Webdunia - Bharat's app for daily news and videos

Install App

ಗವಿಯೊಳಗಿನ ಗಂಗಾಧರನಿಗೆ ಸೂರ್ಯಕಿರಣ ಸ್ಪರ್ಶ

Webdunia
ಸಂಕ್ರಾತಿ ಬಂತೆಂದರೆ ಸಾಕು, ಗವಿ ಗಂಗಾಧರೇಶ್ವರ ದೇವಾಲಯಕ್ಕೆ ನುಗ್ಗುವವರೇ ಅಧಿಕರು. ಇದಕ್ಕೆ ಕಾರಣ ಇಲ್ಲದಿಲ್ಲ. ಗುಹೆಯೊಳಗಿನ ಶಿವಲಿಂಗವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಸಂಕ್ರಾತಿ ದಿನದಂದು ಗುಹೆಯೊಳಗಿನ ಶಿವಲಿಂಗದ ಮೇಲೆ ಸೂರ್ಯ ಕಿರಣವು ಬೀಳುವುದೇ ಇಲ್ಲಿನ ವಿಶೇಷತೆ.

ಸುಮಾರು 20,000 ವರ್ಷಗಳ ಇತಿಹಾಸವಿರುವ ಈ ಶಿವಲಿಂಗವು ದಕ್ಷಿಣಾಭಿಮುಖವಾಗಿ ಸ್ವಯಂ ಉದ್ಭವವಾಗಿದೆ. ಇದು ಗೌತಮ ಮುನಿಗಳು ತಪಗೈದ ಪುಣ್ಯಸ್ಥಳವೆಂಬ ಐತಿಹ್ಯವಿದೆ. ಅಲ್ಲದೆ, ಛತ್ರಪತಿ ಶಿವಾಜಿ ಆದೇಶದ ಮೇರೆಗೆ ಈ ದೇವಾಲಯ ಸ್ಥಾಪಿತವಾಗಿದೆ. ಇದರ ಜೀರ್ಣೋದ್ಧಾರವನ್ನು ನಾಡಪ್ರಭು ಕೆಂಪೇಗೌಡರು ಮಾಡಿಸಿದ್ದರು ಎಂಬುದು ಐತಿಹ್ಯ.

ಇದರ ಇನ್ನೊಂದು ವೈಶಿಷ್ಟ್ಯವೆಂದರೆ, ಹೆಚ್ಚಿನೆಡೆ ಪಾರ್ವತಿಯು ಪರಮೇಶ್ವರನ ಎಡಭಾಗದಲ್ಲಿದ್ದರೆ, ಇಲ್ಲಿ ಪಾರ್ವತಿ ಶಿವನ ಬಲಭಾಗದಲ್ಲಿ ನೆಲೆಸಿರುತ್ತಾಳೆ. ದೇಗುಲದ ಬಳಿಯಲ್ಲಿ ಗೋಸಾಯಿ ಮಠದಲ್ಲಿ ಅವಾನಿ ಪೀಠವಿದೆ. ಕಲ್ಲಿನಿಂದ ಕೆತ್ತಲಾದ ಪೀನಪಾನ, ಚಂದ್ರಪಾನ, ಡಮರುಗಳು ವಿಶೇಷವಾಗಿ ಮೂಡಿ ಬಂದಿವೆ.

ಈ ಪ್ರಸಿದ್ಧಿಯನ್ನು ಗಮನಿಸಿ ಹಲವಾರು ಗಣ್ಯವ್ಯಕ್ತಿಗಳು ಭೇಟಿ ಇತ್ತಿದ್ದಾರೆ. ಹರಕೆ ಸಲ್ಲಿಸಿದರೆ ಈಡೇರುವುದು ಶತಸ್ಸಿದ್ಧ ಎನ್ನುವುದು ಅಲ್ಲಿನ ಭಕ್ತರ ಅಂಬೋಣ. ಒಟ್ಟಿನಲ್ಲಿ ಎಲ್ಲಾ ವೈಶಿಷ್ಟ್ಯ ಹೊಂದಿರುವ ಗವಿ ಗಂಗಾಧರೇಶ್ವರ ದೇವಾಲಯ ಅನನ್ಯ ಭಕ್ತಿಯ ತಾಣವಾಗಿ ಪ್ರಸಿದ್ದಿಯನ್ನು ಪಡೆದಿದೆ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments