ಜಾರ್ಖಂಡ್ನಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸೋನಿಯಾ ಮೋದಿಯ ಹೆಸರನ್ನು ತೆಗೆದುಕೊಳ್ಳದೇ "ವಿರೋಧ ಪಕ್ಷದ ಕೆಲವು ನಾಯಕರು, ಕನಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಾಂತ್ರಿಕ ದಂಡದ ಮೂಲಕ ಒಂದೇ ದಿನದಲ್ಲಿ ಎಲ್ಲವನ್ನು ತಾವು ಬದಲಾಯಿಸಬಹುದು ಎಂದವರು ತಿಳಿದಿದ್ದಾರೆ" ಎಂದು ಟೀಕಿಸಿದರು.
.
" ಪ್ರಜಾಪ್ರಭುತ್ವದಲ್ಲಿ ಕೇವಲ ಒಬ್ಬರು ಮಾತ್ರ ಅಧಿಕಾರ ಪಡೆದುಕೊಳ್ಳುವುದಕ್ಕೆ ಅವಕಾಶ ನೀಡಬಾರದು." ಎಂದ ಅವರು ತಮ್ಮ ಭಾಷಣದಲ್ಲಿ ಮೋದಿ ಹೆಸರನ್ನು ಸಂಪರ್ಕಿಸಿ ಬಳಸಲಿಲ್ಲ. ಹಿಂಸೆಯನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಸೇರುವಂತೆ ಮಾವೋವಾದಿಗಳನ್ನವರು ಒತ್ತಾಯಿಸಿದರು.
ಕಲ್ಲಿದ್ದಲು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡುತ್ತ , ಕಲ್ಲಿದ್ದಲು ಕಾರ್ಮಿಕರ ಸ್ಥಿತಿಯನ್ನುಉತ್ತಮಗೊಳಿಸುವ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಲ್ಲಿದ್ದಲು ಗಣಿಗಳನ್ನು ರಾಷ್ಟ್ರೀಕೃತಗೊಳಿಸಿದ್ದರು ಎಂದು ಅವರು ಹೇಳಿದರು.
ಸೋನಿಯಾ ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಸಾಧನೆಗಳನ್ನು ವಿವರಿಸಿದರು.