Webdunia - Bharat's app for daily news and videos

Install App

ಪಾಕ್ ಸೇನೆ ಪ್ರತಿಯೊಬ್ಬ ಭಾರತೀಯನಿಗೆ ಪಾಠ ಕಲಿಸಲಿದೆ: ಹಫೀಜ್ ಸಯೀದ್

Webdunia
ಶುಕ್ರವಾರ, 30 ಸೆಪ್ಟಂಬರ್ 2016 (18:12 IST)
ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮಿರದ ಮೇಲೆ ದಾಳಿ ಮಾಡಿರುವುದನ್ನು ನಿಷ್ಪಕ್ಷಪಾತವಾಗಿ ಬಿತ್ತರಿಸಿದ ಜೀ ನ್ಯೂಸ್‍ಗೆ ಬೆದರಿಕೆಯೊಡ್ಡಿರುವ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್, ನಿಜವಾದ ಸೀಮಿತ ದಾಳಿ ಏನು ಎನ್ನುವುದನ್ನು ಪಾಕ್ ಸೇನಾಪಡೆ ತೋರಿಸಲಿದೆ ಎಂದು ಗುಡುಗಿದ್ದಾರೆ.
 

 ಝೀ ನ್ಯೂಸ್ ಬಿತ್ತರಿಸಿದ ಸೀಮಿತ ದಾಳಿ ವರದಿ ಕುರಿತಂತೆ ವ್ಯಗ್ರನಾಗಿರುವ ಸಯೀದ್, ನಿಜವಾದ ಸೀಮಿತ ದಾಳಿ ಏನು ಎನ್ನುವುದನ್ನು ಪಾಕ್ ಸೇನೆ ಪ್ರತಿಯೊಬ್ಬ ಭಾರತೀಯನಿಗೆ ಪಾಠ ಕಲಿಸಲಿದೆ ಎಂದು ಎಚ್ಚರಿಸಿದ್ದಾರೆ. 
 
ಜೀನ್ಯೂಸ್ ಉದ್ಯೋಗಿಗಳು ತಮ್ಮ ಸ್ಟುಡಿಯೋದಿಂದ ಸುಳ್ಳು ಫೋಟೋಗಳನ್ನು ಬಿತ್ತರಿಸುತ್ತಿದ್ದು, ಆದರೆ, ಸತ್ಯ ಸಂಗತಿ ಶೀಘ್ರದಲ್ಲಿಯೇ ಬಹಿರಂಗವಾಗಲಿದೆ ಎಂದು ಗುಡುಗಿದ್ದಾರೆ. 
 
ಭಾರತೀಯ ಸೇನಾ ಪಡೆಗಳು ಎರಡು ದಿನಗಳ ಹಿಂದೆ ಪಾಕ್ ಆಕ್ರಮಿತ ಕಾಶ್ಮಿರದಲ್ಲಿ ಸೀಮಿತ ದಾಳಿ ನಡೆಸಿ 45 ಕ್ಕೂ ಹೆಚ್ಚು ಉಗ್ರರನ್ನು ಕೊಂದು ಹಾಕಿದ್ದರು. 
 
ಭಾರತೀಯ ಸೇನೆ ಪಡೆ ಹತ್ಯೆಗೈದ ಉಗ್ರರು ಜೈಷ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಯಿಬಾ ಮತ್ತು ಹಿಜ್ಬುಲ್ ಮುಜಾಹಿದಿನ್ ಉಗ್ರಗಾಮಿ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments