Webdunia - Bharat's app for daily news and videos

Install App

ಬಾಗ್ದಾದ್‌ನಲ್ಲಿ ಕಾರ್ ಬಾಂಬ್‌ಸ್ಫೋಟ: 13 ಜನರ ಸಾವು, 24 ಮಂದಿಗೆ ಗಾಯ

Webdunia
ಮಂಗಳವಾರ, 30 ಮೇ 2017 (15:56 IST)
ನಗರದ ಪ್ರಮುಖ ಕೇಂದ್ರದಲ್ಲಿರುವ ಜನಪ್ರಿಯ ಐಸ್‌ಕ್ರೀಂ ಪಾರ್ಲರ್‌ನ ಹೊರ ಆವರಣದಲ್ಲಿ ಕಾರ್ ಬಾಂಬ್ ಸ್ಫೋಟಿಸಿದ್ದರಿಂದ 13 ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಐಸ್‌ಕ್ರೀಂ ಪಾರ್ಲರ್‌ ಮಳಿಗೆಯ ಮುಂದೆ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರ್‌ನಲ್ಲಿ ಸ್ಫೋಟಕಗಳನ್ನು ಇರಿಸಲಾಗಿತ್ತು. ರಿಮೋಟ್ ಮೂಲಕ ಸ್ಫೋಟಿಸಲಾಗಿದೆ. ಸ್ಫೋಟಕ್ಕೆ ಇಸ್ಲಾಮಿಕ್ ಸ್ಟೇಟ್ ಹೊಣೆ ಹೊತ್ತುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
 
ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್ ಆಚರಣೆಗೆ ಕೆಲವೇ ಕೆಲ ದಿನಗಳು ಇರುವಂತೆ ಸ್ಫೋಟ ಸಂಭವಿಸಿದೆ. ರಂಜಾನ್ ಹಬ್ಬದಲ್ಲಿ ಉಪವಾಸ ವ್ರತ ಆಚರಿಸುವ ಮುಸ್ಲಿಂ ಸಮುದಾಯದ ಜನತೆ ಸೂರ್ಯಾಸ್ತವಾಗುತ್ತಿದ್ದಂತೆ ತಮ್ಮ ಉಪವಾಸವನ್ನು ಮುರಿದು ಭೋಜನ ಸೇವಿಸಲು ರೆಸ್ಟುರಾಂಟ್‌ಗಳಿಗೆ ಆಗಮಿಸುತ್ತಾರೆ
 
ಸಾಮಾಜಿಕ ಮಾಧ್ಯಮಕ್ಕೆ ಪೋಸ್ಟ್ ಮಾಡಿದ ವೀಡಿಯೊಗಳು ಸ್ಫೋಟಗೊಂಡ ಸ್ಥಳದ ಸುತ್ತಲಿನ ಬೀದಿಗಳಲ್ಲಿ ಅಸ್ತವ್ಯಸ್ತವಾಗಿರುವ ದೃಶ್ಯಗಳನ್ನು ತೋರಿಸಿದೆ. ಹಲವಾರು ಗಾಯಗೊಂಡವರು ನೆಲದ ಮೇಲೆ ಬಿದ್ದಿದ್ದರೆ, 13 ಜನರು ಸಾವನ್ನಪ್ಪಿದ್ದಾರೆ. 
 
ಇರಾಕ್ ದೇಶದಲ್ಲಿ ಪ್ರತಿ ಬಾರಿಯೂ ರಂಜಾನ್ ಹಬ್ಬದ ಸಂದರ್ಭದಲ್ಲಿ ಹಿಂಸಾಚಾರ ನಡೆಯುವುದು ಸಾಮಾನ್ಯವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sukma Naxals Surrendered: 22 ನಕ್ಸಲರು ಭದ್ರತಾ ಪಡೆಗಳ ಮುಂದೆ ಶರಣು

ಮೂರು ವರ್ಷ ನಮ್ಮದು ಹೋರಾಟ ಪರ್ವ: ಬಿವೈ ವಿಜಯೇಂದ್ರ

JEE Main Result 2025: JEE Main ಪರೀಕ್ಷೆ ಫಲಿತಾಂಶ ನಾಳೆ ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ ಇಲ್ಲಿ ನೋಡಿ

ಅನುಭವ ಮಂಟಪ ಮುಗಿಸಲು ನಿಮ್ಮ ಡಿ.ಕೆ.ಶಿವಕುಮಾರ್ ಬಿಡುತ್ತಾರಾ: ಬಿ.ವೈ.ವಿಜಯೇಂದ್ರ

CET exam: ಬ್ರಾಹ್ಮಣರ ಜನಿವಾರ ತೆಗೆಸಿದ್ದು ನಿಜ ಆದ್ರೆ ಕ್ರಮ ಕೈಗೊಳ್ತೀವಿ: ಸಚಿವ ಡಾ ಎಂಸಿ ಸುಧಾಕರ್

ಮುಂದಿನ ಸುದ್ದಿ
Show comments