Webdunia - Bharat's app for daily news and videos

Install App

ಅಮೆರಿಕದಲ್ಲಿ ಭಾರತೀಯನ ಹತ್ಯೆ ಪ್ರಕರಣ: ಹಂತಕ ಹೇಳಿದ ಸತ್ಯ!

Webdunia
ಬುಧವಾರ, 1 ಮಾರ್ಚ್ 2017 (09:31 IST)
ವಾಷಿಂಗ್ಟನ್: ಅಮೆರಿಕಾದ ಬಾರ್ ಒಂದರಲ್ಲಿ ಹತ್ಯೆಗೀಡಾದ ಹೈದರಾಬಾದ್ ಮೂಲದ ಇಂಜಿನಿಯರ್ ಶ್ರೀನಿವಾಸ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹಂತಕ ಆಡಂ ಪ್ಯೂರಿಂಟನ್ ಬಾಯಿಯಿಂದಲೇ ಸತ್ಯ ಬಹಿರಂಗವಾಗಿದೆ.


ಹಂತಕ ಆಡಂ ಇರಾನಿ ಪ್ರಜೆ ಎಂದು ತಪ್ಪಾಗಿ ಭಾವಿಸಿ ಭಾರತೀಯನ ಮೇಲೆ ಗುಂಡಿನ ಮಳೆಗೆರೆದಿದ್ದ ಎನ್ನುವುದು ಬಹಿರಂಗವಾಗಿದೆ. ಹತ್ಯೆ ಮಾಡಿದ ನಂತರ ಆತ ತಲೆಮರೆಸಿಕೊಂಡು ತಿರುಗಲು ಜಾಗ ಹುಡುಕುತ್ತಿದ್ದಾಗ ಇನ್ನೊಬ್ಬ ಬಾರ್ ಮಾಲಿಕನ ಬಳಿ ಉಳಿದುಕೊಳ್ಳಲು ಸ್ಥಳ ನೀಡಿದರೆ ಸತ್ಯ ಹೇಳುವುದಾಗಿ ಹೇಳಿದ್ದನಂತೆ.

ಅದರಂತೆ ಆಡಂ ಎಲ್ಲವನ್ನೂ ಹೇಳಿದ್ದಾನೆ. ತಾನು ಇಬ್ಬರು ಇರಾನಿ ಪ್ರಜೆಗಳನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದಾನೆ. ಅಂದರೆ ಆತ ಭಾರತೀಯರನ್ನು ಇರಾನಿಯರೆಂದು ತಪ್ಪಾಗಿ ಭಾವಿಸಿ ಕೊಲೆ ಮಾಡಿದ್ದನೆಂಬುದು ಖಚಿತವಾಯಿತು. ಸದ್ಯ ಬಂಧನಕ್ಕೊಳಗಾಗಿರುವ ಹಂತಕನ ವಿಚಾರಣೆ ನಡೆಯುತ್ತಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಹತ್ಯೆಯನ್ನು ಖಂಡಿಸಿದ್ದು, ವಲಸೆ ನೀತಿಯನ್ನು ಇನ್ನಷ್ಟು ಕಠಿಣಗೊಳಿಸುವುದಾಗಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ನಾವು ಅಪಾಯದಲ್ಲಿಲ್ಲ, ನಾವೇ ಅಪಾಯಕಾರಿಗಳು: ಟ್ರೆಂಡ್ ಆಗ್ತಿದೆ ಸ್ಲೋಗನ್

Operation Sindoor: ಇಡೀ ದೇಶ ಹೆಮ್ಮೆಪಡುವಾಗ ರಾಹುಲ್ ಗಾಂಧಿ, ಖರ್ಗೆ ಭಾರತೀಯ ಸೇನೆ ಬಗ್ಗೆ ಹೇಳಿದ್ದೇನು

Operation Sindoor: ಭಾರತ ದುಃಖಿಸುವಂತೆ ಮಾಡುತ್ತೇವೆ, ಶತ್ರುಗಳನ್ನು ಸದೆಬಡಿಯುವುದು ನಮಗೆ ಗೊತ್ತು: ಪಾಕಿಸ್ತಾನ ಪ್ರಧಾನಿ

Mock Drill: ಮಾಕ್ ಡ್ರಿಲ್ ಸೈರನ್ ಬರುತ್ತಿದ್ದಂತೇ ಏನು ಮಾಡಬೇಕು, ಏನೆಲ್ಲಾ ಚಟುವಟಿಕೆ ಮಾಡಲಾಗುತ್ತದೆ ಇಲ್ಲಿದೆ ವಿವರ

Karnataka Weather: ಸತತ ಸೆಖೆ, ಬಿಸಿಲಿನಿಂದ ತತ್ತರಿಸಿದ್ದ ರಾಜ್ಯದ ಜನರಿಗೆ ಗುಡ್ ನ್ಯೂಸ್

ಮುಂದಿನ ಸುದ್ದಿ
Show comments