" ಜುನಾಗಡ ಜಿಲ್ಲೆಯ ವಿಸಾವದರ್ ವಿಧಾನಸಭಾ ಕ್ಷೇತ್ರದಿಂದ ಆಪ್ನ ಟಿಕೇಟ್ ಪಡೆದಿದ್ದ ಕನಕರಾಯ್ ಕನಾನಿ ಬುಧವಾರ ಬೆಳಗ್ಗಿನಿಂದ ಕಾಣಿಸುತ್ತಿಲ್ಲ" ಎಂದು ಆಪ್ನ ವಕ್ತಾರ ಹರ್ಷಿಲ್ ನಾಯಕ್ ತಿಳಿಸಿದ್ದಾರೆ.
ಧೀರುಬಾಯಿ ಭಾಕಡ್ ರ ಬದಲಾಗಿ ಕನಾನಿಗೆ ವಿಸಾವದರ್ ಕ್ಷೇತ್ರದ ಟಿಕೇಟ್ನ್ನು ನೀಡಲಾಗಿತ್ತು. ಗುಜರಾತಿನ 7 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿದೆ.
" ಅವರೆಲ್ಲಿದ್ದಾರೆ ಎಂದು ಪತ್ತೆ ಹಚ್ಚುತ್ತಿದ್ದೇವೆ. ಅವರು ತಮ್ಮ ಮೊಬೈಲ್ನ್ನು ಸ್ವಿಚ್ಡ್ ಆಪ್ ಮಾಡಿರುವುದರಿಂದ ಅವರನ್ನು ಕಂಡು ಹಿಡಿಯುವುದು ಕಷ್ಟವಾಗುತ್ತಿದೆ" ಎಂದು ನಾಯಕ್ ಹೇಳಿದ್ದಾರೆ.
ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ನಾಪತ್ತೆಯಾಗಿರುವ ಆಪ್ ಉಮೇದುವಾರ ಇನ್ನೂ ಸಹ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ.