Webdunia - Bharat's app for daily news and videos

Install App

ತಿರುಪತಿ ಬ್ರಹ್ಮೋತ್ಸವ: ಕಲ್ಪವೃಕ್ಷ ವಾಹನೋತ್ಸವ

Webdunia
ಸೋಮವಾರ, 6 ಅಕ್ಟೋಬರ್ 2008 (16:01 IST)
ಶ್ರೀ ವಾರಿ ಬ್ರಹ್ಮೋತ್ಸವದ ನಾಲ್ಕನೇ ದಿನವಾದ ಶನಿವಾರ ತಿರುಮಲ ಬೆಟ್ಟಗಳೊಡೆಯ ವೆಂಕಟೇಶ್ವರನನ್ನು ಕಲ್ಪ ವೃಕ್ಷ ವಾಹನದಲ್ಲಿ ವಿರಾಜಮಾನನಾಗಿ ರಾಜಪಥದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದಾಗ ನೆರೆದಿದ್ದ ಜನತೆ ಗೋವಿಂದಾ ಗೋವಿಂದಾ ಎನ್ನುತ್ತಾ ಭಕ್ತಿ ಭಾವದಲ್ಲಿ ಮಿಂದು ಪುಳಕಗೊಂಡರು.

ಕಲ್ಪವೃಕ್ಷ ವಾಹನದಲ್ಲಿ ವಿರಾಜಮಾನನಾದ ಶ್ರೀ ವೆಂಕಟೇಶ್ವರನು ನಾಲ್ಕೂ ಬೀದಿಗಳಲ್ಲಿ ದರುಶನ ನೀಡಿದಾಗ ನೆರೆದಿದ್ದ ಭಕ್ತ ಸಮೂಹದ ಕಣ್ಮನ ತುಂಬಿಕೊಂಡು ಪುನೀತ ಭಾವ ತಳೆದರು.

ದೇವಾಸುರರ ಸಮುದ್ರ ಮಥನ ಕಾಲದಲ್ಲಿ ಅಮೃತ ಉತ್ಪತ್ತಿಯಾದ ಸಂದರ್ಭದಲ್ಲಿ ಮಂದರ ಪರ್ವತದ ಮೇಲೆ ಆದಿಶೇಷನು ತನ್ನ ಹಿಡಿತ ಬಿಗಿಗೊಳಿಸಿದಾಗ ಕಲ್ಪವೃಕ್ಷವು ಉದಿಸಿತು. ಕಲ್ಪವೃಕ್ಷದ ಕೆಳಗೆ ಆಶ್ರಯ ಪಡೆದವರೆಲ್ಲರೂ ಯಾವುದೇ ರೀತಿಯ ತೊಂದರೆ, ಬಡತನದಿಂದ ಮುಕ್ತರಾಗಿರುತ್ತಾರೆ ಎನ್ನುತ್ತದೆ ಭಾಗವತ ಪುರಾಣ.

ಕಲ್ಪವೃಕ್ಷ ವಾಹನೋತ್ಸವವು ಪರಿಸರ, ಹಸಿರು ಕಾಡು, ಮಾಲಿನ್ಯ ನಿವಾರಣೆಗೆ ನಾವು ನೀಡಬೇಕಾಗಿರುವ ಮಹತ್ವದ ಸಂಕೇತವಾಗಿದೆ. ಕಲ್ಪಿಸಿದ್ದನ್ನು ಕೊಡಬಲ್ಲ ಸಾಮರ್ಥ್ಯವಿರುವ ದೇವರು ಎಂದೇ ವೆಂಕಟೇಶ್ವರನನ್ನು ನುತಿಸಲಾಗುತ್ತದೆ.

ಕಲ್ಪವೃಕ್ಷ ವಾಹನವು ಹಚ್ಚ ಹಸಿರಿನಿಂದ ಕೂಡಿ ಭಕ್ತರ ಮನದಲ್ಲಿ ವಿದ್ಯುತ್ ಸಂಚಾರವುಂಟು ಮಾಡುತ್ತದೆ. ಇದರಲ್ಲಿ ಕಲ್ಪವೃಕ್ಷ ಮಾತ್ರವಲ್ಲದೆ, ಕಾಮಧೇನು ಮತ್ತು ಚಿಂತಾಮಣಿಯ ಅಲಂಕಾರಗಳೂ ಕಂಗೊಳಿಸುತ್ತವೆ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments