ಕಾಶ್ಮೀರ ಸಮಸ್ಯೆ ವಿಚಾರದಲ್ಲಿ ಮೂಗು ತೂರಿಸಲ್ಲ: ರಶ್ಯಾ
ಇಸ್ಲಾಮಾಬಾದ್ , ಶುಕ್ರವಾರ, 5 ಅಕ್ಟೋಬರ್ 2012 (13:37 IST)
ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ತಾನು ಮುಂದಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ರಶ್ಯಾ ಈ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ಥಾನಗಳೇ ಜತೆಯಾಗಿ ಕೂತು ಪರಿಹರಿಸುವ ಸಾಮರ್ಥ್ಯ ಹೊಂದಿವೆ ಎಂದು ಹೇಳಿದೆ.ಈ ವಿಚಾರವಾಗಿ ಮಾತನಾಡಿದ ವಿದೇಶಾಂಗ ಸಚಿವ ಸರ್ಜಿ ಲಾವ್ರೋವ್ ಉಭಯ ದೇಶಗಳು ತಮ್ಮೊಳಗಿನ ವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವಷ್ಟು ಶಕ್ತವಾಗಿವೆ. ಹಾಗಿರುವಾಗ ಕಾಶ್ಮೀರ ಪ್ರಶ್ನೆಯಲ್ಲಿ ನಾವು ಮೂಗುತೂರಿಸುವುದರಲ್ಲಿ ಅರ್ಥವೇ ಇಲ್ಲ . ಭಾರತ - ಪಾಕ್ ಪರಸ್ಪರ ವಿಶ್ವಾಸ ವೃದ್ಧಿಯ ಪ್ರಯತ್ನಗಳಲ್ಲಿ ನಿರತರಾಗಿರುವುದು ಸಂತೋಷದ ವಿಷಯ ಎಂದರು.ಉಭಯ ದೇಶಗಳಿಗೂ ಸಮಸ್ಯೆಯನ್ನು ಬಗೆಹರಿಸಬೇಕೆನ್ನುವ ಆಸಕ್ತಿ ಇರುವುದು ಶ್ಲಾಘನೀಯ ಎಂದ ಅವರು ಈ ನಿಟ್ಟಿನ ಪ್ರಯತ್ನಗಳು ಫಲಪ್ರದವಾಗುವ ದಿನ ದೂರವಿಲ್ಲ ಎಂದರು.