Webdunia - Bharat's app for daily news and videos

Install App

ಸಹರಾಣಾಪುರದಲ್ಲಿ ಮೋದಿ ಅಲೆ ಇಲ್ಲ, ನಾನು ಗೆಲ್ಲುತ್ತೇನೆ :ಇಮ್ರಾನ್ ಮಸೂದ್

Webdunia
ಗುರುವಾರ, 10 ಏಪ್ರಿಲ್ 2014 (16:11 IST)
ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿಯನ್ನು ತುಂಡು ತುಂಡಾಗಿ ಕತ್ತರಿಸುತ್ತೇನೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಇತ್ತೀಚಿಗೆ ಬಂಧಿಸಲ್ಪಟ್ಟಿದ್ದ ಸಹರಾಣಾಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ, ಇಮ್ರಾನ್ ಮಸೂದ್ ತನ್ನ ಗೆಲುವಿನ ಬಗ್ಗೆ ತನಗೆ ವಿಶ್ವಾಸವಿದೆ. ತಮ್ಮ ಕ್ಷೇತ್ರದಲ್ಲಿ ಮೋದಿ ಅಲೆ ಇಲ್ಲ ಎಂದು ಹೇಳಿದ್ದಾರೆ.
PTI

ಸುದ್ದಿಗಾರರೊಂದಿಗೆ ಮಾತನಾಡಿದ ವಿವಾದಾತ್ಮಕ ಕಾಂಗ್ರೆಸ್ ಶಾಸಕ, "ಸಹರಾಣಾಪುರದಲ್ಲಿ ಮೋದಿ ಅಲೆ ಕಿಂಚಿತ್ ಕೂಡ ಇಲ್ಲ. ನಾನು ಇಲ್ಲಿ ಜಯಗಳಿಸುತ್ತೇನೆ " ಎಂದರು.

" ಸೇಡಿಗಾಗಿ ಮತ " ಎಂಬ ಹೇಳಿಕೆಯನ್ನು ನೀಡಿ ಸುದ್ದಿ ಮಾಡಿದ್ದ ಮೋದಿ ಆಪ್ತ ಸಹಾಯಕ ಅಮಿತ್ ಶಾ, ಬಂಧನವನ್ನು ಮುಂದೂಡುತ್ತಿರುವ ಅಧಿಕಾರಿಗಳ ಮೇಲೂ ಕಾಂಗ್ರೆಸ್ ಶಾಸಕ ಕಿಡಿಕಾರಿದ್ದಾರೆ.

ಅಮಿತ್ ಶಾ ಅವರನ್ನು ತಕ್ಷಣ ಬಂಧಿಸುವಂತೆ ಕೋರಿರುವ ಮಸೂದ್, "ದ್ವಿಮುಖ ನೀತಿ ಏಕೆ? ನಿಸ್ಸಂಶಯವಾಗಿ ಅಮಿತ್ ಶಾರವರನ್ನು ಬಂಧಿಸಬೇಕು " ಎಂದು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಸಾಮುದಾಯಿಕ ಗಲಭೆ ಸಂದರ್ಭದಲ್ಲಿ ನಿಮ್ಮನ್ನು ಅಪಮಾನ ಮಾಡಿದವರ ವಿರುದ್ಧ ಮತ ಚಲಾಯಿಸಿ ಎಂದು ಮುಜಾಫರ್‌ನಗರದ ಮತದಾರರಲ್ಲಿ ಕೇಳಿಕೊಂಡಿದ್ದ ಶಾ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಸೂದ್ ಸಹ ಮೋದಿಯನ್ನು ತುಂಡು ತುಂಡಾಗಿ ಕತ್ತರಿಸುತ್ತೇನೆ ಎಂಬ ವೈರತ್ವದ ಹೇಳಿಕೆ ನೀಡಿದ ಕಾರಣಕ್ಕಾಗಿ ಬಂಧಿಸಲ್ಪಟ್ಟಿದ್ದರು.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments