Webdunia - Bharat's app for daily news and videos

Install App

ಸುಖಾಂತ್ಯ: ಕೊನೆಗೂ ಪತ್ತೆಯಾದ ಕಾಡಿನಲ್ಲಿ ನಾಪತ್ತೆಯಾದ ಜಪಾನಿ ಬಾಲಕ

Webdunia
ಶುಕ್ರವಾರ, 3 ಜೂನ್ 2016 (10:50 IST)
ಕಳೆದೊಂದು ವಾರದ ಹಿಂದೆ ಭೀಕರ ಕಾಡಿನಲ್ಲಿ ನಾಪತ್ತೆಯಾಗಿದ್ದ 7 ವರ್ಷದ ಜಪಾನಿ ಬಾಲಕ ಶುಕ್ರವಾರ ಸುರಕ್ಷಿತವಾಗಿ ಪತ್ತೆಯಾಗಿದ್ದಾನೆ. ನಾಪತ್ತೆಯಾದ ಸ್ಥಳದಿಂದ ಸುಮಾರು 5 ಕೀಲೋಮೀಟರ್ ದೂರದಲ್ಲಿ ಆತ ಕಾಣಿಸಿಕೊಂಡಿದ್ದಾನೆ.
ಘಟನೆ ಸಂಪೂರ್ಣ ಜಪಾನ್‌ನಲ್ಲಿ ತಲ್ಲಣವನ್ನು ಸೃಷ್ಟಿಸಿತ್ತು ಮತ್ತು ಪೋಷಕರು ಮಕ್ಕಳ ಮೇಲೆ ಹೇರುವ ಅತಿಯಾದ ಶಿಸ್ತುಕ್ರಮದ ಮೇಲೆ ಚರ್ಚೆಯನ್ನು ಹುಟ್ಟು ಹಾಕಿತ್ತು. 
 
ಕಳೆದ ಶನಿವಾರ ಬಾಲಕ ನಾಪತ್ತೆಯಾಗಿದ್ದು, ಇಂದು ಮುಂಜಾನೆ ಹೊಕಾಯ್ಡೊದ ಉತ್ತರ ಮುಖ್ಯ ದ್ವೀಪದಲ್ಲಿರುವ ಮಿಲಿಟರಿ ಕವಾಯತು(ಡ್ರಿಲ್) ಪ್ರದೇಶದಲ್ಲಿ ಕಂಡು ಬಂದಿದ್ದಾನೆ. ಅಪರಿಚಿತ ಬಾಲಕನ ಬಳಿ ಸೈನಿಕ ನೀ ಯಾರೆಂದು ಕೇಳಿದಾಗ ತಾನು ಯಮಾತೋ ತನೂಕಾ( ಕಾಣೆಯಾಗಿದ್ದ ಬಾಲಕನ ಹೆಸರು) ಎಂದಿದ್ದಾನೆ.
 
