Webdunia - Bharat's app for daily news and videos

Install App

ದಿಲ್ಲಿಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನ: ಆಪ್ ಪ್ರಣಾಳಿಕೆಯಲ್ಲಿ ಘೋಷಣೆ

Webdunia
ಶನಿವಾರ, 31 ಜನವರಿ 2015 (15:42 IST)
ಫೆಬ್ರವರಿ 7 ರಂದು ನಡೆಯಲಿರುವ ವಿಧಾನಸಭೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ ಶನಿವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನ,  ಮಹಿಳಾ ರಕ್ಷಣೆ ಮತ್ತು ವಿದ್ಯುತ್ ಬಿಲ್ ತಗ್ಗಿಸುವ ಭರವಸೆಗಳಿಗೆ ಒತ್ತು ನೀಡಿದೆ. 
 
ಸಿಸಿಟಿವಿ ಕ್ಯಾಮರಾ ಬಳಸಿ ಮಹಿಳಾ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಆಪ್ ಹೇಳಿದೆ. 
 
20 ಹೊಸ ಕಾಲೇಜುಗಳ ನಿರ್ಮಾಣ, 50 ಪ್ರತಿಶತ ವಿದ್ಯುತ್ ಬಿಲ್ ಇಳಿಕೆ, ಕೈಗೆಟಕುವ ದರದಲ್ಲಿ  ಶುದ್ಧ ಕುಡಿಯುವ ನೀರಿನ ಪೂರೈಕೆ ಮತ್ತು ಉಚಿತ ವೈ-ಫೈ ಝೋನ್ ನಿರ್ಮಾಣ ಸಹ ಪ್ರಣಾಳಿಕೆಯ ಮುಖ್ಯಾಂಶಗಳಾಗಿವೆ. 
 
ಈ ಹಿಂದೆ 49 ದಿನಗಳ ಕಾಲ ಆಡಳಿತ ನಡೆಸಿದ್ದ ಸಂದರ್ಭದಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಲು ನಾವು ಪ್ರಯತ್ನಿಸಿದ್ದೆವು. ಈಗಲೂ ಸಹ ಪ್ರಣಾಳಿಕೆಯಲ್ಲಿ ಮಾಡಿರುವ ಎಲ್ಲ ವಾಗ್ದಾನಗಳನ್ನು ನಾವು ಈಡೇರಿಸುತ್ತೇವೆ ಎಂದು ಆಪ್ ಆಶ್ವಾಸನೆ ನೀಡಿದೆ. 
 
ಬಿಜೆಪಿ ಇನ್ನುವರೆಗೂ ಪ್ರಣಾಳಕೆ ಬಿಡುಗಡೆ ಮಾಡದೇ ಇರುವುದರ ಬಗ್ಗೆ ಟೀಕಿಸಿರುವ ಕೇಜ್ರಿವಾಲ್ ಬಿಜೆಪಿ ಯಾವುದೇ ವಾಗ್ದಾನಗಳನ್ನು ಮಾಡಲು ನಾಚಿಕೆ ಪಡುತ್ತಿದೆ. ತಾವು ಲೋಕಸಭಾ ಚುನಾವಣೆಯಲ್ಲಿ ಮಾಡಿದ್ದ ಒಂದೇ ಒಂದು ಭರವಸೆಗಳನ್ನು ಪೂರೈಸಿಲ್ಲ ಎಂಬುದು ಈ ಹಿಂಜರಿಕೆಗೆ ಕಾರಣ ಎಂದು ವ್ಯಂಗ್ಯವಾಡಿದ್ದಾರೆ . 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments