Select Your Language

Notifications

webdunia
webdunia
webdunia
webdunia

ಗಡ್ಕರಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ: ಉದ್ಧವ್ ವಾಗ್ದಾನ

ಗಡ್ಕರಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ: ಉದ್ಧವ್ ವಾಗ್ದಾನ
ಮುಂಬೈ , ಬುಧವಾರ, 19 ಮಾರ್ಚ್ 2014 (20:06 IST)
PTI
ನಾಗ್ಪುರ ಕ್ಷೇತ್ರದಿಂದ ತನ್ನ ಮೊದಲ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿರುವ ಸ್ಪರ್ಧಿಸುತ್ತಿರುವ ಮಾಜಿ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧ ಡಮ್ಮಿ ಅಭ್ಯರ್ಥಿಯನ್ನು ಶಿವಸೇನೆ ಕಣಕ್ಕಿಳಿಸುತ್ತಿದೆ ಎಂಬ ವರದಿಯನ್ನು ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಅಲ್ಲಗೆಳೆದಿದ್ದಾರೆ.

ತನ್ನ ನಿವಾಸ ಮಾತೋಶ್ರೀಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಉದ್ಧವ್ ಮಾತನಾಡಿ, "ಗಡ್ಕರಿ ಸ್ಪರ್ಧೆಯ ಬಗ್ಗೆ ನಾವು ನಮ್ಮ ನಿಲುವನ್ನು ವ್ಯಕ್ತಪಡಿಸಿದ್ದೇವೆ. ಪರಿಸ್ಥಿತಿ ನಮಗೆ ವಿರುದ್ಧವಾದಾಗ ನಾವು ಮಾತನಾಡುತ್ತೇವೆ. ಆದರೆ, ನಾವು ಚುನಾವಣೆಯಲ್ಲಿ ಅವರಿಗೆ (ಗಡ್ಕರಿ) ವಿಶ್ವಾಸಘಾತ ಮಾಡುವುದಿಲ್ಲ " ಎಂದು ಹೇಳಿದ್ದಾರೆ.

ಶಿವಸೇನೆಯಿಂದ ಗಡ್ಕರಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರಾ ಎಂಬ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಚುನಾವಣೆಗೆ ಸಂಬಂಧಿಸಿದಂತೆ ಗಡ್ಕರಿಯ ಇತ್ತೀಚಿನ ಕೆಲವು ಪ್ರಸ್ತಾಪಗಳು ಶಿವಸೇನೆಯ ನಾಯಕನಿಗೆ ಕೋಪಗೊಳ್ಳುವಂತೆ ಮಾಡಿದ್ದವು. ಅವರು ಬಿಜೆಪಿಗೆ "ಮೈತ್ರಿ ಧರ್ಮ" ವನ್ನು ಅನುಸರಿಸುವಂತೆ ಕರೆ ನೀಡಿದ್ದರು.

Share this Story:

Follow Webdunia kannada