ಆಝಾನ್, ನಮಾಜ್ ವೇಳೆ ದೇವಾಲಯದಲ್ಲಿ ದುರ್ಗಾ ಪೂಜೆ ನಿಲ್ಲಿಸಬೇಕು

Krishnaveni K
ಗುರುವಾರ, 12 ಸೆಪ್ಟಂಬರ್ 2024 (12:22 IST)
ಢಾಕಾ: ಬಾಂಗ್ಲಾದೇಶದಲ್ಲಿ ನೂತನವಾಗಿ ಜಾರಿಗೆ ಬಂದಿರುವ ಮಧ್ಯಂತರ ಸರ್ಕಾರ ಆಝಾನ್ ಮತ್ತು ನಮಾಜ್ ವೇಳೆ ಹಿಂದೂ ದೇವಾಲಯಗಳಲ್ಲಿ ದುರ್ಗಾ ಪೂಜೆ, ಭಕ್ತಿಗೀತೆಗಳನ್ನು ಹಾಕುವುದನ್ನು ನಿಲ್ಲಿಸಬೇಕು ಎಂದು ಆದೇಶ ಹೊರಡಿಸಿದೆ.

ಬಾಂಗ್ಲಾದೇಶದಲ್ಲಿ ಬಹುಸಂಖ್ಯಾತ ಮುಸ್ಲಿಮರ ಪ್ರಾರ್ಥನೆಗೆ ಭಂಗ ತರಬಾರದು ಎಂದು ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಸರ್ಕಾರ ಈ ಆದೇಶ ಹೊರಡಿಸಿದೆ. ಇದಕ್ಕೆ ಹಿಂದೂ ಸಮುದಾಯದವರೂ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಮುಸಲ್ಮಾನರ ಪ್ರಾರ್ಥನೆ ವೇಳೆ ಅಲ್ಲಿ ದೇವಾಲಯವೂ ಸೈಲೆಂಟ್ ಆಗಲಿದೆ.

ಆಝಾನ್, ನಮಾಜ್ ವೇಳೆ ಹಿಂದೂ ದೇವಾಲಯಗಳಲ್ಲಿ ಭಕ್ತಿ ಗೀತೆಗಳನ್ನು ಪ್ಲೇ ಮಾಡುವುದನ್ನು ನಿಲ್ಲಿಸಬೇಕು ಎಂಬ ಆದೇಶವನ್ನು ಹಿಂದೂ ಸಮುದಾಯದವರೂ ಒಪ್ಪಿಕೊಂಡಿದ್ದಾರೆ ಎಂದು ಗೃಹಸಚಿವಾಲಯದ ಸಲಹೆಗಾರ ಲೆಫ್ಟಿನೆಂಟ್ ಜನರಲ್ ಜಹಾಂಗೀರ್ ಅಲಾಮ್ ಹೇಳಿದ್ದಾರೆ.

ಆಝಾನ್ ಗೆ ಐದು ನಿಮಿಷ ಮೊದಲೇ ದೇವಾಲಯದಲ್ಲಿ ಪ್ಲೇ ಆಗುವ ಹಾಡುಗಳು ಬಂದ್ ಆಗಬೇಕು ಎಂದಿದ್ದಾರೆ. ಇನ್ನೇನು ದುರ್ಗಾ ಪೂಜೆ ಬರಲಿದ್ದು, ಇದಕ್ಕೆ ಮೊದಲು ಹಿಂದೂ ಸಮುದಾಯದವರೊಂದಿಗೆ ಸಭೆ ನಡೆಸಿದ ಬಳಿಕ ಈ ಆದೇಶ ನೀಡಲಾಗಿದೆ. ದುರ್ಗಾ ಪೂಜೆಗೆ ಸರ್ಕಾರವೂ ಅನುವು ಮಾಡಿಕೊಡಲಿದೆ. ಆದರೆ ಈ ನಿಯಮವನ್ನು ಪಾಲಿಸಲೇಬೇಕು ಎಂದು ಜಹಾಂಗೀರ್ ಅಲಾಮ್ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟೆರರ್ ವೈದ್ಯ ಗ್ಯಾಂಗ್ ಅರೆಸ್ಟ್ ಆಗಿ ಭಾರತವನ್ನು ಸೇವ್ ಮಾಡಿದ್ದಕ್ಕೆ ಮೂಲ ಕಾರಣ ಇದೇ ಐಪಿಎಸ್ ಆಫೀಸರ್

ಭಯೋತ್ಪಾದಕ ಚಟುವಟಿಕೆಗೆ ವೈದ್ಯರನ್ನೇ ಬಳಸಿದ್ದು ಯಾಕೆ: ಇಲ್ಲಿದೆ ಶಾಕಿಂಗ್ ಕಾರಣ

ಬಿಜೆಪಿಯೇ ಬಾಂಬ್ ಬ್ಲಾಸ್ಟ್ ಮಾಡಿರಬಹುದು ಎಂದ ಜಮೀರ್ ಅಹ್ಮದ್: ನಾಚಿಕೆಯಾಗಲ್ವಾ ಎಂದ ನೆಟ್ಟಿಗರು

ಕಾಂಗ್ರೆಸ್ ಪಕ್ಷವನ್ನೇ ಮುಗಿಸಿಬಿಡ್ತೀನಿ ಹುಷಾರ್ ಎಂದ ಕೆಎನ್ ರಾಜಣ್ಣ

Karnataka Weather: ರಾಜ್ಯದಲ್ಲಿ ಇಂದು ಈ ಜಿಲ್ಲೆಗಳಿಗೆ ಮಾತ್ರ ಮಳೆಯ ಸೂಚನೆ

ಮುಂದಿನ ಸುದ್ದಿ
Show comments