Webdunia - Bharat's app for daily news and videos

Install App

ಹೈಟಿ ರಕ್ಷಣಾ ಕಾರ್ಯಕ್ಕೆ ತೆರೆ; ಸತ್ತವರು 1,10,000

Webdunia
ಶನಿವಾರ, 23 ಜನವರಿ 2010 (17:35 IST)
ಇತ್ತೀಚೆಗಷ್ಟೇ ಹೈಟಿಯಲ್ಲಿ ಸಂಭವಿಸಿದ ಭಾರೀ ಭೂಕಂಪದ ರಕ್ಷಣಾ ಕಾರ್ಯಗಳು ಮುಕ್ತಾಯಗೊಂಡಿದೆ ಎಂದು ಸರಕಾರ ಘೋಷಿಸಿದೆ. ಅದೇ ಹೊತ್ತಿಗೆ ದುರ್ಘಟನೆಯಿಂದಾಗಿ ಸತ್ತವರ ಸಂಖ್ಯೆ 1,10,000 ಎಂದು ವಿಶ್ವಸಂಸ್ಥೆ ಅಧಿಕೃತವಾಗಿ ತಿಳಿಸಿದೆ.

ಜನವರಿ 12ರ ಮಂಗಳವಾರ ಸಂಭವಿಸಿದ 7.0 ರಿಕ್ಟರ್ ಮಾಪನದಲ್ಲಿ ತೋರಿಸಿದ ಭೂಕಂಪದ ಸಂತ್ರಸ್ತರ ಹುಡುಕಾಟ ಮತ್ತು ರಕ್ಷಣಾ ಕಾರ್ಯಗಳು ಸಂಪೂರ್ಣಗೊಂಡಿವೆ ಎಂದು ಸರಕಾರ ಹೇಳಿದೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಶೋಧ ಮತ್ತು ರಕ್ಷಣಾ ತಂಡಗಳು 132 ಮಂದಿಯನ್ನು ಅವಶೇಷಗಳಡಿಯಿಂದ ಜೀವಂತವಾಗಿ ರಕ್ಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭೂಕಂಪದಲ್ಲಿ ಸತ್ತವರ ಅಧಿಕೃತ ಮಾಹಿತಿಗಳನ್ನು ಪ್ರಕಟಿಸಿರುವ ಹೈಟಿ ಆಂತರಿಕ ಸಚಿವಾಲಯವು 1,11,499 ಜನ ಸತ್ತಿರುವುದನ್ನು ಖಚಿತಪಡಿಸಿದೆ. ಇದಕ್ಕೂ ಮೊದಲು 75,000 ಮಂದಿ ಸತ್ತಿರಬಹುದು ಎಂದು ಸರಕಾರ ಅಂದಾಜಿಸಿತ್ತು.

ಭೂಕಂಪದಲ್ಲಿ 1,93,891 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 6,09,000ಗೂ ಹೆಚ್ಚು ಸಂತ್ರಸ್ತರು 500ರಷ್ಟು ನಿರಾಶ್ರಿತ ಶಿಬಿರಗಳಲ್ಲಿ ಪ್ರಸಕ್ತ ವಾಸಿಸುತ್ತಿದ್ದಾರೆ ಎಂದೂ ಸರಕಾರ ಹೇಳಿದೆ.

ಈ ನಡುವೆ ಅಕ್ಕಿ ಅಪಹರಿಸಲು ಯತ್ನಿಸುತ್ತಿದ್ದ ಇಬ್ಬರ ಮೇಲೆ ಹೈಟಿ ಪೊಲೀಸರು ಗುಂಡು ಹಾರಿಸಿದ್ದು, ಅವರಲ್ಲೊಬ್ಬ ಸಾವನ್ನಪ್ಪಿದ್ದಾನೆ. ಐದು ಗೋಣಿಚೀಲಗಳಲ್ಲಿ ಅಕ್ಕಿ ಅಪಹರಣಕ್ಕೆ ಅವರು ಯತ್ನಿಸಿದ್ದರು.

ಮತ್ತೊಂದು ಪ್ರಕರಣದಲ್ಲಿ ಐಫೋನ್ ಹೊಂದಿದ್ದ ಅಮೆರಿಕಾದ ಚಿತ್ರ ನಿರ್ಮಾಪಕರೊಬ್ಬರು ಅದರ ಸಹಾಯದಿಂದ ಬದುಕುಳಿದ ಘಟನೆ ವರದಿಯಾಗಿದೆ.

ಡಾನ್ ವೂಲೀ ಎಂಬವರು ಭೂಕಂಪದಿಂದಾಗಿ ಕಟ್ಟಡದೊಳಗೆ ಸಿಕ್ಕಿ ಬಿದ್ದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರು 66 ಗಂಟೆಗಳಿಗೂ ಹೆಚ್ಚು ಕಾಲ ಅವಶೇಷಗಳೊಳಗೆ ಉಳಿಯಬೇಕಾಗಿತ್ತು. ಈ ಸಂದರ್ಭದಲ್ಲಿ ಐಫೋನ್‌ನ ವೈದ್ಯಕೀಯ ಸಾಫ್ಟ್‌ವೇರ್ ಸಹಾಯದಿಂದ ಅವರು ತನ್ನ ದೇಹಕ್ಕೆ ಅಗತ್ಯ ಶುಶ್ರೂಷೆಗಳನ್ನು ಮಾಡಿಕೊಂಡಿದ್ದರು ಎಂದು ವರದಿಗಳು ತಿಳಿಸಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments