬೊಲಾ ಸೋಂಕಿನಿಂದ ಮನುಷ್ಯರು ಸಾಯುವ ರೀತಿಯಲ್ಲಿಯೇ ಆಫ್ರಿಕನ್ ಹಂದಿ ಜ್ವರ ಹಂದಿಗಳನ್ನು ಸಾಯಿಸುತ್ತದೆ. ಇದು 2018ರಲ್ಲಿ ಚೀನಾದಲ್ಲಿ ದೊಡ್ಡ ಮಟ್ಟದ ಸಾಂಕ್ರಾಮಿಕಕ್ಕೆ ಕಾರಣವಾಗಿತ್ತು. ಹಂದಿ ಜ್ವರ ಕಾಣಿಸಿಕೊಂಡ ಒಂದು ವರ್ಷದಲ್ಲಿ ಸುಮಾರು 40 ಕೋಟಿ ಹಂದಿಗಳು ಸಾವನ್ನಪ್ಪಿದ್ದವು. ಇದು ಅಮೆರಿಕ, ಬ್ರೆಜಿಲ್ನಲ್ಲಿ ವಾರ್ಷಿಕವಾಗಿ ಸಾವನ್ನಪ್ಪುವ ಹಂದಿಗಳ ಸಂಖ್ಯೆಗಿಂತಲೂ ಹೆಚ್ಚು. ಇದರಿಂದ ಚೀನಾ ಹಂದಿಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಹಿಂದುಳಿದ ವರ್ಗಗಳ ಕಡೆಗಣನೆಯಿಂದ ಅಧಿಕಾರ ಕಳಕೊಂಡ ಕಾಂಗ್ರೆಸ್: ಭೂಪೇಂದ್ರ ಯಾದವ್

ಸುಹಾಸ್ ಶೆಟ್ಟಿ ಕೇಸ್: ಹಿಂದೂ ಸಂಘಟನೆಗಳ ಅನುಮಾನ ನಿಜವಾಯ್ತು

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಮುಂದಿನ ಸುದ್ದಿ
Show comments