Webdunia - Bharat's app for daily news and videos

Install App

ಭಾರತೀಯ ನಟ ವಿದೇಶದಲ್ಲಿ ಬಂಧನ

Webdunia
ಭಾನುವಾರ, 24 ನವೆಂಬರ್ 2013 (16:27 IST)
PTI
PTI
ಭಾರತೀಯ ನಟರೊಬ್ಬರನ್ನು ವಿದೇಶೀ ಪೋಲೀಸರು ಬಂಧಿಸಿದ್ದಾರೆ. ವೀಸಾ ನಿಯಮವನ್ನು ಉಲ್ಲಂಘಿಸಿದ್ದರಿಂದ ಭಾರತೀಯ ನಟನನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳುತ್ತಿವೆ. ಆದ್ರೆ ವಿದೇಶದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಲಾಗಿದೆ ಎಂಬ ಕಾರಣಕ್ಕಾಗಿ ನಟನನ್ನು ಬಂಧಿಸಲಾಗಿದೆ ಎಂದು ವಿದೇಶೀ ಪೋಲೀಸರು ಹೇಳಿದ್ದಾರೆ.

ತಮಿಳು ನಟ ಹಾಗೂ ಸ್ವತಃ ಕವಿಯಾಗಿರುವ ಎಸ್. ಜೇಯಪಾಲನ್ ಅವರನ್ನು ಶ್ರೀಲಂಕಾ ಪೋಲೀಸರು ಬಂಧಿಸಿದ್ದಾರೆ. ಜೇಯಪಾಲನ್ ಅವರು ಪ್ರವಾಸಿ ವೀಸಾವನ್ನು ಪಡೆದು ಶ್ರೀಲಂಕಾಗೆ ಆಗಮಿಸಿ, ಇಲ್ಲಿನ ಜಾಫ್ನಾದಲ್ಲಿ ಸಮ್ಮೇಳನವೊಂದನ್ನು ಆಯೋಜಿಸಿದ್ದರು. ಹೀಗಾಗಿ ಜೆಯಪಾಲನ್ ಅವರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾದ ಪೊಲೀಸ್ ವಕ್ತಾರ ರೋಹನಾ ತಿಳಿಸಿದ್ದಾರೆ.

'' ಭಾರತದ ನಾಗರಿಕರು ವೀಸಾ ಪಡೆದು ಶ್ರೀಲಂಕಾದಲ್ಲಿ ಸಂಚರಿಸಬಹುದು. ಆದರೆ, ಜೆಯೆಪಾಲನ್ ಅವರು ಸಮ್ಮೇಳನವನ್ನು ಆಯೋಜಿಸಿ ಇಲ್ಲಿನ ಶಾಂತಿ ಕದಡುವ ಪ್ರಯತ್ನ ಮಾಡಲು ಯತ್ನಿಸಿದ್ದರು. ಹೀಗಾಗಿ ಅವರನ್ನು ಬಂಧಿಸಿದ್ದೇವೆ" ಎಂದು ರೋಹನಾ ಹೇಳಿದ್ದಾರೆ.

ಶ್ರೀಲಂಕಾದ ಜಾಫ್ನಾದಲ್ಲಿ ಹುಟ್ಟಿದ ಜೇಯಪಾಲನ್ ಅವರು ತಮಿಳು ಸಿನೆಮಾಗಳಲ್ಲಿ ನಟನೆ ಮಾಡಿದ್ದಾರೆ. ಆದುಕಲಾಂ ಚಿತ್ರದಲ್ಲಿನ ನಟನೆಗಾಗಿ ಜೇಯಪಾಲನ್ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ. ಮೂಲತಃ ತಮಿಳು ಕವಿಯಾಗಿರುವ ಜೆಯಪಾಲನ್ ಅವರು ತಮಿಳಿನಲ್ಲಿ ಹಲವು ಪದ್ಯಗಳನ್ನು ಬರೆದಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments