ದಕ್ಷಿಣ ದೆಹಲಿಯ ಅಂಬೇಡ್ಕರ್ ನಗರದಲ್ಲಿ ಸುಮಾರು 15,000 ಜನರು ಸೇರಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಕಳೆದ "15 ವರ್ಷಗಳಿಂದ ದೆಹಲಿಯಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದೆ.ಆದರೂ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಕಂಡಿದೆ" ಎಂದರು.
" ಅಭಿವೃದ್ಧಿ ಕೆಲಸ ಮಾಡಿ ಆದರೆ, ಜನರೊಂದಿಗಿನ ಹಳೆಯ ಸಂಬಂಧವನ್ನು ತೆರೆದಿಡಿ, ಎಂದಿಗೂ ಮುಚ್ಚದಿರಿ ಎಂದು ಎಂದು ದೆಹಲಿ ನಿವಾಸಿಗಳು ಕಾಂಗ್ರೆಸ್ಗೆ ಸಂದೇಶವನ್ನು ನೀಡಿದ್ದಾರೆ" ಎಂದು ಅವರು ಹೇಳಿದರು.
ಇದೇ ವೇದಿಕೆಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ಸಮಯದಲ್ಲೂ ರಾಹುಲ್ ಮಾತನಾಡಿದ್ದರು. ಆದರೆ ಆ ಸಮಯದಲ್ಲಿ ಜನರ ಹಾಜರಾತಿ ತುಂಬ ಕಡಿಮೆ ಇದ್ದಿದ್ದು ದೊಡ್ಡ ಸುದ್ದಿ ಮಾಡಿತ್ತು. ಆ ಸನ್ನಿವೇಶ ಪುನರಾವರ್ತನೆಯಾಗಲು ಅವಕಾಶ ಕೊಡಬಾರದೆಂದು ಪಕ್ಷದ ನಾಯಕರು ಈ ಬಾರಿ ಜಾಗರೂಕರಾಗಿದ್ದರು.
ರಾಹುಲ್ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಲು ಆರಂಭಿಸಿದ ಕೂಡಲೇ ಜನರು ಸಭೆಯನ್ನು ಬಿಟ್ಟು ಹೊರ ಹೋಗಲು ಪ್ರಾರಂಭಿಸಿದ್ದರು. ಆಗ ರಾಹುಲ್ ಜತೆ ವೇದಿಕೆ ಹಂಚಿಕೊಂಡಿದ್ದ ಆಗಿನ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮೈದಾನವನ್ನು ಬಿಟ್ಟು ತೆರಳದಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿರುವುದು ಕ್ಯಾಮರಾದಲ್ಲಿ ದಾಖಲಾಗಿತ್ತು. ಈ ಘಟನೆಯ ನಂತರ ಕಾಂಗ್ರೆಸ್ ವಿರೋಧ ಪಕ್ಷಗಳಿಂದ ತೀವೃ ಟೀಕೆಯನ್ನು ಎದುರಿಸಿತ್ತು .