Webdunia - Bharat's app for daily news and videos

Install App

ಅಮೆರಿಕದಲ್ಲಿ ಭಾರತೀಯನ ಹತ್ಯೆ ಪ್ರಕರಣ: ಹಂತಕ ಹೇಳಿದ ಸತ್ಯ!

Webdunia
ಬುಧವಾರ, 1 ಮಾರ್ಚ್ 2017 (09:31 IST)
ವಾಷಿಂಗ್ಟನ್: ಅಮೆರಿಕಾದ ಬಾರ್ ಒಂದರಲ್ಲಿ ಹತ್ಯೆಗೀಡಾದ ಹೈದರಾಬಾದ್ ಮೂಲದ ಇಂಜಿನಿಯರ್ ಶ್ರೀನಿವಾಸ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹಂತಕ ಆಡಂ ಪ್ಯೂರಿಂಟನ್ ಬಾಯಿಯಿಂದಲೇ ಸತ್ಯ ಬಹಿರಂಗವಾಗಿದೆ.


ಹಂತಕ ಆಡಂ ಇರಾನಿ ಪ್ರಜೆ ಎಂದು ತಪ್ಪಾಗಿ ಭಾವಿಸಿ ಭಾರತೀಯನ ಮೇಲೆ ಗುಂಡಿನ ಮಳೆಗೆರೆದಿದ್ದ ಎನ್ನುವುದು ಬಹಿರಂಗವಾಗಿದೆ. ಹತ್ಯೆ ಮಾಡಿದ ನಂತರ ಆತ ತಲೆಮರೆಸಿಕೊಂಡು ತಿರುಗಲು ಜಾಗ ಹುಡುಕುತ್ತಿದ್ದಾಗ ಇನ್ನೊಬ್ಬ ಬಾರ್ ಮಾಲಿಕನ ಬಳಿ ಉಳಿದುಕೊಳ್ಳಲು ಸ್ಥಳ ನೀಡಿದರೆ ಸತ್ಯ ಹೇಳುವುದಾಗಿ ಹೇಳಿದ್ದನಂತೆ.

ಅದರಂತೆ ಆಡಂ ಎಲ್ಲವನ್ನೂ ಹೇಳಿದ್ದಾನೆ. ತಾನು ಇಬ್ಬರು ಇರಾನಿ ಪ್ರಜೆಗಳನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದಾನೆ. ಅಂದರೆ ಆತ ಭಾರತೀಯರನ್ನು ಇರಾನಿಯರೆಂದು ತಪ್ಪಾಗಿ ಭಾವಿಸಿ ಕೊಲೆ ಮಾಡಿದ್ದನೆಂಬುದು ಖಚಿತವಾಯಿತು. ಸದ್ಯ ಬಂಧನಕ್ಕೊಳಗಾಗಿರುವ ಹಂತಕನ ವಿಚಾರಣೆ ನಡೆಯುತ್ತಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಹತ್ಯೆಯನ್ನು ಖಂಡಿಸಿದ್ದು, ವಲಸೆ ನೀತಿಯನ್ನು ಇನ್ನಷ್ಟು ಕಠಿಣಗೊಳಿಸುವುದಾಗಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments