Webdunia - Bharat's app for daily news and videos

Install App

ಚಂದ್ರಶೇಖರ್ ಗುರೂಜಿ ಕೊಲೆ ಹೋಮ ಹವನದ ಮೊರೆ ಹೋದ ಹೋಟೆಲ್ ಆಡಳಿತ ಮಂಡಳಿ

Webdunia
ಶನಿವಾರ, 9 ಜುಲೈ 2022 (14:02 IST)
ಎಡಿಜಿಪಿ ಅಲೋಕ್​ ಕುಮಾರ್ ಪ್ರೆಸಿಡೆಂಟ್​ ಹೋಟೆಲ್​ಗೆ ಭೇಟಿ ನೀಡಿದ ಬಳಿಕ, ಇಂದು ಹೋಟೆಲ್​ ಆಡಳಿತ ಮಂಡಳಿ ದೈವದ ಮೊರೆ ಹೋಗಿದ್ದಾರೆ. ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಪ್ರೆಸಿಡೆಂಟ್​ ಹೋಟೆಲ್​ನಲ್ಲಿ ಪೂಜೆ ನಡೆಯುತ್ತಿದೆ. ಅದು ಗುರೂಜಿ ಹತ್ಯೆ ನಡೆದ ಸ್ಥಳದಲ್ಲೇ ಹೋಮ ನಡೆಯುತ್ತಿದೆ. ಗುರೂಜಿ ಹತ್ಯೆ ಬಳಿಕ ಹೋಟೆಲ್​ನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಈ ಭಯವನ್ನು ದೂರ ಮಾಡಲು ಈಗ ಆಡಳಿತ ಮಂಡಳಿ ಗುರೂಜಿ ಹತ್ಯೆಯಾದ ಸ್ಥಳದಲ್ಲೇ ಹೋಮ ನಡೆಸುತ್ತಿದೆ.
ಹುಬ್ಬಳ್ಳಿಯ ಖ್ಯಾತ ಪುರೋಹಿತರಿಂದ ಹೋಮ ನಡೆಯುತ್ತಿದೆ. ಸುದರ್ಶನ ಹೋಮ ಮಾಡಿಸಿ ಹೋಟೆಲ್​ನಲ್ಲಿರುವ ಭಯದ ವಾತಾವರಣವನ್ನು ದೂರ ಮಾಡಲಾಗುತ್ತಿದೆ. ಇಬ್ಬರು ಪುರೋಹಿತರಿಂದ ಮಂತ್ರಘೋಷ ನಡೆದಿದೆ. ಹುಬ್ಬಳ್ಳಿಯ ಉಣಕಲ್ ಕೆರೆ ಬಳಿಯ ದಿ ಪ್ರೆಸಿಡೆಂಟ್ ಹೋಟೆಲ್​ನಲ್ಲಿ ಚಂದ್ರಶೇಖರ್ ಗುರೂಜಿ ಅವರ ಬರ್ಬರ ಹತ್ಯೆ ನಡೆದಿತ್ತು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments