Select Your Language

Notifications

webdunia
webdunia
webdunia
webdunia

ಬ್ರೂಸೆಲ್ಸ್‌ ಸ್ಫೋಟದಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಕೋರಿದ ಪ್ರಧಾನಿ ಮೋದಿ

ಬ್ರೂಸೆಲ್ಸ್‌ ಸ್ಫೋಟದಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಕೋರಿದ ಪ್ರಧಾನಿ ಮೋದಿ
ಬ್ರೂಸೆಲ್ಸ್‌ , ಬುಧವಾರ, 30 ಮಾರ್ಚ್ 2016 (18:25 IST)
ಬ್ರೂಸೆಲ್ಸ್‌ : ಭಾರತದ ಪ್ರಧಾನಿ ಬೆಲ್ಜಿಯಂ ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ಬೆಲ್ಜಿಯಂ ರಾಜಧಾನಿ ಬ್ರೂಸೆಲ್ಸ್‌ನಲ್ಲಿ ನರೇಂದ್ರ ಮೋದಿಯವರನ್ನು ಸಾಂಪ್ರದಾಯಕವಾಗಿ ಸ್ವಾಗತಿಸಲಾಯಿತು.
ಬೆಲ್ಜಿಯಂ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬ್ರೂಸೆಲ್ಸ್‌ನಲ್ಲಿ ನಡೆದ ತ್ರಿವಳಿ ಬಾಂಬ್ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
 
ಬೆಲ್ಜಿಯಂ‌ನ ಮೆಟ್ರೋ ಸ್ಟೇಶನ್ ಭೇಟಿ ಬಳಿಕ ನರೇಂದ್ರ ಮೋದಿಯವರು ಸ್ಫೋಟ್ ನಡೆದ ಸ್ಥಳಕ್ಕೆ ಭೇಟಿ ನೀಡಿದರು.  ಭಾರತೀಯ ಟೆಕ್ಕಿ ರಾಘವೇಂದ್ರ ಸೇರಿದಂತೆ ಒಟ್ಟು 32 ಪ್ರಜೆಗಳು ಈ ಸ್ಫೋಟದಲ್ಲಿ ಮೃತಪಟ್ಟಿದ್ದರು. 
 
ಮಾರ್ಚ್ 22 ರಂದು ಬೆಲ್ಜಿಯಂ ರಾಜಧಾನಿ ಬ್ರೂಸೆಲ್ಸ್‌ನಲ್ಲಿ ಮೂರು ಭಾರೀ ಸ್ಪೋಟ ಸಂಭವಿಸಿದ್ದು ಒಟ್ಟು 35 ಜನರು ಮೃತಪಟ್ಟು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

Share this Story:

Follow Webdunia kannada