Webdunia - Bharat's app for daily news and videos

Install App

ನಾಮಪತ್ರ ಸಲ್ಲಿಸುವ ಕೊನೆಯ ದಿನ ನಾಪತ್ತೆಯಾದ ಆಪ್‌ ಉಮೇದುವಾರ

Webdunia
ಗುರುವಾರ, 10 ಏಪ್ರಿಲ್ 2014 (11:27 IST)
ಗುಜರಾತ್‌ನ ವಿಧಾನಸಭಾ ಉಪಚುನಾವಣೆಯಲ್ಲಿ ಆಪ್ ಪಕ್ಷದಿಂದ ಕಣಕ್ಕಿಳಿದಿದ್ದ ಉಮೇದುವಾರ ನಾಪತ್ತೆಯಾಗಿ ಕೇಜ್ರಿವಾಲ್‌ರ ಪಕ್ಷಕ್ಕೆ ಬಲವಾದ ಆಘಾತ ತಂದಿಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
PTI

" ಜುನಾಗಡ ಜಿಲ್ಲೆಯ ವಿಸಾವದರ್ ವಿಧಾನಸಭಾ ಕ್ಷೇತ್ರದಿಂದ ಆಪ್‌ನ ಟಿಕೇಟ್ ಪಡೆದಿದ್ದ ಕನಕರಾಯ್ ಕನಾನಿ ಬುಧವಾರ ಬೆಳಗ್ಗಿನಿಂದ ಕಾಣಿಸುತ್ತಿಲ್ಲ" ಎಂದು ಆಪ್‌ನ ವಕ್ತಾರ ಹರ್ಷಿಲ್ ನಾಯಕ್ ತಿಳಿಸಿದ್ದಾರೆ.

ಧೀರುಬಾಯಿ ಭಾಕಡ್ ರ ಬದಲಾಗಿ ಕನಾನಿಗೆ ವಿಸಾವದರ್ ಕ್ಷೇತ್ರದ ಟಿಕೇಟ್‌ನ್ನು ನೀಡಲಾಗಿತ್ತು. ಗುಜರಾತಿನ 7 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿದೆ.

" ಅವರೆಲ್ಲಿದ್ದಾರೆ ಎಂದು ಪತ್ತೆ ಹಚ್ಚುತ್ತಿದ್ದೇವೆ. ಅವರು ತಮ್ಮ ಮೊಬೈಲ್‌ನ್ನು ಸ್ವಿಚ್ಡ್ ಆಪ್ ಮಾಡಿರುವುದರಿಂದ ಅವರನ್ನು ಕಂಡು ಹಿಡಿಯುವುದು ಕಷ್ಟವಾಗುತ್ತಿದೆ" ಎಂದು ನಾಯಕ್ ಹೇಳಿದ್ದಾರೆ.

ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ನಾಪತ್ತೆಯಾಗಿರುವ ಆಪ್ ಉಮೇದುವಾರ ಇನ್ನೂ ಸಹ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments