Webdunia - Bharat's app for daily news and videos

Install App

ಬೆಲೆ ಏರಿಕೆಗೆ ಭಾರತದ ಮಧ್ಯಮ ವರ್ಗ ಕಾರಣ : ಬುಷ್

Webdunia
ಶನಿವಾರ, 3 ಮೇ 2008 (13:14 IST)
ಭಾರತದಲ್ಲಿರುವ ಮಧ್ಯಮ ವರ್ಗವು ಹೆಚ್ಚು ಆಹಾರಕ್ಕೆ ಬೇಡಿಕೆ ಉಂಟುಮಾಡುತ್ತಿರುವುದರಿಂದ, ಜಾಗತಿಕವಾಗಿ ಆಹಾರೋತ್ಪಾದನೆಗಳ ಬೆಲೆ ಏರಿಕೆಯಾಗುತ್ತಿದೆ ಮತ್ತು ಇದು ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಅಮೆರಿಕಾದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಹೇಳಿದ್ದಾರೆ.

ಶುಕ್ರವಾರ ಅಮೆರಿಕಾದ ಮಿಸ್ಸೋರಿಯ ಮೆರಿಲ್ಯಾಂಡ್‌‌ ಹೈಟ್ಸ್‌ನಲ್ಲಿ ವರ್ಲ್ ವೈಡ್ ಟೆಕ್ನಾಲಾಜಿ ಇಂಕ್ ಎನ್ನುವ ಸಂಸ್ಥೆಗೆ ಭೇಟಿ ನೀಡಿ ಮಾತನಾಡಿ, ಭಾರತದಲ್ಲಿ ಮಧ್ಯಮ ವರ್ಗವು ಪ್ರವರ್ಧಮಾನಕ್ಕೆ ಬರುತ್ತಿದೆ. ಇದರಿಂದಾಗಿ ಅವಕಾಶಗಳು ಹೆಚ್ಚಿದೆ. ಇದು ಆಹಾರೋತ್ಪನ್ನಗಳಿಗೆ ಹೆಚ್ಚು ಬೇಡಿಕೆಯನ್ನು ಉಂಟುಮಾಡುವ ಜೊತೆಗೆ ಬೆಲೆ ಏರಿಕೆಗೂ ಸಹಕಾರ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ಭಾರತದಲ್ಲಿನ ಮಧ್ಯಮ ವರ್ಗದ ಜನರ ಅಂಕಿ ಅಂಶಗಳು ಆಸಕ್ತಿಯ ಆಲೋಚನೆಯನ್ನು ಸೃಷ್ಟಿ ಮಾಡುತ್ತದೆ. ಭಾರತದಲ್ಲಿ 350 ದಶ ಲಕ್ಷ ಜನ ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದಾರೆ. ಈ ಸಂಖ್ಯೆ ಅಮೆರಿಕಾದ ಒಟ್ಟು ಸಂಖ್ಯೆಗಿಂತ ಹೆಚ್ಚಿದೆ ಎಂದು ಅವರು ವಿವರಿಸಿದರು.

ನೀವು ಸಂಪತ್ತನ್ನು ಗಳಿಸಲು ಪ್ರಾರಂಭಿಸಿದರೆ, ಉತ್ತಮ ಪೌಷ್ಠಿಕಾಂಶ ಮತ್ತು ಗುಣಮಟ್ಟದ ಆಹಾರಕ್ಕೆ ಬೇಡಿಕೆ ಇಡುತ್ತೀರಿ. ಇದರಿಂದ ಜಾಗತಿಕವಾಗಿ ಆಹಾರೋತ್ಪಾದನೆಗಳ ಮೇಲೆ ಬೇಡಿಕೆ ಇಡುತ್ತದೆ. ಹೆಚ್ಚಾದ ಬೇಡಿಕೆ, ಬೆಲೆ ಏರಿಕೆಗೆ ಧಾರಾಳ ಸಹಾಯ ಮಾಡುತ್ತದೆ ಎಂದು ಹೇಳಿ ಜಾಗತಿಕ ಹಣದುಬ್ಬರಕ್ಕೆ ಭಾರತದ ಪಾಲು ಎಷ್ಟಿದೆ ಎಂಬುದನ್ನು ನಿರೂಪಿಸಲು ಪ್ರಯತ್ನಪಟ್ಟರು.

ಇದೇ ವೇಳೆ ಅವರು ಹವಾಮಾನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನೂ ಉಲ್ಲೇಖಿಸಿ, ಹೆಚ್ಚಿನ ಆಹಾರೋತ್ಪಾದಕ ಕೃಷಿಯನ್ನು ಮಾಡುವ ರೈತರು ಬರಗಾಲದಿಂದಾಗಿ ಬಳಲುತ್ತಿದ್ದಾರೆ. ಇದರಿಂದಲೂ ಆಹಾರದ ಉತ್ಪಾದನೆಯಲ್ಲಿ ಕೊರತೆ ಕಾಣಿಸುತ್ತದೆ ಎಂದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪುರಿ ದೇವಸ್ಥಾನ ಕಾಲ್ತುಳಿತ: ಜಿಲ್ಲಾಧಿಕಾರಿ ಎಸ್‌ಪಿಯನ್ನೇ ವರ್ಗಾವಣೆ ಮಾಡಿದ ಸರ್ಕಾರ

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಪುಪ್ತಾಕ್‌

ಜೂನ್ 23ರಂದು ಇರಾನ್ ಜೈಲಿನ ಮೇಲೆ ಇಸ್ರೇಲ್ ದಾಳಿಯಲ್ಲಿ ಅಧಿಕಾರಿಗಳು ಸೇರಿ 71ಮಂದಿ ಸಾವು

ಅಶೋಕ್ ಜ್ಯೋತಿಷ್ಯ ಕಲಿತಿದ್ದರೆ ನನ್ನ ಭವಿಷ್ಯ ಕೇಳಬೇಕಿತ್ತು: ಡಿಕೆ ಶಿವಕುಮಾರ್‌

ಪುರಿ ಕಾಲ್ತುಳಿತ ದುರಂತ, ದೊಡ್ಡ ಎಚ್ಚರಿಕೆ: ರಾಹುಲ್ ಗಾಂಧಿ ಸಂತಾಪ

Show comments