ಹೃದಯಾಘಾತ ಹೆಚ್ಚಾಗಲು ಕಾರಣವೇನು: ಡಾ ಸಿಎನ್ ಮಂಜುನಾಥ್ ಹೇಳುವುದೇನು

Krishnaveni K
ಸೋಮವಾರ, 14 ಜುಲೈ 2025 (10:14 IST)
ಭಾರತದಲ್ಲಿ ಇತ್ತೀಚೆಗಿನ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿವೆ. ಇದರ ನಡುವೆ ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಅವರು ಸಂವಾದವೊಂದರಲ್ಲಿ ಹೇಳಿದ ಈ ಮಾತು ಭಾರತದಲ್ಲಿ ಹೃದಯಾಘಾತ ಹೆಚ್ಚಲು ಕಾರಣವೇನು ಎಂದು ತಿಳಿಸುತ್ತದೆ.

ಡಾ ಸಿಎನ್ ಮಂಜುನಾಥ್ ಹೇಳುವ ಪ್ರಕಾರ ದೇಹ ಐಸ್ ಕ್ರೀಂ ಇದ್ದಂಗೆ. ತಿಂದರೂ ಕರಗುತ್ತದೆ, ತಿನ್ನದೇ ಇದ್ದರೂ ಕರಗುತ್ತೆ.  ಆದರೆ ನಮ್ಮ ದೇಹ ಸರಿಯಾದ ರೀತಿಯಲ್ಲಿ ಕರಗಬೇಕು. ಅಂದರೆ ಮಾತ್ರ ನಮ್ಮ ದೇಹ, ಹೃದಯ ಆರೋಗ್ಯವಾಗಿರಲು ಸಾಧ್ಯ.

ದಿನಕ್ಕೆ ಮುಕ್ಕಾಲು ಗಂಟೆಯಷ್ಟಾದರೂ ನಡೆಯಬೇಕು. ನಾವು ತಿಂದ ಆಹಾರವನ್ನು ಸರಿಯಾದ ರೀತಿಯಲ್ಲಿ ಜೀರ್ಣಿಸಿಕೊಳ್ಳುವುದು ಮುಖ್ಯವಾಗುತ್ತದೆ ಎನ್ನುತ್ತಾರೆ ಅವರು. ಎಲ್ಲಕ್ಕಿಂತ ದೊಡ್ಡ ಶತ್ರು ಎಂದರೆ ನಮ್ಮ ಕೋಪ, ಒತ್ತಡ.

ನೀವು ಯಾರ ಮೇಲಾದರೂ ಕೋಪ ಬಂದಾಗ ಸರಿಯಾಗಿ ದಬಾಯಿಸಿಬಿಡುತ್ತೀರಿ. ನಿಮಗೂ ಮನಸ್ಸಿನಲ್ಲಿದ್ದ ಸಿಟ್ಟನ್ನೆಲ್ಲಾ ಹೊರಹಾಕಿದ ತೃಪ್ತಿ ಇರಬಹುದು. ಆದರೆ ನೀವು ಬೈದಾಗ ಅದರ ನೇರ ಪರಿಣಾಮವಾಗುವುದು ನಿಮಗೇ ಎನ್ನುವುದನ್ನು ಮರೆಯಬಾರದು. ಸಿಟ್ಟು ಮಾಡಿಕೊಂಡಾಗ ಸಹಜವಾಗಿಯೇ ಬ್ಲಡ್ ಪ್ರೆಷರ್ ಹೆಚ್ಚಾಗುತ್ತದೆ. ಇದು ನೇರವಾಗಿ ಪರಿಣಾಮ ಬೀರುವುದು ನಿಮ್ಮ ಹೃದಯಕ್ಕೆ. ಹೀಗಾಗಿ ಆದಷ್ಟು ಶಾಂತವಾಗಿ ಮತ್ತು ಸಂತೋಷದಿಂದ ಕಾಲ ಕಳೆಯುವುದನ್ನು ನೋಡಬೇಕು ಎನ್ನುತ್ತಾರೆ ಅವರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಯಂತ್ರಣ ತಪ್ಪಿ ಪಲ್ಟಿಯಾದ ಕೆಎಸ್‌ಆರ್‌ಟಿಸಿ ಬಸ್‌, ಕಂಡಕ್ಟರ್‌ ನಿಧನ

ದಿತ್ವಾ ಚಂಡಮಾರುತ ಪರಿಣಾಮ, ಶ್ರೀಲಂಕಾದ 764 ಧಾರ್ಮಿಕ ಸ್ಥಳಗಳಿಗೆ ಹಾನಿ

ಸೋನಿಯಾ ಗಾಂಧಿಗೆ ಪೌರತ್ವ ಸಿಗುವ ಮೊದಲು ವೋಟ್ ಹಾಕಿದ್ದಕ್ಕೆ ಕೋರ್ಟ್ ನೋಟಿಸ್

ಮಹಿಳೆಯರಿಗೆ ಋತುಚಕ್ರದ ರಜೆ ನೀಡಿದ್ದ ಸರ್ಕಾರಕ್ಕೆ ಶಾಕ್ ನೀಡಿದ ಹೈಕೋರ್ಟ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments