Webdunia - Bharat's app for daily news and videos

Install App

ಇಂದೋರಿನ ಖಜ್ರಾನಾ ಗಣೇಶ

Webdunia
WDWD
ऊँ ಗಂ ಗಣಪತಯೇ ನಮೋ ನಮಃ
ಸಿದ್ಧಿ ವಿನಾಯಕಾಯ ನಮೋ ನಮಃ
ಅಷ್ಟ ವಿನಾಯಕಾಯ ನಮೋ ನಮಃ ಗಣಪತಿ ಬಪ್ಪಾ ಮೋರಿಯಾ...

ನಾವೆಲ್ಲರೂ ಗಣೇಶೋತ್ಸವವನ್ನು ಆಚರಿಸಿದ್ದೇವೆ. ಇಡೀ ದೇಶವೇ ಗಣಪನ ಜನ್ಮದಿನದ ಆಚರಣೆಯ ಸಡಗರದಲ್ಲಿದೆ. ಗಣೇಶೋತ್ಸವದ ಈ ಪರ್ವಕಾಲದಲ್ಲಿ ನಾವು ಇಂದೋರಿನ ಅತ್ಯಂತ ಪುರಾತನವಾದ ಮತ್ತು ಅಷ್ಟೇ ಪರಮ ಪವಿತ್ರ ಕ್ಷೇತ್ರ ಖಜ್ರಾನಾ ಮಂದಿರವನ್ನು ಪರಿಚಯಿಸಲಿದ್ದೇವೆ. ಈ ದೇವಸ್ಥಾನವನ್ನು ಕ್ರಿ.ಶ. 1735ರಲ್ಲಿ ಕಟ್ಟಲಾಗಿತ್ತು.

WDWD
ಮಂಗಲನಾಥ್ ಎನ್ನುವ ಅರ್ಚಕರು ಪ್ರತಿನಿತ್ಯ ಸ್ವಪ್ನಗಳನ್ನು ಕಾಣುತ್ತಿದ್ದರು. ಸ್ವಪ್ನದಲ್ಲಿ ಗಣೇಶ ದೇವರು ಪ್ರತ್ಯಕ್ಷನಾಗಿ ತಾನು ಸೂಚಿಸಿದ ಸ್ಥಳವನ್ನು ಅಗೆಯುವಂತೆ ಸೂಚನೆ ನೀಡಿದ್ದನಂತೆ.ಆ ಬಳಿಕ ಒಂದು ದಿನ ಅರ್ಚಕರು ರಾಣಿ ಅಹಲ್ಯಾ ಅವರ ಅರಮನೆಯ ನ್ಯಾಯ ಸಭಾಂಗಣಕ್ಕೆ ತೆರಳಿ ತಾನು ಕಂಡ ಸ್ವಪ್ನದ ಬಗ್ಗೆ ತಿಳಿಸಿದ್ದರು.

ರಾಣಿ ಅಹಲ್ಯಾ ಕೂಡಲೇ ಅರ್ಚಕರು ಸ್ವಪ್ನದಲ್ಲಿ ಕಂಡ ಸ್ಥಳವನ್ನು ಅಗೆಯುವಂತೆ ತನ್ನ ಸೇವಕರಿಗೆ ಆದೇಶಿಸಿದಳು.ಸೈನಿಕರು ಸ್ಥಳವನ್ನು ಅಗೆಯುತ್ತಿದ್ದಂತೆ ಗಣೇಶ ದೇವರ ಮೂರ್ತಿ ಕಂಡುಬಂದಿತು. ಈ ಮೂರ್ತಿಯನ್ನು ಖಜ್ರಾನಾ ಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು ಎಂಬುದು ಸ್ಥಳ ಪುರಾಣ.

