Webdunia - Bharat's app for daily news and videos

Install App

ಶಿವನ ಸಾನಿಧ್ಯದಲ್ಲಿ ಶಿವರಾತ್ರಿಯ ಸಂಭ್ರಮ

Webdunia
ಮಹಾ ಶಿವರಾತ್ರಿ ಆಂಗವಾಗಿ ಹೊಸೂರು ರಸ್ತೆಯ ಕೂಡ್ಲು ಗ್ರಾಮದ ಬೃಹತ್ ಶಿವನ ದೇವಾಲಯದಲ್ಲಿ ಈಗ ಸಂಭ್ರಮದ ವಾತಾವರಣ. 26 ಅಡಿ ಎತ್ತರದ ಧ್ಯಾನಸ್ಥ ಶಿವನ ವಿಗ್ರಹದಿಂದ ಪ್ರಸಿದ್ದಿಯಾಗಿರುವ ಕೂಡ್ಲುವಿನ ಮಾರುತಿ ಬಡಾವಣೆಯ ವೀರಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶಿವರಾತ್ರಿ ಪ್ರಯುಕ್ತ ಅದ್ದೂರಿ ಕಾರ್ಯಕ್ರಮ ಜರುಗಲಿದೆ. ಲೋಕ ಕಲ್ಯಾಣಾರ್ಥಕ್ಕಾಗಿ ಶೃಂಗೇರಿ ಮಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಏಪ್ರಿಲ್ ತಿಂಗಳಲ್ಲಿ ಮಹಾನ್ ಯಜ್ಞವೊಂದು ನಡೆಯಲಿದ್ದು, ಸಿದ್ಧತೆಗಳು ಆರಂಭಗೊಂಡಿದೆ.

ಏಪ್ರಿಲ್ 1 ರಿಂದ ಏಪ್ರಿಲ್ 12ರವರೆಗೆ ಈ ಮಹಾಯಜ್ಞಗಳನ್ನು ನಡೆಸಲು ಸಂಕಲ್ಪಿಸಿದ್ದು, ವೇದ ಬ್ರಹ್ಮಶ್ರೀ ಶ್ರೀ ಸುಬ್ರಮಣ್ಯ ಉಡುಪ ಮತ್ತು ರಮೇಶ ಬಾಯರಿ ಇವರುಗಳ ಸಮ್ಮುಖದಲ್ಲಿ 500 ಜನ ಪುರೋಹಿತರನ್ನೊಳಗೊಂಡ ಯಾಗಭೂಮಿಯಲ್ಲಿ ಸಹಸ್ರನಾಕೇರ ಮಹಾಗಣಪತಿ ಯಾಗ, ಸಹಸ್ರ ಚಂಡಿಕಾ ಹೋಮ, ಅಷ್ಟಪವಿತ್ರ ನಾಗಮಂಡಲದ ಜೊತೆಗೆ ಅತಿರುದ್ರ ಮಹಾಯಾಗ ನಡೆಯಲಿದೆ. ಮಹಾ ಶಿವರಾತ್ರಿಯ ಆಚರಣೆಯ ಜೊತೆಗೆ ಏಪ್ರಿಲ್ ತಿಂಗಳಲ್ಲಿ ಯಾಗ ನಡೆಸಲು ಸಂಪೂರ್ಣ ತಯಾರಿ ಸಹ ಸಾಗುತ್ತಿದೆ.

ಶಿವನ ಮೇಲಿನ ಭಕ್ತಿಯನ್ನು ಉದ್ದೀಪಿಸುವ ಸೆಲೆ ಮತ್ತು ಒಂದು ರಮಣೀಯ ಪ್ರವಾಸಿ ನೆಲೆ ಎರಡೂ ಒಂದೇ ಸ್ಥಳದಲ್ಲಿ ಸಿಗುವಂತಾಗಬೇಕು ಎಂದು ಕನಸು ಕಂಡ ನಗರದ ಖ್ಯಾತ ಉದ್ಯಮಿ ಆರ್.ಪ್ರಭಾಕರ್ ರೆಡ್ಡಿ ಹಾಗೂ ಅವರ ಪತ್ನಿ ದೀಪಾರವರು 2 ವರ್ಷಗಳ ಹಿಂದೆ ಈ ಶಿವನ ಮೂರ್ತಿಯನ್ನು ಸ್ಥಾಪಿಸಿದ್ದರು. ನಗರದ ಆಸ್ತಿಕ ಜನರನ್ನು ಈ ಕ್ಷೇತ್ರದತ್ತ ಸೆಳೆದು ಧಾರ್ಮಿಕ ಹಾಗೂ ಪ್ರವಾಸಿ ತಾಣವನ್ನಾಗಿ ರೂಪಿಸುವ ಉದ್ದೇಶ ಈ ದಂಪತಿಗಳದ್ದಾಗಿದೆ. ಅಲ್ಲದೆ, ಪ್ರತಿವರ್ಷ ನಡೆಯುವ ಹೋಮ ಹವನ ಹಾಗೂ ಶಿವರಾತ್ರಿ ಆಚರಣೆಯ ಜವಾಬ್ದಾರಿಯನ್ನೂ ಅವರು ಹೊತ್ತುಕೊಂಡಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಎಡೆಬಿಡದೆ 11 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಮೂರನೇ ವರ್ಷದ ಮಹಾಯಾಗ ಇದಾಗಿದ್ದು, ಪ್ರತಿದಿನ ಅನ್ನಸಂತರ್ಪಣೆಯೂ ನಡೆಯಲಿದೆ. ಈ ಐತಿಹಾಸಿಕ ಯಾಗ ಅತಿದೊಡ್ಡ ಯಾಗವಾಗಿ ಹೊರಹೊಮ್ಮಲಿದ್ದು, ಭಕ್ತರ ಮನದಲ್ಲಿ ಋುಷಿ ಮುನಿಗಳ ಕಾಲವನ್ನು ನೆನಪಿಸಲಿದೆ. ಈ ಯಜ್ಞದಲ್ಲಿ ಹಲವಾರು ಮಠದ ಸ್ವಾಮೀಜಿಗಳು ಹಾಗೂ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments