ಖಾಸಗಿ ಸುದ್ದಿ ವಾಹಿನಿ ವರದಿಗಾರರು ನೀವು ಮೋದಿ ಪ್ರೇಮಿಯೇ ಎಂದು ಕೇಳಿದಾಗ ಉತ್ತರಿಸಿದ ಕುಮಾರ್ "ನಾವು ಕವಿಗೋಷ್ಠಿಗೆ ಹೋದರೆ ಎಲ್ಲರಿಗಿಂತ ಮುಂದೆ ಕುಳಿತಿರುವವರ ಬಗ್ಗೆ ಚರ್ಚಿಸುತ್ತೇವೆ. ಇದು ಬಹಳ ಸರಳವಾದ ವಿಚಾರ "ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿ, ಈ ಎರಡರಲ್ಲಿ ನಿಮ್ಮ ಆಯ್ಕೆ ಯಾವುದು? ನೀವು ಯಾರನ್ನು ಬೆಂಬಲಿಸುತ್ತಿರಾ? ಎಂಬ ಪ್ರಶ್ನೆಗೆ ಪ್ರತಿಯಾಗಿ "ನಾನು ಬಿಜೆಪಿಯನ್ನು ಬೆಂಬಲಿಸುತ್ತೇನೆ. ಇವೆರಡರ ನಡುವೆ ನನ್ನ ಆಯ್ಕೆ ಬಿಜೆಪಿ. ಗಾಜಿಯಾಬಾದ್ ಲೋಕಸಭಾ ಚುನಾವಣೆಯಲ್ಲಿ ನಾನು ರಾಜನಾಥ್ ಸಿಂಗ್ರವರಿಗೆ ಮತ ನೀಡಿದ್ದೆ. ಕಾಂಗ್ರೆಸ್ ಭ್ರಷ್ಟಾಚಾರದ ತಾಯಿ" ಎಂದು ಅವರು ಹೇಳಿದರು.
ಆಮ್ ಆದ್ಮಿಗೆ ಸೇರುವ ಮೊದಲು ಕುಮಾರ ನರೇದ್ರ ಮೋದಿಯವರ ಅಭಿಮಾನಿಯಾಗಿದ್ದರು. ತಮ್ಮ ಕವನವೊಂದರಲ್ಲಿ ನರೇಂದ್ರ ಮೋದಿಯನ್ನು ಅವರು ಶಿವನಿಗೆ ಹೋಲಿಸಿದ್ದರು.
ಕೇಜ್ರಿವಾಲ್ರಿಗೆ ಒಮ್ಮೆ ಮಾಯಾವತಿ ಮತ್ತು ನರೇಂದ್ರ ಮೋದಿ ನಡುವೆ ಯಾರನ್ನು ಪ್ರಧಾನಿಯಾಗಿ ನೋಡಲು ಬಯಸುತ್ತೀರಾ ಎಂದು ಕೇಳಿದಾಗ "ನನ್ನ ತಲೆಗೆ ಬಂದೂಕು ಹಿಡಿದು ಆ ಪ್ರಶ್ನೆ ಕೇಳಿದರೆ ನಾನು ಮೋದಿಯ ಕಡೆಗೆ ವಾಲುತ್ತೇನೆ" ಎಂದು ಹೇಳಿದ್ದರು.