Webdunia - Bharat's app for daily news and videos

Install App

ಡೀಯರ್ ಮೋದಿ ಐ ಲವ್ ಯು..ನಾನು ಮತ್ತೆ ಭಾರತಕ್ಕೆ ಬರುತ್ತೇನೆ..

Webdunia
ಗುರುವಾರ, 6 ಜುಲೈ 2017 (06:05 IST)
ಜರುಸಲೇಂ: ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಪ್ರವಾಸದಲ್ಲಿ ಅಪರೂಪದ ಘಟನೆಯೊಂದು  ಜಗತ್ತಿನ ಗಮನ ಸೆಳೆದಿದೆ.  ಪ್ರಧಾನಿ ಮೋದಿಯವರನ್ನು ಭೇಟಿಯಾದ ಬಾಲಕ ಡೀಯರ್ ಮಿಸ್ಟರ್ ಮೋದಿ, ಐ ಲವ್ ಯೂ, ನಾನು ಮತ್ತೆ ಭಾರತಕ್ಕೆ ಬರುತ್ತೇನೆ ಎಂದು ತಿಳಿಸಿದ್ದಾನೆ.
 
ಆತ ಬೇರಾರೂ ಅಲ್ಲ 2008ರಲ್ಲಿ ನಡೆದ 26/11 ರ ಮುಂಬೈ ಉಗ್ರರ ದಾಳಿಯಲ್ಲಿ ಬದುಕುಳಿದ ಇಸ್ರೇಲ್ ಸಂತ್ರಸ್ಥ  ಬಾಲಕ  ಮೊಶೆ. ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈ ದಾಳಿ ಸಂತ್ರಸ್ಥ ಬಾಲಕ ಮೋಶೆಯನ್ನು ಭೇಟಿ ಮಾಡಿದರು. ಮೋಶೆ ಪ್ರಧಾನಿಯವರಿಗೆ ಫೋಟೋವೊಂದನ್ನು ಗಿಫ್ಟ್ ನೀಡಿ ಡಿಯರ್ ಮಿಸ್ಟರ್ ಮೋದಿ ಐ ಲವ್ ಯು. ನಾನು ಮುಂಬೈಗೆ ಮತ್ತೆ ಬರುತ್ತೇನೆ ಎಂದು ಹೇಳಿದ್ದಾನೆ. ಈ ವೇಳೆ ಜೊತೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ತಮ್ಮ ಭಾರತ ಭೇಟಿ ವೇಳೆ ಮೋಶೆನನ್ನು ಕರೆದುಕೊಂಡು ಬರುವುದಾಗಿ ಹೇಳಿದ್ದಾರೆ.
 
ಮುಂಬೈ ಉಗ್ರರ ದಾಳಿ ಸಂದರ್ಭದಲ್ಲಿ ಮೊಶೆ ತನ್ನ ತಂದೆ ಯಾತಿಯನ್ನು ಕಳೆದುಕೊಂಡಿದ್ದ. ಆಗ ಮೊಶೆಗೆ 2 ವರ್ಷ. ಸಧ್ಯ ತನ್ನ ಅಜ್ಜ-ಅಜ್ಜಿಯರೊಂದಿಗೆ ವಾಸವಿರುವ ಮೊಶೆಗೆ ಈಗ 10 ವರ್ಷ. ಮೊಶೆ 18 ವರ್ಷ ತುಂಬಿದ ಮೇಲೆ ಮುಂಬೈನ ನಾರಿಮನ್ ಹೌಸ್ ಗೆ ಬರುತ್ತಾನಂತೆ. ಕೇವಲ ಯಹೂದಿಗಳಿಗಷ್ಟೇ ಅಲ್ಲ, ಎಲ್ಲಾ ಭಾರತೀಯರಿಗೆ ಸೇವೆ ಸಲ್ಲಿಸಲು ಬಯಸಿದ್ದೇನೆ. ಭಾರತ ಮತ್ತು ಇಸ್ರೇಲ್ ನಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುತ್ತೇನೆ ಎಂದು ಮೊಶೆ ತಿಳಿಸಿದ್ದಾನೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ಪೀಕರ್‌ ಯು.ಟಿ. ಖಾದರ್‌ ಬೆನ್ನಲ್ಲೇ ಸಿದ್ದರಾಮಯ್ಯಗೆ ಬೆದರಿಕೆ ಕರೆ: ಕ್ರಮಕ್ಕೆ ಪೊಲೀಸರಿಗೆ ಸಿಎಂ ಸೂಚನೆ

India Pakistan: ಪಾಕಿಸ್ತಾನದ ಮೇಲೆ ದಾಳಿ ಮಾಡಿದ್ರೆ ಭಾರತದ ಏಳು ರಾಜ್ಯಗಳನ್ನು ನಾವು ವಶಪಡಿಸಿಕೊಳ್ತೀವಿ ಎಂದ ಬಾಂಗ್ಲಾದೇಶ ನಾಯಕ

ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಮೋದಿ, ಪಿಣರಾಯಿ, ಅದಾನಿ, ತರೂರ್‌: ಏನು ವಿಶೇಷ ಗೊತ್ತಾ

Mangaluru Suhas Shetty murder: ಹಿಂದೂಗಳಿಗೆ ರಕ್ಷಣೆ ಇಲ್ವಾ ಸಾರ್ ಎಂದು ಕೇಳಿದ್ದಕ್ಕೆ ಸ್ಪೀಕರ್ ಯುಟಿ ಖಾದರ್ ಹೇಳಿದ್ದೇನು

ಬರ್ಬರ ಹತ್ಯೆಯಾದ ಸುಹಾಸ್‌ ಶೆಟ್ಟಿ ಕುಟುಂಬಕ್ಕೆ ಬಿಜೆಪಿಯಿಂದ 25 ಲಕ್ಷ ಪರಿಹಾರ ಘೋಷಿಸಿದ ವಿಜಯೇಂದ್ರ

ಮುಂದಿನ ಸುದ್ದಿ
Show comments