ಗಣೇಶ ಮೂರ್ತಿಯನ್ನು ಮಂದಿರದಲ್ಲಿ ಪ್ರತಿಷ್ಠಾಪಿಸಿದ ಕೂಡಲೇ ಖಜ್ರಾನಾ ಮಂದಿರ ಎಲ್ಲಾ ಕಡೆ ಪ್ರಖ್ಯಾತಗೊಂಡಿತು. ಈ ದೇವಾಲಯಕ್ಕೆ ಸ್ವತಃ ಗಣೇಶ ದೇವರ ಆಶೀರ್ವಾದವಿರುವುದರಿಂದ ಎಲ್ಲ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾನೆ ಎನ್ನುವ ನಂಬಿಕೆ ಭಕ್ತರಲ್ಲಿ ಗಟ್ಟಿಯಾಗಿ ನೆಲೆ ನಿಂತಿದೆ.

ಖಜ್ರಾನಾ ಮಂದಿರದಲ್ಲಿ ಭಕ್ತರು ಭಕ್ತಿ ಮತ್ತು ಶ್ರದ್ಧೆಯಿಂದ ಮಂದಿರದಲ್ಲಿರುವ ಸ್ಥಳಕ್ಕೆ ದಾರವನ್ನು ಕಟ್ಟಿ ಬೇಡಿಕೊಂಡಲ್ಲಿ ಖಂಡಿತವಾಗಿ ಅವರ ಬೇಡಿಕೆಗಳು ಈಡೇರುತ್ತವೆ. ಬೇಡಿಕೆಗಳು ಈಡೇರಿದ ನಂತರ ತಾವು ಕಟ್ಟಿದ ದಾರವನ್ನು ಬಿಚ್ಚಬಹುದು.
ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ

WDWD
ಖಜ್ರಾನಾ ಮಂದಿರದ ಗಣೇಶ ದೇವರ ಮುಖ್ಯ ಮಂದಿರ ಸೇರಿದಂತೆ, ಮಂದಿರದ ಆವರಣ ತುಂಬಾ ವಿಶಾಲವಾಗಿದ್ದು, ಸುಂದರವಾಗಿದೆ. ಖಜ್ರಾನಾ ಮಂದಿರದಲ್ಲಿ ಇನ್ನಿತರ ದೇವರುಗಳ 33 ದೇವಾಲಯಗಳು ಇಲ್ಲಿವೆ. ಪ್ರಮುಖ ಮಂದಿರದಲ್ಲಿ ಶಿವ ಮತ್ತು ದುರ್ಗಾಮಾತೆಯ ಮೂರ್ತಿಗಳನ್ನು ಕಾಣಬಹುದಾಗಿದೆ.

ಮಂದಿರದ ಆವರಣದಲ್ಲಿ ಪ್ರಾಚೀನ ಕಾಲದ ಆಲದ ಮರವಿದ್ದು ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಆದ್ದರಿಂದ ಭಕ್ತರು ಆಲದ ಮರವನ್ನು ಸುತ್ತುಹಾಕಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸುತ್ತಾರೆ.

ಆಲದ ಮರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗಿಳಿಗಳು ಆಶ್ರಯವನ್ನು ಪಡೆದಿವೆ. ಗಿಳಿಗಳಿದ್ದ ಆಲದ ಮರದಿಂದಾಗಿ ಖಜ್ರಾನಾ ಮಂದಿರ ಇನ್ನಷ್ಟು ಸುಂದರವಾಗಿ ಕಂಡುಬರುತ್ತದೆ.
ಕೋಮು ಸೌಹಾರ್ದತೆ ಖಜ್ರಾನಾ ಮಂದಿರದ ವಿಶೇಷತೆಯಾಗಿದೆ. ಜಾತಿ ಮತ ಭೇದವೆನ್ನದೆ ಎಲ್ಲಾ ಜಾತಿ ಜನಾಂಗದವರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ.

