Webdunia - Bharat's app for daily news and videos

Install App

ತಿರುಪತಿಯಲ್ಲಿ ಸರ್ವ ಭೂಪಾಲ ವಾಹನೋತ್ಸವ

Webdunia
ಸೋಮವಾರ, 6 ಅಕ್ಟೋಬರ್ 2008 (16:17 IST)
ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮೋತ್ಸವದ ಅಂಗವಾಗಿ ಶನಿವಾರ (ಅ.4) ಶ್ರೀ ಸ್ವಾಮಿಗೆ ರಾಜರ ರಾಜ ಅಂದರೆ ಸರ್ವಭೂಪಾಲ ವಾಹನೋತ್ಸವವು ವಿಜೃಂಭಣೆಯಿಂದ ಜರುಗಿತು.

ಭೂಮಿ, ನೀರು ಮತ್ತು ಆಕಾಶದ ರಾಜರುಗಳೇ ಭೂಪಾಲರು. ಅವರೆಲ್ಲರೂ ಶ್ರೀ ಸ್ವಾಮಿಯನ್ನು ವಾಹನ ಸೇವೆ ನಡೆಸುತ್ತಾರೆ. ಸರ್ವಭೂಪಾಲರಲ್ಲದೆ, ಅಷ್ಟ ದಿಕ್ಪಾಲಕರೂ ಈ ವೈಭವದ ಸೇವೆಯಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ ಎಂಬುದು ನಂಬಿಕೆ.

ಅಷ್ಟ ದಿಕ್ಪಾಲರು ಶ್ರೀ ವೆಂಕಟೇಶ್ವರನ ಸೇವಾ ಕೈಂಕರ್ಯದಲ್ಲಿ ಬದ್ಧರಾಗಿದ್ದು, ಅವರೆಲ್ಲರೂ ಶ್ರೀ ಸ್ವಾಮಿಗೆ ಅಧೀನವಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಯಾವುದೇ ರೀತಿಯ ತಪ್ಪುಗಳಾಗದಂತೆ ಎಚ್ಚರ ವಹಿಸಬೇಕಾಗುತ್ತದೆ ಎಂಬ ಸಂದೇಶವನ್ನು ಈ ಸರ್ವಭೂಪಾಲ ವಾಹನ ಸೇವೆಯು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ ದೇವಸ್ಥಾನದ ಮುಖ್ಯ ಅರ್ಚಕ ಡಾ.ಎ.ವಿ.ರಮಣ ದೀಕ್ಷಿತರು.

ಅಷ್ಟ ದಿಕ್ಪಾಲಕರೆಂದರೆ ಇಂದ್ರ, ಅಗ್ನಿ, ಯಮ, ನಿಋತಿ, ವರುಣ, ವಾಯು, ಕುಬೇರ ಹಾಗೂ ಪರಮೇಶ್ವರ. ಇವರೆಲ್ಲರನ್ನೂ ನಿಯಂತ್ರಿಸುವ ಶ್ರೀ ವೆಂಕಟೇಶ್ವರನು ಸರ್ವಭೂಪಾಲ ವಾಹನದಲ್ಲಿ ಆಸೀನನಾಗುವುದು, ಇಡೀ ಜಗತ್ತೇ ಆತನ ನಿಯಂತ್ರಣದಲ್ಲಿದೆ, ಜಗತ್ತಿನ ಜನರು ಸಕಾಲದಲ್ಲಿ, ಮಳೆ, ಬೆಳೆ ಪಡೆದು ಸಮೃದ್ಧಿ ಹೊಂದುತ್ತಾರೆ ಎಂಬುದರ ಸಂಕೇತ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments