Select Your Language

Notifications

webdunia
webdunia
webdunia
webdunia

ಚೋಟಾ ರಾಜನ್ ಕೊಲ್ಲಲು ದಾವೂದ್ ನಡೆಸಿದ ಯತ್ನ...?

ಚೋಟಾ ರಾಜನ್ ಕೊಲ್ಲಲು ದಾವೂದ್ ನಡೆಸಿದ ಯತ್ನ...?
ಮೆಲ್ಬರ್ನ್ , ಗುರುವಾರ, 2 ಜುಲೈ 2015 (12:07 IST)
ದೇಶೀಯ ಮೂಲದ ಭೂಗತ ಪಾತಕಿಗಳ ನಡುವಿನ ಜಿದ್ದು ಮುಂದುವರಿದಿದ್ದು, ಭೂಗತ ಪಾತಕಿ ದಾವೂದ್ ಇಬ್ರಾಹಿಂ ತನ್ನ ಪ್ರತಿಸ್ಪರ್ಧಿ ಪಾತಕಿ ಚೋಟಾ ರಾಜನ್‌ನನ್ನು ಹತ್ಯೆಗೈಯ್ಯಲು ತನ್ನ ಬಂಟರನ್ನು ಕಳುಹಿಸಿ ನಡೆಸಿದ ಯತ್ನ ವಿಫಲವಾಗಿದೆ. 
 
ರಾಜನ್ ಇರುವ ಮಾಹಿತಿ ತಿಳಿದ ದಾವೂದ್, ತನ್ನ ಬಂಟರನ್ನು ಹತ್ಯೆಗೈಯ್ಯುವ ಸಲುವಾಗಿಯೇ ಆಸ್ಟ್ರೇಲಿಯಾಗೆ ಕಳುಹಿಸಿದ್ದ. ಅಲ್ಲದೆ ಎಲ್ಲಾ ಅಗತ್ಯ ಸಿದ್ಧತೆಗಳೊಂದಿಗೆ ಸದ್ಧರಾಗಿದ್ದ ಶಾರ್ಪ್ ಶೂಟರ್ಸ್, ಸ್ಥಳಕ್ಕೆ ತೆರಳಿ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಇದನ್ನರಿತ ಚೋಟಾ ರಾಜನ್ ಕೃತ್ಯ ಆರಂಭವಾಗುವ ಮುನ್ನವೇ ಮುನ್ನವೇ ಸ್ಥಳದಿಂದ ಕಾಲ್ಕಿತ್ತು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಹೇಳಲಾಗಿದೆ.
 
ಇನ್ನು ಚೋಟಾ ರಾಜನ್ ಮೇಲೆ ಜಿದ್ದು ಸಾಧಿಸುತ್ತಿರುವ ದಾವೂದ್, ಕಳೆದ ಏಪ್ರಿಲ್‌ನಲ್ಲಿಯೂ ಕೂಡ ಇದೇ ಯತ್ನಕ್ಕೆ ಕೈ ಹಾಕಿ ವಿಫಲನಾಗಿದ್ದ ಎಂಬ ಮಾಹಿತಿಯೂ ಲಭ್ಯವಾಗಿತ್ತು. 

Share this Story:

Follow Webdunia kannada