" ಬಿಜೆಪಿಯನ್ನು ಬೆಂಬಲಿಸದ ಹಲವರು ಕೂಡಾ ಅಟಲ್ ಬಿಹಾರಿ ವಾಜಪೇಯಿಯನ್ನು ಒಪ್ಪಿಕೊಂಡಂತೆ, ನರೇಂದ್ರ ಮೋದಿ ಬದಲಿಗೆ ಸುಷ್ಮಾರನ್ನು ಜನರು ಸ್ವೀಕರಿಸಲು ಸಿದ್ದರಿದ್ದಾರೆ" ಎಂದು ದಿಗ್ವಿಜಯ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮೋದಿ ಮತ್ತು ಸುಷ್ಮಾರನ್ನು ಸೇರಿದಂತೆ ಪಕ್ಷದ ಹಿರಿಯ ನಾಯಕರ ನಡುವೆ ಭಿನ್ನಮತವಿದೆ ಎನ್ನುವ ಸಮಯದಲ್ಲಿ ದಿಗ್ವಿಜಯ ಈ ಹೇಳಿಕೆಯನ್ನು ನೀಡಿದ್ದಾರೆ. ಜಸ್ವಂತ್ ಸಿಂಗರಿಗೆ ಟಿಕೆಟ್ ನಿರಾಕರಿಸಿದ್ದಕ್ಕಾಗಿ ನೊಂದಿರುವ ಸುಷ್ಮಾ "ಇದೊಂದು ತಪ್ಪು ನಡೆ ಎಂದು ಹೇಳಿದ್ದರು".
" ಬಿಜೆಪಿಯ ಎಲ್ಲ ನಿರ್ಧಾರಗಳನ್ನು ಮೋದಿಯೇ ತೆಗೆದು ಕೊಳ್ಳುತ್ತಾರೆ. ಬಿಜೆಪಿ ಎಂದರೆ ಮೋದಿ, ಮೋದಿ ಎಂದರೆ ಬಿಜೆಪಿ" ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಲೇವಡಿ ಮಾಡಿದ್ದಾರೆ.
ವಾರಣಾಸಿಯಲ್ಲಿ ಮೋದಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ? ಎಂದು ಕೇಳಿದಾಗ "ನಾನು ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ" ಎಂದರು.