ಅಮೇಥಿಯಲ್ಲಿ ಆಪ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕುಮಾರ್ ವಿಶ್ವಾಸ್ ಮೇಲೆ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.
ಆಪ್ ನಾಯಕ ಮತ್ತು ಅವರ ಬೆಂಬಲಿಗರ ಮೇಲೆ 144ನೇ ಅನುಚ್ಛೇದವನ್ನು ಮೀರಿದ್ದಕ್ಕಾಗಿ ಕೂಡ ಪ್ರಕರಣವನ್ನು ದಾಖಲಿಸಿಲಾಗಿದ್ದು ಪೋಲಿಸರು ಮುಂದಿನ ಕ್ರಮವನ್ನು ಕೈಗೊಳ್ಳಲಿದ್ದಾರೆ. ಶುಕ್ರವಾರ ಕುಮಾರ್ ಬಿಸ್ವಾಸ್ ಅವರು ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿಯವರ ಮೇಲೆ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸುತ್ತ ಗೌರಿಗಂಜ್ ಠಾಣೆಯ ಹೊರಗೆ ಪ್ರತಿಭಟನೆಗೆ ಕುಳಿತಿದ್ದರು. ಅವರ ದೂರಿನನ್ವಯ ಪೋಲಿಸರು ಕಾಂಗ್ರೆಸ್ ಬೆಂಬಲಿಗರಾದ ವಿನೋದ್ ಕುಮಾರ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.ತಮ್ಮ ಪ್ರಾಣಕ್ಕೆ ಅಪಾಯವಿದೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಹತ್ತಿರದವರೊಬ್ಬರು ನನ್ನ ಪ್ರಾಣ ತೆಗೆಯುವ ಬೆದರಿಕೆ ಒಡ್ಡಿದ್ದಾರೆ ಎಂದು ವಿಶ್ವಾಸ್ ದೂರಿದ್ದರು. ಅವರ ದೂರಿನ ಪ್ರಕಾರ ಕಾಂಗ್ರೆಸ್ ಬೆಂಬಲಿಗರೊಬ್ಬರ ಮೇಲೆ ಕೇಸ್ ದಾಖಲಿಸಲಾಗಿದೆ.