ಮೆಂತ್ಯದ ದೋಸೆ ತಯರಿಸಿ ಹಬೆಯಲ್ಲಿ ಬೇಯಿಸಿದ ಮೆಂತ್ಯದ ಸೊಪ್ಪಿನ ಪಲ್ಯದೊಂದಿಗೆ ತಿನ್ನುವುದರಿಂದ ಅಂಗಾಂಗಗಳ ನೋವು ನಿವಾರಣೆಯಾಗುತ್ತದೆ.
ಅಳಲೇ ಕಾಯಿಯನ್ನು ಶುಂಠಿ ರಸದಲ್ಲಿ ತೇದು ಗಂಧ ತೆಗೆಯಿರಿ. ಈ ಗಂಧವನ್ನು ಜೇನುತುಪ್ಪದಲ್ಲಿ ಸೇರಿಸಿ ಜ್ವರ ಬಂದಿರುವ ಮಗುವಿನ ನಾಲಗೆಯ ಮೇಲೆ ಸವರಿದರೆ ಗುಣವಾಗುವುದು.
ಮಕ್ಕಳಿಗೆ ನೆಗಡಿ ಇದ್ದರೆ ದೊಡ್ಡಪತ್ರೆ ಎಲೆ, ತುಳಸಿ ಎಲೆ ಮತ್ತು ವೀಳ್ಯೆದಲೆಯನ್ನು ಅರೆದು ರಸ ತೆಗೆದು ಜೇನು ತುಪ್ಪದೊಂದಿಗೆ ತಿನ್ನಿಸಿದರೆ ಗುಣ ಕಾಣುವುದು.
ಮಕ್ಕಳಿಗೆ ನೆಗಡಿ ಇದ್ದರೆ ದೊಡ್ಡಪತ್ರೆ ಎಲೆ, ತುಳಸಿ ಎಲೆ ಮತ್ತು ವೀಳ್ಯೆದಲೆಯನ್ನು ಅರೆದು ರಸ ತೆಗೆದು ಜೇನು ತುಪ್ಪದೊಂದಿಗೆ ತಿನ್ನಿಸಿದರೆ ಗುಣ ಕಾಣುವುದು.
ದುರ್ಬಲವಾದ ಮಕ್ಕಳ ಶರೀರಕ್ಕೆ ಕಡಲೆಕಾಯಿ ಎಣ್ಣೆ ಹಚ್ಚಿ ಬಿಸಿಲಿನಲ್ಲಿ ಹಲವು ಗಂಟೆಗಳು ನಿಲ್ಲಿಸುವುದರಿಂದ ಕೈಕಾಲುಗಳು ಶಕ್ತಿಯುತವಾಗುತ್ತವೆ.