Webdunia - Bharat's app for daily news and videos

Install App

ಫೇಸ್‌ಬುಕ್‌ ಮೆಸೇಜ್ ನೋಡಿದ : ಪ್ರಿಯತಮೆಗೆ ಬೆಂಕಿ ಇಟ್ಟ.

Webdunia
ಸೋಮವಾರ, 31 ಮಾರ್ಚ್ 2014 (16:40 IST)
ಫೇಸ್‌ಬುಕ್‌ ಮುಂದೆ ಕುಳಿತುಕೊಂಡರೆ ಸಮಯ ಕಳೆಯುವುದೇ ಗೊತ್ತಾಗೋದಿಲ್ಲ. ಆದ್ರೆ ಸ್ವಲ್ಪ ಯಾಮಾರಿದರೂ, ಜೀವ ಕೂಡ ಕಳೆದು ಹೋಗುತ್ತದೆ ಎಂಬುದಕ್ಕೆ ಪುಣೆಯಲ್ಲೊಂದು ಪ್ರಕರಣ ನಡೆದಿದೆ. ಹುಡುಗಿಯೊಬ್ಬಳ ಫೇಸ್‌ಬುಕ್‌ ಅಕೌಂಟ್‌ನಲ್ಲಿದ್ದ ಪೋಸ್ಟ್‌ಗಳು ಹಾಗೂ ಮೆಸೇಜ್‌ಗಳನ್ನು ನೋಡಿದ ಪ್ರೇಮಿಯೊಬ್ಬ ಕೋಪದಲ್ಲಿ ತನ್ನ ಜೊತೆಗಿದ್ದ ಪ್ರಿಯತಮೆಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ.

ಹುಡುಗಿಯ ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಅಲ್ಲಿಗೆ ಆಗಮಿಸಿದರಾದರೂ, ಆಕೆಯನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.

ಅಂಥದ್ದೇನಿತ್ತು ಆ ಫೇಸ್‌ಬುಕ್‌ ಮೆಸೇಜ್‌ನಲ್ಲಿ? ಮುಂದಿನ ಪುಟದಲ್ಲಿದೆ ಭಯಾನಕ ಮಾಹಿತಿ..

PTI
PTI

ಪುಣೆಯ ಸಮೀಪದ ಮಂಜ್ರಿ ಎಂಬಲ್ಲಿನ ನಿವಾಸಿಯಾಗಿರುವ 26 ವರ್ಷದ ಸೂರಜ್‌ ಕೆವತ್‌ ಎಂಬ ಯುವಕ ತನ್ನ ಪ್ರಿಯತಮೆಯೊಂದಿಗೆ "ಲಿವಿಂಗ್‌ ರಿಲೇಷನ್‌ಷಿಪ್‌" ನಲ್ಲಿದ್ದ. ಇಬ್ಬರೂ ಎರಡು ವರ್ಷಗಳ ಕಾಲ ಪ್ರೀತಿಸುತ್ತಿದ್ದರು. ಇಬ್ಬರ ಮಧ್ಯೆ ಪ್ರೀತಿ ಹೆಚ್ಚಾದ ಪರಿಣಾಮ ಆಕೆ ಗರ್ಭಿಣಿ ಕೂಡ ಆಗಿದ್ದಳು ಎಂದು ತಿಳಿದು ಬಂದಿದೆ. ಇಬ್ಬರೂ ಅಕ್ಷರಸ್ಥರಾಗಿದ್ದರಿಂದ ಫೇಸ್‌ಬುಕ್‌ ಬಳಸುತ್ತಿದ್ದರು.

ಆದ್ರೆ ಇಂದು ತನ್ನ ಪ್ರಿಯತಮೆಯ ಫೇಸ್‌ಬುಕ್‌ ಅಕೌಂಟ್‌ ಅನ್ನು ಸೂರಜ್‌ ತೆರೆದು ನೋಡಿದ್ದಾನೆ. ಅದನ್ನು ನೋಡಿದ ತಕ್ಷಣ ಕೆಂಡಾಮಂಡಲವಾದ ಸೂರಜ್‌ ಗರ್ಭಿಣಿ ಪ್ರಿಯತಮೆಗೆ ಬೆಂಕಿ ಹಚ್ಚಿದ್ದಾನೆ. ಯಾಕೆಂದ್ರೆ ಆ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಆಕೆಯ ಮತ್ತೊಬ್ಬ ಪ್ರಿಯತಮ ಕಳಿಸಿದ ಮೆಸೇಜ್‌ಗಳಿದ್ದವು..

ಹಳೆಯ ಪ್ರಿಯತಮ ಏನೆಂದು ಮೆಸೇಜ್ ಮಾಡಿದ್ದ ಗೊತ್ತಾ? ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ....

PTI
PTI
ಇತ್ತ ಒಬ್ಬ ಪ್ರಿಯತಮ ಜೊತೆಗಿದ್ದು ಆಕೆಯನ್ನು ಗರ್ಭಿಣಿ ಮಾಡಿದ್ದರೂ, ಕೂಡ ಆಕೆ ಫೇಸ್‌ಬುಕ್‌ನಲ್ಲಿ ಮತ್ತೊಬ್ಬ ಪ್ರಯತಮನ ಜೊತೆಗೆ ಅಶ್ಲೀಲವಾಗಿ ಚಟ್‌ ಮಾಡ್ತಾ ಇದ್ದಳಂತೆ. ಫೇಸ್‌ಬುಕ್‌ ಗೆಳೆಯ ಆಕೆಯ ಅಕೌಂಟ್‌ಗೆ ಕಳಿಸಿದ ಅಶ್ಲೀಲ ಮೆಸೇಜ್‌ಗಳು, ಫೋಟೋಗಳನ್ನು ನೋಡಿ ಸೂರಜ್‌ ಪಿತ್ತ ನೆತ್ತಿಗೇರಿದೆ. ಇಬ್ಬರ ಮಧ್ಯೆ ವಾಗ್ವಾದ ಬೆಳೆದು ಜಗಳ ತಾರಕಕ್ಕೇರಿದೆ. ಕೋಪಗೊಂಡ ಸೂರಜ್‌ ಆಕೆಯನ್ನು ಬೆಂಕಿ ಹಚ್ಚಿದ್ದಾನೆ.

ಬೆಂಕಿಯ ನರಳಾಟದಲ್ಲಿ ಚೀರಾಡುತ್ತಿದ್ದ ಹುಡುಗಿಯ ದನಿಯನ್ನು ಕೇಳಿ ಅಕ್ಕಪಕ್ಕದ ಮನೆಯವರು ಓಡೋಡಿ ಬಂದರು. ಅದ್ರೆ ಅಷ್ಟರಲ್ಲಾಗಲೇ ಆಕೆ ಬೆಂಕಿಯಲ್ಲಿ ಬೆಂದುಹೋಗಿದ್ದಳು. ಹರಸಾಹಸ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಯಾವುದೇ ಪ್ರಯೋಜನವಾಗಲಿಲ್ಲ. ಅಸ್ಪತ್ರೆಯಲ್ಲಿ ಆ ಹುಡುಗಿ ಕೊನೆಯುಸಿರೆಳೆದಿದ್ದಾಳೆ.

ಈ ಸಂಬಂಧ ಪ್ರಕರಣದ ದಾಖಲಿಸಿಕೊಂಡ ಪೋಲೀಸರು ಆರೋಪಿ ಸೂರಜ್‌ನನ್ನು ಬಂಧಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments