ಹೆಂಡತಿಯ ಕಣ್ಣಿಗೆ ಮಣ್ಣೆರಚಿ ಪ್ರೇಯಸಿಯ ಜತೆ ಸರಸಸಲ್ಲಾಪದಲ್ಲಿ ನಿರತನಾಗಿದ್ದ ಪೊಲೀಸ್ ಪೇದೆ ಯದುಕುಮಾರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಸಂಗ ಬೆಂಗಳೂರಿನಲ್ಲಿ ಸೋಮವಾರ ವರದಿಯಾಗಿದೆ.
ಯದುಕುಮಾರ್ಗೆ ಮದುವೆಗೆ ಮುಂಚೆಯೇ ಪವಿತ್ರ ಎಂಬ ಕಿರುತೆರೆಯ ನಟಿಯ ಜತೆ ಅಕ್ರಮಸಂಬಂಧವಿತ್ತು. ಆದರೆ ಈ ವಿಷಯವನ್ನು ಮುಚ್ಚಿಟ್ಟು, ಅವನು ಭುವನೇಶ್ವರಿಯನ್ನು ವಿವಾಹವಾಗಿದ್ದ. ಆದರೆ ಮದುವೆಯಾದ ಮೇಲೆ ತನ್ನ ಚಪಲಚೆನ್ನಿಗರಾಯ ಪ್ರವೃತ್ತಿಯನ್ನು ನಿಲ್ಲಿಸದ ಅವನು ಕದ್ದುಮುಚ್ಚಿ ಪ್ರೇಯಸಿಯ ಮನೆಗೆ ತೆರಳಿ ಚಕ್ಕಂದವಾಡುತ್ತಿದ್ದ.
ಸದಾ ಪ್ರೇಯಸಿಯ ಮನೆಯಲ್ಲಿರುತ್ತಿದ್ದ ಯದುಕುಮಾರ್ ಹೆಂಡತಿಯನ್ನು ನಿರ್ಲಕ್ಷಿಸಿದ. ತನ್ನ ಮಗುವಿನ ಮುಖವನ್ನು ಕೂಡ ಅವನು ಸರಿಯಾಗಿ ನೋಡಿರಲಿಲ್ಲ. ಪತಿಯ ಅನೈತಿಕ ಸಂಬಂಧದ ಸುಳಿವು ಭುವನೇಶ್ವರಿಗೆ ಸಿಕ್ಕಿ, ಅವನು ಪ್ರೇಯಸಿಯ ಮನೆಯಲ್ಲಿದ್ದಾಗ ಭುವನೇಶ್ವರ ಿ ಪೊಲೀಸರ ಜತೆ ಅಲ್ಲಿಗೆ ತೆರಳಿ ಬಾಗಿಲು ತಟ್ಟಿದಾಗ ಎಷ್ಟು ಹೊತ್ತಾದರೂ ಬಾಗಿಲು ತೆರೆಯಲಿಲ್ಲ. ನಂತರ ಬಾಗಿಲು ತೆರೆದಾಗ ಗಂಡ ಪ್ರೇಯಸಿಯ ಜತೆ ಸಿಕ್ಕಿಬಿದ್ದು ಪೇಚಿಗೀಡಾಗಿದ್ದಾನೆ.