ನಾಲ್ಕು ಸಲ ಕಾಂಗ್ರೆಸ್ಸಿಂದ ಸಂಸದರಾಗಿ ಆಯ್ಕೆಯಾಗಿದ್ದ ತೋಮರ ಪಕ್ಷ ತ್ಯಜಿಸಿದ್ದು, ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಮೂಲಕ ಕಾಂಗ್ರೆಸ್ ಸುಲಭವಾಗಿ ಗೆಲ್ಲಲಿದ್ದ ಸ್ಥಾನವನ್ನು ಕಳೆದು ಕೊಂಡಂತಾಗಿದೆ. ಉಲ್ಲೇಖನೀಯ ವಿಷಯವೇನೆಂದರೆ ನೊಯ್ಡಾದಲ್ಲಿ ನಾಮಪತ್ರವನ್ನು ವಾಪಸ್ ಪಡೆಯುವ ಕೊನೆಯ ದಿನವೂ ಕೂಡ ಮುಗಿದು ಹೋಗಿದೆ.
ಈ ಕ್ಷೇತ್ರದಿಂದ ಬಿಜೆಪಿಯ ಮಹೇಶ ಶರ್ಮಾ, ಆಪ್ನ ಕೆ.ಪಿ. ಸಿಂಹ್, ಬಿಎಸ್ಪಿಯ ಸುರೇಂದ್ರ ನಾಗರ್ ಮತ್ತು ಸಮಾಜವಾದಿ ಪಕ್ಷದಿಂದ ನರೇಂದ್ರ ಭಾಟಿ ಕಣಕ್ಕಿಳಿಯುತ್ತಿದ್ದಾರೆ.