WDWD
ನೂರಾರು ಜನರು ತಾವು ಖರೀದಿಸಿದ ಹೊಸ ವಾಹನಗಳ ಪೂಜೆಗಾಗಿ ದೇವಾಲಯಕ್ಕೆ ಆಗಮಿಸುತ್ತಾರೆ. ಗಣೇಶ ಉತ್ಸವವನ್ನು ಬಹು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಪ್ರತಿ ಬುಧವಾರದಂದು ಭಕ್ತರಿಂದ ಸಂಗ್ರಹಿಸಲಾದ 11 ಲಕ್ಷ ಮೋದಕಗಳನ್ನು ಗಣೇಶ ಉತ್ಸವದಲ್ಲಿ ದೇವ ಗಣೇಶನಿಗೆ ಅರ್ಪಿಸಲಾಗುತ್ತದೆ. ಗಣೇಶ ಮಂದಿರದ ಅಡಳಿತ ಮಂಡಳಿಯು, ಮಂದಿರದ ಪ್ರತಿಷ್ಠಾಪನೆಯ ಆರಂಭದಿಂದ ಅರ್ಚಕ ಮಹೇಶ್ ಭಟ್ ಅವರು ನಿರ್ವಹಿಸುತ್ತಿದ್ದರು.

ಕೆಲ ವರ್ಷಗಳ ಹಿಂದೆ ಮಂದಿರದ ಅಡಳಿತವನ್ನು ಜಿಲ್ಲಾಡಳಿತದ ಸುಪರ್ದಿಗೆ ಒಪ್ಪಿಸಲಾಗಿದೆ. ಮಂದಿರದ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಭಟ್ ಕುಟುಂಬ ಮಂದಿರದ ಅಡಳಿತವನ್ನು ನಿರ್ವಹಿಸುವಲ್ಲಿ ಜಿಲ್ಲಾಡಳಿತಕ್ಕೆ ತನ್ನಿಂದಾದ ಸಹಾಯವನ್ನು ನೀಡುತ್ತಿದೆ.

ಪ್ರಸ್ತುತ ಬಾಲಚಂದ್ರ ಭಟ್ ಮಂದಿರದ ನಿರ್ವಹಣೆ ಮಾಡುತ್ತಿದ್ದು, ವಿಶೇಷ ಸಂದರ್ಭಗಳಲ್ಲಿ ಪ್ರಧಾನ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಾರೆ. ಮಂದಿರವನ್ನು ಪುನರ್‌ನಿರ್ಮಾಣ ಮಾಡುವಂತೆ ಒತ್ತಾಯಿಸಿ ಅನೇಕ ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು ಎಂದು ಹೇಳಲಾಗುತ್ತದೆ.

ಯಾವಾಗ ಹೋಗಬಹುದು: ಮಂದಿರದ ದ್ವಾರಗಳು ಸದಾ ಕಾಲ ಭಕ್ತರಿಗಾಗಿ ತೆರೆದಿರುತ್ತವೆ. ಪ್ರತಿ ಬುಧವಾರದಂದು ಜಾತ್ರಾ ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷ ಆಚರಣೆಗಳು ನೋಡಬೇಕಾದಲ್ಲಿ ಗಣೇಶ ಚತುರ್ಥಿ ಹಬ್ಬದಂದು ಭೇಟಿ ನೀಡಬಹುದಾಗಿದೆ. ಹಬ್ಬದ ದಿನದಂದು ಗಣೇಶ ದೇವರಿಗೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ.
ತಲುಪುವ ದಾರಿ: ಇಂದೋರನ್ನು ಮಧ್ಯಪ್ರದೇಶದ ವಾಣಿಜ್ಯ ರಾಜಧಾನಿಯಂದು ಕರೆಯಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ -3 ( ಆಗ್ರಾ- ಮುಂಬೈರಸ್ತೆ )ರ ಮೂಲಕ ( ರಸ್ತೆ, ರೈಲ್ವೆ, ವಿಮಾನ) ಸುಲಭವಾಗಿ ತಲುಪಬಹುದಾಗಿದೆ.
ಇಲ್ಲಿ ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments