" ನಾನು ರಾಜಕಾರಣದ ಅಪರಾಧೀಕರಣದಿಂದ ದುಃಖಿತನಾಗಿದ್ದೇನೆ, ಇದಕ್ಕೆ ಕಾಂಗ್ರೆಸ್ ಸಂಪೂರ್ಣ ಜವಾಬ್ದಾರಿಯಾಗಿದೆ. ಹೇಗಾದರೂ ಮಾಡಿ ಅಧಿಕಾರವನ್ನು ಹಿಡಿದಿಟ್ಟುಕೊಳ್ಳುವ ಧಾವಂತದಲ್ಲಿ ಅದು ಅಪರಾಧಿಗಳನ್ನು ಬಳಸಿಕೊಳ್ಳಲು ಪ್ರಾರಂಭಿಸಿತು. ನಂತರ ಆ ಅಪರಾಧಿಗಳು ಪ್ರಬಲರಾಗಿ ರಾಜಕೀಯ ನಾಯಕರಾದರು. ಇಂತಹ ಅಪರಾಧಿಗಳಿಂದ ನಮ್ಮ ವ್ಯವಸ್ಥೆಯನ್ನು ಮುಕ್ತವಾಗಿಸಬೇಕು".
" ವ್ಯವಸ್ಥೆಯನ್ನು ಶುದ್ಧಗೊಳಿಸಲು ನನಗೆ ಒಂದು ಅವಕಾಶ ಕೊಡಿ. ಅಪರಾಧಿ ಸಂಸದರ ಮತ್ತು ಶಾಸಕರ ವಿಚಾರಣೆ ನಡೆಸಲು ಅನುಕೂಲವಾಗುವಂತೆ ನಾನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಶೇಷ ನ್ಯಾಯಾಲಯಗಳನ್ನು ನಿರ್ಮಿಸುತ್ತೇನೆ ಮತ್ತು ಕೇವಲ ಒಂದು ವರ್ಷದೊಳಗೆ ಕೇಸ್ನ್ನು ಮುಗಿಸಿ, ಅಪರಾಧಿಗಳೆಂದು ಸಾಬೀತಾದರೆ ಅವರನ್ನು ಜೈಲಿಗೆ ಕಳುಹಿಸಲಾಗುವುದು" ಎಂದು ಮೋದಿ ತಿಳಿಸಿದ್ದಾರೆ.