Webdunia - Bharat's app for daily news and videos

Install App

ಕ್ಲಿಂಟನ್ ಭ್ರಷ್ಟಾಚಾರದ ರಾಣಿ : ಟ್ರಂಪ್

Webdunia
ಶನಿವಾರ, 6 ಆಗಸ್ಟ್ 2016 (14:15 IST)
ಅಮೇರಿಕಾ ಅಧ್ಯಕ್ಷ ಸ್ಥಾನಕ್ಕೆ ತಮಗೆ ಪ್ರಬಲ ಪೈಪೋಟಿ ನೀಡುತ್ತಿರುವ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅವರನ್ನು 'ಭ್ರಷ್ಟಾಚಾರದ ರಾಣಿ' ಎಂದು ಸಂಬೋಧಿಸಿರುವ ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ , ಕ್ಲಿಂಟನ್ ಏನಾದರೂ ಅಧ್ಯಕ್ಷಳಾಗಿ ಆಯ್ಕೆಯಾದರೆ ದೇಶ ಆಂತರಿಕವಾಗಿಯೇ ಅಧಃಪತನಕ್ಕಿಳಿಯುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.


ಚುನಾವಣಾ ಪ್ರಚಾರ ಮಾಡುತ್ತ ಮಾತನ್ನಾಡುತ್ತಿದ್ದ ಅವರು, ನಾವು  'ಭ್ರಷ್ಟಾಚಾರದ ರಾಣಿ'ಯ ಬಗ್ಗೆ ಹೇಳಹೊರಟಿದ್ದೇವೆ. ಒಂದು ವೇಳೆ ಕ್ಲಿಂಟನ್ ಏನಾದರೂ ಅಧ್ಯಕ್ಷರಾದರೆ ನೀವು ಭ್ರಷ್ಟಾಚಾರ ಸೇರಿದಂತೆ ವ್ಯಾಪಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.  ಎದುರಿಸಬೇಕಾಗುತ್ತದೆ. ದೇಶ ಆಂತರಿಕವಾಗಿ ಕುಸಿಯಲು ಆರಂಭವಾಗುತ್ತದೆ ಎನ್ನುತ್ತಿದ್ದಂತೆ ನೆರೆದವರು ಕಿರುಚುತ್ತ ಅವರ ಮಾತಿಗೆ ಸಮ್ಮತಿ ಸೂಚಿಸಿದರು.

ಕಳೆದ ಒಂದು ವಾರಗಳಿಂದ ರಾಷ್ಟ್ರದಲ್ಲಿ ನಡೆಯುತ್ತಿರುವ ಎಲ್ಲ ರಾಷ್ಟ್ರೀಯ ಚುನಾವಣೆಗಳಲ್ಲಿ ಕ್ಲಿಂಟನ್ (68) ಮುನ್ನಡೆಯನ್ನು ಸಾಧಿಸುತ್ತಿದ್ದಾರೆ. ಆಯ್ಕೆಯಾದರೆ, ದೇಶದ ಮೊದಲ ಮಹಿಳಾ ಅಧ್ಯಕ್ಷ ಎಂಬ ಹೆಗ್ಗಳಿಕೆ ಅವರದಾಗಲಿದೆ. ಆದರೆ ಆಕೆ ಅಸಂತುತಲಿತ ವ್ಯಕ್ತಿ ಎಂಬುದು ನಿಮಗೆ ಗೊತ್ತಿರುವ ಸಂಗತಿ ಎಂದು ಅವರು ಆರೋಪಿಸಿದ್ದಾರೆ.

ಕಳೆದ ಹಲವು ತಿಂಗಳಿಂದ ಟ್ರಂಪ್ ಕ ಕುಟಿಲ, ದೆವ್ವ ಎಂಬಂತಹ ಶಬ್ಧಗಳನ್ನು ಬಳಸಿ ಕ್ಲಿಂಡನ್ ಅವರ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ.

ಕಳೆದ ವಾರ ವಿಸ್ಕಾನ್ಸಿನ್‌ನಲ್ಲಿ ಪ್ರಚಾರ ನಡೆಸುತ್ತಿದ್ದ ಟ್ರಂಪ್, ಹಿಲೆರಿ ಕ್ಲಿಂಟನ್ ಅವರನ್ನು ರಾಕ್ಷಸಿ ಎಂದು ಜರಿದಿದ್ದರು. ಒಂದು ಅರ್ಥದಲ್ಲಿ ಅವರು ರಾಕ್ಷಸಿ, ಇನ್ನೊಂದು ಕಡೆ ದುರ್ಬಲ ವ್ಯಕ್ತಿ. ವಾಸ್ತವವಾಗಿ ಅವರು ಅಧ್ಯಕ್ಷ ಗಾದಿಗೆ ಅನರ್ಹರು.  ದೇಶಕ್ಕೆ ವಿಪತ್ತಾಗಬಲ್ಲರು.  ನಮ್ಮ ದೇಶಕ್ಕೆ ಅವರು ಉತ್ತಮರಲ್ಲ. ಹೀಗಾಗಿ ಅವರನ್ನು ಅಧ್ಯಕ್ಷರಾಗಿಸಲು ಬಿಡಬಾರದು ಎಂದು ತುಚ್ಛ ಪದಗಳನ್ನು ಬಳಸಿ ಕ್ಲಿಂಟನ್ ಅವರ ಮೇಲೆ ಹರಿಹಾಯ್ದಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಾ ರಘುವಂಶಿ ಪ್ರಕರಣ: ಸೋನಮ್ ಜತೆ ಸಂಪರ್ಕದಲ್ಲಿದ್ದ ಮತ್ತಿಬ್ಬರು ಅರೆಸ್ಟ್‌, ಇವರ ಪಾತ್ರವೇನು ಗೊತ್ತಾ

ದೊಡ್ಡ ದುರಂತ ಬೆನ್ನಲ್ಲೇ ಏರ್‌ ಇಂಡಿಯಾಗೆ ಬಾಂಬ್ ಬೆದರಿಕೆ: ನವದೆಹಲಿಗೆ ಹೊರಟಿದ್ದ ವಿಮಾನ ರಿಯಾದ್‌ನಲ್ಲಿ ತುರ್ತು ಭೂಸ್ಪರ್ಶ

ಬೃಹತ್‌ ರ‍್ಯಾಲಿ ವೇಳೆ ವೈಎಸ್‌ಆರ್‌ ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹರಿದ ಜಗನ್‌ಮೋಹನ್‌ ರೆಡ್ಡಿ ಕಾರು

ಇರಾನ್‌– ಇಸ್ರೇಲ್‌ ಸಂಘರ್ಷ ಶಮನಕ್ಕೆ ಮೋದಿ ರಂಗಪ್ರವೇಶ: ಭಾರತದ ಪ್ರಧಾನಿಗೆ ಧನ್ಯವಾದ ಹೇಳಿದ ಇರಾನ್

ಬಿ.ಆರ್ ಪಾಟೀಲ್ ಸತ್ಯವನ್ನೇ ಹೇಳಿದ್ದಾರೆ : ವಿಜಯೇಂದ್ರ

ಮುಂದಿನ ಸುದ್ದಿ
Show comments