ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಅವರು ಮೋದಿಯ ಹೆಸರನ್ನು ಒಮ್ಮೆಯೂ ಬಳಸಲಿಲ್ಲ ಮತ್ತು ಮೋದಿ ಅಲೆಯ ಬಗ್ಗೆ ಉಲ್ಲೇಖಿಸಲಿಲ್ಲ. ದೇಶದಲ್ಲಿ ಪರಿವರ್ತನೆಯ ಅಲೆಯಿದೆ. ಎನ್ಡಿಎಯ ಅಲೆಯಿದೆ. ದೇಶದಲ್ಲಿ ಎನ್ಡಿಎ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಅವರು ತಿಳಿಸಿದರು.
ಮೋದಿ ಅಲೆ ಮತ್ತು ಗುಜರಾತ್ ವಿಕಾಶದ ಮಾದರಿಯನ್ನು ಅಲ್ಲಗಳೆದಿದ್ದ ಮುರಳಿ ಮನೋಹರ ಜೋಶಿ ಮಾತಿಗೆ ಪ್ರತಿಕ್ರಿಯಿಸುವಂತೆ ಕೇಳಿದಾಗ ಅದಕ್ಕೆ ನೇರ ಉತ್ತರ ನೀಡದೆ, ಬಿಜೆಪಿ ಮತ್ತು ಮೋದಿ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ದೇವಕಾಂತ್ ಬರುವಾ ಅವರ ಇಂದಿರಾ 'ಈಸ ಇಂಡಿಯಾ, ಇಂಡಿಯಾ ಈಸ ಇಂದಿರಾ' ಎಂಬ ಘೋಷವನ್ನು ನೆನಪಿಸಿದಾಗ ನಾವು 'ಮೋದಿ ಈಸ ಇಂಡಿಯಾ, ಇಂಡಿಯಾ ಈಸ ಮೋದಿ' ಎಂದು ಎಂದಿಗೂ ಹೇಳಿಲ್ಲ ಎಂದು ಹೇಳಿದರು.
ಉಲ್ಲೇಖನೀಯವಾದ ವಿಷಯವೇನೆಂದರೆ ರಾಜನಾಥ ಸಿಂಗ್ರವರ ಕಣ್ಣು ಕೂಡ ಪ್ರಧಾನಿ ಸ್ಥಾನದ ಮೇಲೆ ಇದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಅಂತ ಅವಕಾಶ ಸಿಕ್ಕಿದರೆ ಅವರದನ್ನು ತಪ್ಪಿಸಿಕೊಳ್ಳಲಾರರು. ಅಲ್ಲದೇ ಅವರ ಕೆಲವು ನಿರ್ಣಯಗಳ ಬಗ್ಗೆ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿತ್ತು. ಹಿರಿಯ ನಾಯಕ ಜಸವಂತ್ ಸಿಂಗ್ರಿಗೆ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಬೇಸರಗೊಂಡಿದ್ದ ಡಾ. ಮುರಳಿ ಮನೋಹರ ಜೋಶಿ, ಇದಕ್ಕೆ ವಸುಂಧರಾ ಜತೆ ರಾಜನಾಥ್ ಕೂಡ ಕಾರಣ ಎಂದು ಆಪಾದಿಸಿದ್ದರು.