ಜಾರ್ಖಂಡ್ನ ಕೊಡರ್ಮಾದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ತನ್ನ ಭರವಸೆಗಳನ್ನು ಸಮರ್ಥವಾಗಿ ಈಡೇರಿಸಲು ಮತ್ತು ಇತರ ದೇಶಗಳು ಭಾರತವನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಲು ಎನ್ಡಿಎಗೆ 300 ಸ್ಥಾನಗಳ ಅಗತ್ಯವಿದೆ ಎಂದರು.
" ಕಳೆದ 60 ವರ್ಷಗಳಲ್ಲಿ ಆಡಳಿತ ನಡೆಸಿದವರು ರಾಷ್ಟ್ರವನ್ನು ಯಾವ ರೀತಿಯಲ್ಲಿ ಹಾಳು ಮಾಡಿದರು ಎಂದು ನಾವೆಲ್ಲ ನೋಡಿದ್ದೇವೆ. ಇದು ದೇಶವನ್ನು ಆಡಳಿತಗಾರರಿಂದ ಮುಕ್ತಗೊಳಿಸ ಬೇಕಾದ ಸಮಯ. ಪ್ರಜಾಪ್ರಭುತ್ವದಲ್ಲಿ ನಮಗೆ ಆಳ್ವಿಕೆ ನಡೆಸುವವರ ಅಗತ್ಯವಿಲ್ಲ. ನಮಗೆ ಸೇವಕರ ಅಗತ್ಯವಿದೆ" ಎಂದು ಅವರು ಹೇಳಿದರು.
" ನಾನು ನಿಮ್ಮ ಸೇವಕನಾಗಿ ಬರುತ್ತೇನೆ. ಆಡಳಿತಗಾರನಾಗಿ ಅಲ್ಲ. ನಾನು ಬಡವರ ಮಾತನ್ನು ಆಲಿಸಲು ಬಯಸುತ್ತೇನೆ".
" ಮೋದಿ ಪ್ರಧಾನಿಯಾಗುತ್ತಾರೆ ಅಥವಾ ಆಗುವುದಿಲ್ಲ, ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಅಥವಾ ಇಲ್ಲ ಎನ್ನುವುದು ನಮಗೆ ಪ್ರಮುಖವಾದುದಲ್ಲ. ಆದರೆ ನಾವು ಬಡವರ, ಬುಡಕಟ್ಟಿನವರ, ತುಳಿತಕ್ಕೊಳಗಾದವರ ಮಾತನ್ನು ಆಲಿಸಲು ಬಯಸುತ್ತೇವೆ " ಎಂದು ಅವರು ಹೇಳಿದರು.
" ನೀವು ನಿಮ್ಮ ಅಜ್ಜಿ ಮತ್ತು ಪೋಷಕರು ಬಾಳಿದ ಕಠಿಣ ಜೀವನವನ್ನೇ ಬಯಸುವಿರಾ? ನೀವು ನಿಮ್ಮ ಜೀವನದಲ್ಲಿ ಸುಧಾರಣೆಯನ್ನು ಬಯಸುತ್ತೀರಾ? ದೆಹಲಿಯಲ್ಲಿ ಕುಳಿತಿರುವವರು ನಿಮ್ಮ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದಾರಾ? ಮತ್ತೆ ಯಾಕೆ ನೀವು ಅವರನ್ನು ನಂಬುತ್ತಿದ್ದಿರಾ?" ಎಂದು ಅವರು ಪ್ರಶ್ನಿಸಿದರು.