" ಬಿಜೆಪಿ ಅಥವಾ ಕಾಂಗ್ರೆಸ್ ನೇತೃತ್ವದ ಮೈತ್ರಿ ಸೇರಲು ಎಲ್ಲಾ ಆಯ್ಕೆಗಳನ್ನು ತೃಣಮೂಲ ಕಾಂಗ್ರೆಸ್ ನಾಯಕಿ ಮುಕ್ತವಾಗಿಟ್ಟುಕೊಂಡಿದ್ದಾರೆ" ಎಂದು ಹಿರಿಯ ಸಿಪಿಐ (ಎಂ) ನಾಯಕ ಸೂರ್ಯ ಕಾಂತಾ ಮಿಶ್ರಾ ಅಭಿಪ್ರಾಯ ಪಟ್ಟಿದ್ದಾರೆ.
ಬಂಗಾಳಿ ಸುದ್ದಿ ವಾಹಿನಿ ಜತೆ ಮಾತನಾಡುತ್ತಿದ್ದ ಮಿಶ್ರಾ, ಬಿಜೆಪಿ ಮತ್ತು ಕಾಂಗ್ರೆಸ್ ಸಹ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗೆ 'ತಮ್ಮ ಬಾಗಿಲನ್ನು ತೆರೆದಿಟ್ಟಿವೆ' ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ವಿರುದ್ಧ ತನ್ನ ಆರೋಪಗಳನ್ನು ಹೊರತಾಗಿಯೂ, ರಾಜ್ಯದಲ್ಲಿ ಒಳಗೆ ಬಿಜೆಪಿ ಗೆಲ್ಲಲು ಮಮತಾರವರೇ ಜವಾಬ್ದಾರರಾಗುತ್ತಾರೆ ಎಂದು ಮಿಶ್ರಾ ಹೇಳಿದರು.
ಜನರ ಹಿತಾಸಕ್ತಿಯ ಮೇರೆಗೆ ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ಶಕ್ತಿ ತೃತೀಯ ರಂಗ ಅಧಿಕಾರಕ್ಕೆ ಬರುವ ನಂಬಿಕೆಯನ್ನು ಮಿಶ್ರಾ ವ್ಯಕ್ತಪಡಿಸಿದರು.