Webdunia - Bharat's app for daily news and videos

Install App

ಹೆಲಿಕಾಪ್ಟರ್ ಇಳಿಸಿ ಅಡ್ರಸ್ ಕೇಳಿದ ಪೈಲಟ್

Webdunia
ಶನಿವಾರ, 18 ಫೆಬ್ರವರಿ 2017 (12:56 IST)
ವಿಮಾನ ಮತ್ತು ಹೆಲಿಕಾಪ್ಟರ್‌ಗಲೂ ಮೊದಲೇ ತಮ್ಮ ನಿರ್ದೇಶಿತ ಗುರಿಯನ್ನು ನಿರ್ಧರಿಸಿಕೊಂಡು
ಏರ್ ಟ್ರಾಫಿಕ್ ಕಂಟ್ರೋಲ್ ಮಂಡಳಿಯೊಂದಿಗೆ ಸಂಪರ್ಕದಲ್ಲಿಟ್ಟುಕೊಂಡು ಪಯಣಿಸುತ್ತವೆ. ಏನಾದರೂ ಊಹಿಸದ ಗಂಡಾಂತರ ಎದುರಾದರೆ ಮಾತ್ರ ಹತ್ತಿರದಲ್ಲಿರುವ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತವೆ.
 
ಆದರೆ ಪೈಲಟ್ ಒಬ್ಬ ತಾನು ಯಾವ ಕಡೆ ಹೊರಟಿದ್ದೇನೆ ಎಂದು ತಿಳಿಯದೆ..ರಾಷ್ಟ್ರೀಯ ಹೆದ್ದಾರಿ ಮೇಲೆ ಹೆಲಿಕಾಪ್ಟರನ್ನು ಇಳಿಸಿದ್ದಾನೆ. ಈ ಘಟನೆ ಕಜಕಿಸ್ತಾನದಲ್ಲಿ ನಡೆದಿದೆ. ಕಜಕಿಸ್ತಾನದ ಒಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಸಾಲಾಗಿ ಲಾರಿಗಳು ಪ್ರಯಣಿಸುತ್ತಿವೆ. ಸುತ್ತಲೂ ಮಂಜು ಸುರಿಯುತ್ತಿದೆ. ಹೆದ್ದಾರಿ ಬಿಟ್ಟು ಬೇರೇನು ಕಾಣುತ್ತಿಲ್ಲ. ಆ ಮಂಜಿನ ಸೆರಗಿನಿಂದ ಒಮ್ಮೆಲೆ ಕಜಕಿಸ್ತಾನ ಸೈನ್ಯದ ಎಂಐ 80 ಹೆಲಿಕಾಪ್ಟರ್ ಲಾರಿಗಳ ಮುಂದೆ..ನಡು ರಸ್ತೆಯಲ್ಲಿ ಲ್ಯಾಂಡ್ ಆಗಿದೆ.
 
ಏನು ನಡೆಯುತ್ತಿದೆ ಎಂಬುದು ಲಾರಿ ಡ್ರೈವರ್‌ಗಳಿಗೆ ಅರ್ಥವಾಗಲಿಲ್ಲ. ಆ ಹೆಲಿಕಾಪ್ಟರ್‌ನಿಂದ ಪೈಲಟ್ ಕೆಳಗೆ ಇಳಿದು ಮುಂದೆ ನಿಂತಿದ್ದ ಲಾರಿ ಡ್ರೈವರ್ ಬಳಿ ಬಂದು ಹಸ್ತಲಾಘವ ಮಾಡಿದ. ಅಕ್ತುಬಿನ್ಸಿಕ್ ನಗರಕ್ಕೆ ಹೇಲೆ ಹೋಗುವುದೆಂದು ಕೇಳಿದ. ಲಾರಿ ಡ್ರೈವರ್ ಸೂಚನೆ ಮೇರೆಗೆ ಹೊರಟುಹೋದ.
 
ಈ ವಿಚಿತ್ರ ಘಟನೆಗೆ ಲಾರಿ ಡ್ರೈವರ್‌ಗಳು ಸುಸ್ತಾಗಿದ್ದರು. ಕಾರಿನಲ್ಲಿ ಹೋಗುವವರು ಅಡ್ರೆಸ್ ಕೇಳಿದಂತೆ ಅಷ್ಟು ದೊಡ್ಡ ಹೆಲಿಕಾಪ್ಟರನ್ನು ನಡುರಸ್ತೆಯಲ್ಲಿ ಇಳಿಸಿ ವಿಳಾಸ ಕೇಳುವುದೆಂದರೇನು? ಆ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಆ ದೇಶದ ರಕ್ಷಣಾ ಇಲಾಖೆ ಶಿಕ್ಷಣದ ಭಾಗವಾಗಿ ಪೈಲಟ್‌ಗಳಿಗೆ ಅವರ ನಿರ್ದೇಶಿತ ಪ್ರದೇಶ ತಿಳಿಸಿರಲಿಲ್ಲ. ಹೋದ ಸ್ಥಳವನ್ನು ತಿಳಿದುಕೊಳ್ಳಲು ಅವರನ್ನು ಕಳುಹಿಸಿದ್ದೆವೆಂದು ವಿವರಣೆ ನೀಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿರುವ ಜಮೀರ್ ರಾಜೀನಾಮೆ ಕೊಡಬೇಕು: ಎನ್ ರವಿಕುಮಾರ್

ಮುಂದಿನ ಸುದ್ದಿ
Show comments