Webdunia - Bharat's app for daily news and videos

Install App

ನಮೋ ಸ್ತುತಿಯನ್ನು ಮನುಷ್ಯರಿಗೆ ಬಳಸುವುದು ದೇವರನ್ನು ಅಪಮಾನಿಸಿದಂತೆ: ಜಸ್ವಂತ್ ಸಿಂಗ್

Webdunia
ಮಂಗಳವಾರ, 25 ಮಾರ್ಚ್ 2014 (19:44 IST)
ಬರ್ಮಾರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿರುವ ಬಿಜೆಪಿಯ ಮಾಜಿ ನಾಯಕ ಜಸ್ವಂತ್ ಸಿಂಗ್ ಇಂದು ನಾಮಪತ್ರ ಸಲ್ಲಿಸಿದರು.
PTI
ಆ ಸಂದರ್ಭದಲ್ಲಿ ಮಾತನಾಡಿದ 76 ವರ್ಷ ವಯಸ್ಸಿನ ಸಿಂಗ್ "ನಮೋ ದೇವರಿಗಾಗಿ ಹೇಳಲ್ಪಡುವ ಭಜನೆ. ಮನುಷ್ಯರಿಗಾಗಿ ಬಳಸುವುದಲ್ಲ. ನಮೋ ಸ್ತುತಿಯನ್ನು ಬಳಸಿ ಮನುಷ್ಯರನ್ನು ದೇವರೆಂದು ಬಿಂಬಿಸುವುದು ದೇವರನ್ನು ಅಪಮಾನಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

" ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಎರಡನೇ ಬಾರಿಗೆ ಫೋನ್ ಮೂಲಕ ನನ್ನನ್ನು ಪಕ್ಷದಿಂದ ಹೊರಹಾಕಿದ್ದಾರೆ. ಆದರೆ ಬಿಜೆಪಿ ಇನ್ನೂ ಅದನ್ನು ದೃಢೀಕರಿಸಿಲ್ಲ".

" ಈ ಹಿಂದೆ ನಾನು ನನ್ನ ಪುಸ್ತಕದಲ್ಲಿ ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಹೊಗಳಿದ್ದಕ್ಕಾಗಿ 2009 ರಲ್ಲಿ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಆದರೆ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಒತ್ತಾಯದ ಮೇರೆಗೆ 10 ತಿಂಗಳ ನಂತರ ಮರು ಸೇರ್ಪಡೆ ಮಾಡಿಕೊಳ್ಳಲಾಗಿತ್ತು".

" ಮೊದಲ ಬಾರಿ ಪಕ್ಷದಿಂದ ಹೊರಹಾಕಿದ ನಂತರ ನಾನು ಬಿಜೆಪಿಗೆ ಮರಳ ಬಾರದಿತ್ತು" ಎಂದು ಜಸ್ವಂತ್ ಸಿಂಗ್ ವಿಷಾದ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments