" ನಮ್ಮ ಸೈನಿಕರು ದೇಶವನ್ನು ರಕ್ಷಿಸಲು ದಿನ-ರಾತ್ರಿ ಕ್ರಿಯಾಶೀಲರಾಗಿರುತ್ತಾರೆ. ಶತ್ರುಗಳು ಅವರ ತಲೆಯನ್ನು ಕತ್ತರಿಸಿ ಹಾಕುತ್ತಾರೆ. ಆದರೆ ಅವರಿಗೆ ಸಮರ್ಥ ಉತ್ತರ ನೀಡಲು ಕಾಂಗ್ರೆಸ್ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಭಿವಾನಿ ಮಹೇಂದ್ರಗಡ ಲೋಕಸಭಾ ಸ್ಥಾನದಿಂದ ಕಣಕ್ಕಿಳಿದಿರುವ ಧರಮವೀರ ಸಿಂಗ್ ಪರ ಪ್ರಚಾರ ನಡೆಸಿ ಅವರು ಮಾತನಾಡುತ್ತಿದ್ದರು. ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಧಾನಿಯಾದರೆ ಯಾವ ಶತ್ರುಗಳು ಕೂಡ ಭಾರತದ ಕಡೆ ನೋಡುವ ಧೈರ್ಯ ಕೂಡ ಮಾಡುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಹರಿಯಾಣದಲ್ಲಿ ಜನಹಿತ ಕಾಂಗ್ರೆಸ್ ಜತೆ ಬಿಜೆಪಿಯ ಮೈತ್ರಿ ಬದಲಾಗಿಲ್ಲ ಎಂದ ಅವರು ಕೊನೆಯಲ್ಲಿ ಮುಖ್ಯ ಮಂತ್ರಿ ಬನಾರಸಿ ದಾಸ್ ಗುಪ್ತರವರ ಮಗ ಅಜಯ್ ಗುಪ್ತಾರವರನ್ನು ಪಕ್ಷಕ್ಕೆ ಸ್ವಾಗತಿಸಿದರು.