ಕಾಡಿನಲ್ಲಿ ಒಬ್ಬನೇ ನಡೆಯುತ್ತ ಸಾಗಿದ ತಾನು ಕಳೆದ ಕೆಲ ದಿನಗಳ ಹಿಂದೆ ಡ್ರಿಲ್ ಪ್ರದೇಶವನ್ನು ಸೇರಿದ್ದಾಗಿ ಬಾಲಕ ಪೊಲೀಸ್ ವಿಚಾರಣೆಯಲ್ಲಿ ಹೇಳಿದ್ದಾನೆ. ಆತನೇ ನಾಪತ್ತೆಯಾಗಿದ್ದ ತಮ್ಮ ಮಗನೆಂದು ಪೋಷಕರು ಸಹ ಗುರುತಿಸಿದ್ದು ಆರೋಗ್ಯ ತಪಾಸಣೆಗಾಗಿ ಹೆಲಿಕಾಪ್ಟರ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ನಿರ್ಜಲೀಕರಣದಿಂದ ಬಳಲುತ್ತಿರುವ ಬಾಲಕನ ಕೈ ಮತ್ತು ಬೆನ್ನ ಮೇಲೆ ಗೀರಿದ ಗಾಯಗಳಾಗಿವೆ. ಇಂತಹ ಸಣ್ಣಪುಟ್ಟ ಗಾಯಗಳನ್ನು ಬಿಟ್ಟರೆ ಆತ ಸಂಪೂರ್ಣವಾಗಿ ಸುರಕ್ಷಿತವನಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 
ಕಾರಿನಲ್ಲಿ ಹೋಗುವಾಗ ಹಿಂಬದಿ ಬರುತ್ತಿದ್ದ ಕಾರುಗಳಿಗೆ ಕಲ್ಲು ಹೊಡೆಯುತ್ತಿದ್ದ ಎಂಬ ಕಾರಣಕ್ಕೆ ಶಿಕ್ಷೆ ಕೊಡುವ ಉದ್ದೇಶದಿಂದ ತಂದೆಯಾಯಿಗಳು ಆತನನ್ನು ಕಾಡಿನಲ್ಲಿ ಬಿಟ್ಟಿದ್ದರು. 5 ನಿಮಿಗಳ ಬಳಿಕ ಅದೇ ಸ್ಥಳಕ್ಕೆ ಹೋಗಿ ನೋಡಿದಾಗ ಬಾಲಕ ಅಲ್ಲಿರಲಿಲ್ಲ. ಏಷ್ಯಾದಲ್ಲಿಯೇ ಅತಿ ಕ್ರೂರ ಕರಡಿಗಳ ತಾಣವಾಗಿರುವ, ಸೂರ್ಯನ ಬೆಳಕು ಕೂಡ ತಲುಪದ ಕರಾಳ ಕಾಡಿನಲ್ಲಿ ಬಾಲಕನನ್ನು ಬಿಟ್ಟಿದ್ದು ವಿಶ್ವದಾದ್ಯಂತ ಆತಂಕವನ್ನು ಸೃಷ್ಟಿಸಿತ್ತು. ಆತನನ್ನು ಹುಡುಕಲು ಜಪಾನ್ ಸರ್ಕಾರ ಸರ್ವ ಪ್ರಯತ್ನವನ್ನು ನಡೆಸಿತ್ತು. ಭೀಕರ ಕಾಡಿನಲ್ಲಿ  ಜಪಾನ್ ಸೇನೆ ಹಗಲಿರುಳು ಕಾರ್ಯಾಚರಣೆಯನ್ನು ನಡೆಸಿತ್ತು.  
 
ಜಪಾನ್‌ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಠಿಣ ಶಿಕ್ಷೆಗಳಿದ್ದು ಒಂದು ವೇಳೆ ಆತ ಪತ್ತೆಯಾಗದಿದ್ದರೆ ಪೋಷಕರಿಗೆ 20 ವರ್ಷಗಳಿಗಿಂತ ಹೆಚ್ಚು ಶಿಕ್ಷೆ ನೀಡುವ ಸಂಭವವಿತ್ತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅತ್ಯಾಚಾರ ಪ್ರಕರಣದಲ್ಲಿ ಬಿಜೆಡಿ ಕಾರ್ಪೊರೇಟರ್ ಬಂಧನ, ಪಕ್ಷದಿಂದ ಅಮಾನತು

ತಮಿಳುನಾಡಿನ ಚೋಳರ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ: 140 ಕೋಟಿ ಭಾರತೀಯರ ಕಲ್ಯಾಣಕ್ಕೆ ಪ್ರಾರ್ಥನೆ

ಹರಿದ್ವಾರ ಕಾಲ್ತುಳಿತ, ಇದು ಅಪಘಾತವಲ್ಲ, ಆಡಳಿತ ವ್ಯವಸ್ಥೆಯ ವೈಫಲ್ಯ: ಕೇಜ್ರಿವಾಲ್

ರಾಜ್ಯದಲ್ಲಿ ರಸಗೊಬ್ಬರದ ಕಾಳದಂಧೆ: ಸರ್ಕಾರದ ವಿರುದ್ಧ ಜು.28ರಂದು ಪ್ರತಿಭಟನೆ, ವಿಜಯೇಂದ್ರ

ಎಚ್ಚರಿಕೆ ಬಳಿಕವು ನಿಷೇಧಿತ ಬಣ್ಣ ಬಳಕೆ: 6 ಎಂಫೈರ್ ಹೊಟೇಲ್ ವಿರುದ್ಧ ಕ್ರಮಕ್ಕೆ ಚಿಂತನೆ

ಮುಂದಿನ ಸುದ್ದಿ
Show comments