ಜಕಾರ್ತ, ಇಂಡೊನೇಶಿಯಾ: ಕೇಂದ್ರ ಇಂಡೊನೇಶಿಯಾದಲ್ಲಿ ಭಾರಿ ಮಳೆಯಿಂದ ಉಂಟಾದ ಭೂಕುಸಿತದಿಂದ ಹಳಿಗಳ ಮೇಲೆ ಬಿದ್ದಿದ್ದ ಮಣ್ಣಿನ ಗುಡ್ಡೆಗೆ ಪ್ರಯಾಣಿಕರ ರೈಲು ಡಿಕ್ಕಿ ಹೊಡೆದು ಕನಿಷ್ಠ ಮೂರು ಜನರು ಮೃತಪಟ್ಟ ಘಟನೆ ನಡೆದಿದೆ. ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದೆ.ಜಾವಾ ದ್ವೀಪದ ತಾಸಿಕ್ಮಲಯಾ ಜಂಕ್ಷನ್ ಬಳಿ ಶುಕ್ರವಾರ ತಡರಾತ್ರಿ ರೈಲು ಹಳಿತಪ್ಪಿತು ಎಂದು ರೈಲ್ವೆ ಕಂಪನಿಯ ವಕ್ತಾರ ಹೇಳಿದ್ದಾರೆ.
ಹಳಿಗಳ ಮೇಲೆ ಭೂಕುಸಿತ ಉಂಟಾಗಿದ್ದರಿಂದ ಮಣ್ಣಿನ ಗುಡ್ಡೆಗಳಿದ್ದು ರೈಲಿಗೆ ಬ್ರೇಕ್ ಹಾಕಿದರೂ ಮಣ್ಣಿನ ಗುಡ್ಡೆಗೆ ಡಿಕ್ಕಿಹೊಡೆಯಿತು.