Webdunia - Bharat's app for daily news and videos

Install App

18 ವರ್ಷಗಳ ವರೆಗೆ ಭ್ರೂಣ ಶೇಖರಿಸಿ ಆರೋಗ್ಯಕರ ಮಗು ಪಡೆದ ಚೀನಾ ಮಹಿಳೆ

Webdunia
ಶುಕ್ರವಾರ, 1 ಜುಲೈ 2016 (12:30 IST)
18 ವರ್ಷದಿಂದ ಭ್ರೂಣವನ್ನು ಶೇಖರಿಸಿ ಚೀನಾ ಮಹಿಳೆಯೊಬ್ಬಳು ಆರೋಗ್ಯವಾಗಿರುವ ಮಗುವೊಂದನ್ನು ಪಡೆದಿರುವುದು ಪತ್ತೆಯಾಗಿದೆ. ಶೇಖರಿಸಿ ಇಟ್ಟ ಘನೀಕೃತ ಭ್ರೂಣವನ್ನು ಉಪಯೋಗಿಸಿ ಆರೋಗ್ಯಕರ ಮಗುವನ್ನು ಚೀನಾ ಮಹಿಳೆ ಪಡೆದಿದ್ದಾಳೆ. ಮಗುವಿನ ತೂಕ 3,300 ಕೆ.ಜಿ ಯಷ್ಟಿದ್ದು, ಸೋಮವಾರದಂದು ಜಿಯಾಂಗ್ಸು ಪ್ರಾಂತ್ಯದಲ್ಲಿ ಮಗುವಿಗೆ ಜನ್ಮ ನೀಡಿರುವುದು ತಿಳಿದು ಬಂದಿದೆ. 

 
ಮೊದಲು ಈ ಮಹಿಳೆ ಫೈಲೋಪಿಯನ್ ಡ್ಯೂಬ್ ಸಮಸ್ಯೆಯಿಂದ ಬಳಲುತ್ತಿದ್ದಳು. 1990ರಲ್ಲಿ ಆಕೆ ವಿಟ್ರೋ ಫರ್ಟಿಲೇಷನ್ (ಐವಿಎಫ್) ಚಿಕಿತ್ಸೆ ಪಡೆದುಕೊಂಡಿದ್ದಳು. ಆದ್ರೂ ಆಕೆ ಗರ್ಭಿಣಿಯಾಗಿರಲಿಲ್ಲ. ಆದ್ದರಿಂದ 2015ರಲ್ಲಿ ಭ್ರೂಣವನ್ನು ಗರ್ಭಕೋಶಕ್ಕೆ ಸೇರಿಸಲಾಗಿತ್ತು ಎಂದು ವರದಿಗಳಿಂದ ತಿಳಿದು ಬಂದಿದೆ. 
 
ಇನ್ನೂ 2015ರಲ್ಲಿ ಮತ್ತೆ ಪ್ರಯತ್ನ ಮಾಡಲು ಈ ಮಹಿಳೆ ಆಸ್ಪತ್ರೆಗೆ ತೆರಳಿದ್ದಳು. ಈ ವೇಳೆ ಆಕೆಗೆ ಹೈಡ್ರೋಸ್ಲ್ಯಾಪಿನ್ಸ್ ಇರುವುದು ತಿಳಿದು ಬಂದಿರುವುದರಿಂದ ಶಸ್ತ್ರಚಿಕಿತ್ಸೆ ಬಳಿಕ ಆಕೆಗೆ ಭ್ರೂಣವನ್ನು ಒಳಸೇರಿಸಲಾಗಿತ್ತು. 
 
ಘನೀಕೃತ ಭ್ರೂಣವು ಲಿಕ್ವೀಡ್ ನೈಟ್ರೋಜನ್ ಒಳಗೆ 196 ಡಿಗ್ರಿ ಸೆಲ್ಸಿಯಸ್ ಶೇಖರಣೆಯಾಗುತ್ತದೆ. ಶಘಾಯಿ ಆರೋಗ್ಯ ಕೇಂದ್ರದ ಪ್ರಕಾರ ಘನೀಕೃತ ಭ್ರೂಣವನ್ನು 5 ವರ್ಷಗಳ ವರೆಗೆ ಶೇಖರಿಸಿ ಇಡಬಹುದು ಎನ್ನಲಾಗಿದೆ. 
 
ನಿಜ ಹೇಳಬೇಕಾದರೆ, ನಾವು ತುಂಬಾ ವರ್ಷಗಳ ವರೆಗೆ ಭ್ರೂಣವನ್ನು ಶೇಖರಿಸಿ ಇಡುತ್ತೇವೆ, ರೋಗಿಗಳು ಕೇಳಿದಾಗ ಮಾಡಲಾಗುತ್ತದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಚೀನಾ ದೇಶ ಒಂದು ಮಗುವಿನ ಪಾಲಸಿಯನ್ನು ಅನುಸರಿಸುತ್ತಿದೆ. ಆದ ಕಾರಣ ಚೀನಾ ದೇಶದಲ್ಲಿ ವಯಸ್ಸಾದ ಮಹಿಳೆಯರ ಬಂಜೆತನದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಇದರ ನಿವಾರಣೆಗಾಗಿ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಲಾಗ್ತಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments